2025ರ ಸಿಇಟಿ ಪರೀಕ್ಷೆಯ ದಿನಾಂಕ ಪ್ರಕಟ

2025ರ ಸಿಇಟಿ ಪರೀಕ್ಷೆಯ ದಿನಾಂಕ ಪ್ರಕಟವೀರಮಾರ್ಗ ನ್ಯೂಸ್ ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025ರ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಏಪ್ರಿಲ್ 15ರಿಂದ 17ವರೆಗೆ ಸಿಇಟಿ ಪರೀಕ್ಷೆ ನಡೆಯಲಿದೆ.ಸಿಇಟಿ ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆಯಾಗಿದೆ. ಈ ಹಿಂದೆ ಏಪ್ರಿಲ್ 18ಕ್ಕೆ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಏಪ್ರಿಲ್ 18ರಂದು ಗುಡ್ ಪ್ರೈಡೇ ಇರುವುದರಿಂದ ಸರ್ಕಾರ ಪರೀಕ್ಷೆ ದಿನಾಂಕವನ್ನು ಬದಲಾಯಿಸಿದೆ. ಏಪ್ರಿಲ್ 15 ರಂದು ಕನ್ನಡ ಪರೀಕ್ಷೆ ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ…

Read More

ಹಾವೇರಿ-ಗದಗ-ದಾವಣಗೆರೆ ಸೇರಿರಾಜ್ಯದ 31 ಜಿಲ್ಲಾ ಪಂಚಾಯಿತಿಗಳಿಗೆ 4096 ಕೋಟಿ ರೂ. ಬಿಡುಗಡೆ

ಹಾವೇರಿ-ಗದಗ-ದಾವಣಗೆರೆ ಸೇರಿರಾಜ್ಯದ 31 ಜಿಲ್ಲಾ ಪಂಚಾಯಿತಿಗಳಿಗೆ 4096 ಕೋಟಿ ರೂ. ಬಿಡುಗಡೆ ವೀರಮಾರ್ಗ ನ್ಯೂಸ್ ಬೆಂಗಳೂರು : ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ವಿವಿಧ ಯೋಜನೆಗಳಿಗೆ 2025-26ನೇ ಸಾಲಿನ ಮೊದಲ ಕಂತಾಗಿ 4 ತಿಂಗಳ ಅವಧಿಗೆ 4096 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.2025-26ನೇ ಸಾಲಿನ ಬಜೆಟ್ ಘೋಷಣೆಯನ್ವಯ ಹಣಕಾಸು ಇಲಾಖೆ ಈ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಏಕೀಕೃತ ನಿಧಿಯಿಂದ ಈ ಹಣ ಮಾಡಲಾಗಿದ್ದು, ಈ ಬಿಡುಗಡೆಯು ಮುಂದಿನ 4 ತಿಂಗಳ ಅವಧಿಯ ವೆಚ್ಚಕ್ಕಾಗಿ…

Read More

ರಾಜ್ಯದ ೧೦ ಕಡೆ ಇಡಿ ದಾಳಿ

ರಾಜ್ಯದ ೧೦ ಕಡೆ ಇಡಿ ದಾಳಿವೀರಮಾರ್ಗ ನ್ಯೂಸ್ ಬೆಂಗಳೂರು : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಾಂತರ ರೂಗಳ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಶುಕ್ರವಾರ ರಾಜ್ಯದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.ಬೆಂಗಳೂರು, ಶಿವಮೊಗ್ಗ ಸೇರಿದಂತೆ ೧೦ಕ್ಕೂ ಹೆಚ್ಚು ಕಡೆಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ, ನಿರ್ದೇಶಕರ ಕಚೇರಿ, ನಿವಾಸ ಸೇರಿ ಹಲವೆಡೆ ದಾಳಿ ನಡೆಸಿದ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ಕೈಗೊಂಡಿದ್ದಾರೆ.ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ…

Read More

ವಕ್ಫ್ ತಿದ್ದುಪಡಿ ವಿಧೇಯಕವು ದುರ್ಬಲ ಜನರಿಗೆ ವರದಾನವಾಗಲಿದೆ : ದೇವೇಗೌಡರು

ವಕ್ಫ್ ತಿದ್ದುಪಡಿ ವಿಧೇಯಕವು ದುರ್ಬಲ ಜನರಿಗೆ ವರದಾನವಾಗಲಿದೆ : ದೇವೇಗೌಡರುವೀರಮಾರ್ಗ ನ್ಯೂಸ್ ನವದೆಹಲಿ : ವಕ್ಫ್ ತಿದ್ದುಪಡಿ ವಿಧೇಯಕವು ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರತಿಪಾದಿಸಿದ್ದಾರೆ.ರಾಜ್ಯಸಭೆಯಲ್ಲಿ ನಿನ್ನೆ ವಿಧೇಯಕ ಕುರಿತು ಮಾತನಾಡಿದ ಅವರು, ದೇಶದಲ್ಲಿರುವ ವಕ್ಫ್ ಬೋರ್ಡ್‌ಗಳ ಆಸ್ತಿ ಸುಮಾರು ೧.೨ ಲಕ್ಷ ಕೋಟಿ ಬೆಲೆ ಬಾಳುತ್ತದೆ. ಇಂತಹ ಬೆಲೆ ಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ…

Read More

ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪ

ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಜಂಗೀ ಬಯಲು ಅಂತಿಮ ಕುಸ್ತಿ ಪಂದ್ಯಾವಳಿಯಲ್ಲಿ ಮಾಸೂರಿನ ರೋಷನ್ ಗೆಲುವಿನ ಮಾಲೆ ತನ್ನದಾಗಿಸಿಕೊಂಡರೆ, ದ್ವಿತೀಯ ಸ್ಥಾನ ಕರಡಿಕೊಪ್ಪದ ಪ್ರಥಮ ಅವರಿಗೆ ಲಭಿಸಿದೆ.ಮಾಸೂರಿನ ರೋಷನ್ ಹಾಗು ಕರಡಿಕೊಪ್ಪದ ಪ್ರಥಮ ಅಂತಿಮ ಪಂದ್ಯದ ಅಖಾಡಕ್ಕೀಳಿದಾಗ ಕುಸ್ತಿ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಂಡು ಕೇಕೆ, ಶಿಳ್ಳೆ, ಚಪ್ಪಾಳೆ ಹೋಡೆಯೂವಮೂಲಕ ಕುಸ್ತಿ…

Read More

ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ

ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ೪೯೫ ನೇ ಹಾಗು ಶ್ರೀ ಬಸವಣ್ಣೇಂದ್ರ ಸ್ವಾಮೀಜಿ ಯವರ ೪೨೦ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏ. ೫ ರಿಂದ ಏ.೭ ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಏ.೫ ಶನಿವಾರ ಪ್ರಾಥ:ಕಾಲ ಜೇಕಿನಕಟ್ಟಿ ಗ್ರಾಮದ ಪ್ರಭಯ್ಯನವರಮಠದ ಸದ್ಭಕ್ತರಿಂದ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಸಂಜೆ ೭ ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಬಂಕಾಪುರ ದೇಸಾಯಿಮಠದ ಶ್ರೀ…

Read More

ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀ

ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ಮನುಷ್ಯರಲ್ಲಿ ದೇವತ್ವದ ಭಾವಮೂಡಿ, ಪರೋಪಕಾರ ಮೈಗೂಡಿಸಿಕೊಂಡು, ನಡೆ, ನುಡಿ ಶುದ್ಧವಾಗಿಟ್ಟುಕೊಂಡು ನಡೆಯುವಾತನ ಜೀವನ ಪಾವನವಾಗಲು ಸಾಧ್ಯವಿದೆ ಎಂದು ಹತ್ತಿಮತ್ತೂರಿನ ವೀರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಮಹಾ ಸ್ವಾಮಿಗಳು ನುಡಿದರು.ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ೨ ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದರು. ಭಾರತ ನಿಜವಾಗಲೂ ಸರ್ವಜನಾಂಗದವರಿಗೆ ಆಶ್ರಯನೀಡುವ ಶಾಂತಿಯ ಹೂದೊಟವಾಗಿದೆ. ಭಾರತದಲ್ಲಿ ವಾಸಿಸುವ ಹಿಂದು,…

Read More

ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆ

ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆವೀರಮಾರ್ಗ ನ್ಯೂಸ್ ಗದಗ : ನರಗುಂದ ಪುರಸಭೆ ವ್ಯಾಪ್ತಿಯ ಆಸ್ತಿಗಳ ಮಾಲೀಕರುಗಳಿಗೆ / ಅನುಭೋಗದಾರರಿಗೆ ತಿಳಿಸುವುದೇನೆಂದರೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ಸುತ್ತೋಲೆಯಂತೆ 2025-26 ನೇ ಸಾಲಿಗೆ ಈ ಕೆಳಗಿನಂತೆ ಆಸ್ತಿ ತೆರಿಗೆ ದರಗಳನ್ನು ಖಾಲಿ ನಿವೇಶನ-ಶೇ 3, ವಸತಿ ಕಟ್ಟಡಗಳು-ಶೇ 3, ವಾಣಿಜ್ಯ & ಕೈಗಾರಿಕೆ ಕಟ್ಟಡಗಳು-ಶೇ.4 ರಂತೆ ಪರಿಷ್ಕರಣೆ ಮಾಡಿದೆ. ದಿನಾಂಕ : 01-04-2025 ರಿಂದ 30-04-2025 ವರೆಗೆ ಶೇ.5 ರಿಯಾಯಿತಿ, ದಂಡ ರಹಿತ ಪಾವತಿ ದಿನಾಂಕ…

Read More

ಮಹಿಳೆ & ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲು ಕ್ರಮ : ಡಿಸಿ ಶ್ರೀಧರ

ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಮಹಿಳೆ & ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲು ಕ್ರಮ : ಡಿಸಿ ಶ್ರೀಧರವೀರಮಾರ್ಗ ನ್ಯೂಸ್ ಗದಗ : ಸರಕಾರದಿಂದ ಮಹಿಳಾ & ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ…

Read More

ಅರಿವು ಆಚರಣೆಯಿಂದ ಬಾಳು ಸಾರ್ಥಕ : ರಂಭಾಪುರಿಶ್ರೀ

ಅರಿವು ಆಚರಣೆಯಿಂದ ಬಾಳು ಸಾರ್ಥಕ : ರಂಭಾಪುರಿಶ್ರೀವೀರಮಾರ್ಗ ನ್ಯೂಸ್ ಕಾಳಗಿ : ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಮಹಾತ್ಮರ ಸಂದೇಶಗಳು ಎಲ್ಲರಿಗೂ ದಾರಿದೀಪ. ಅರಿವು ಮತ್ತು ಆಚರಣೆಯಿಂದ ಬಾಳು ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶುಕ್ರವಾರ ತಾಲೂಕಿನ ಹದನೂರು ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ 10ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ…

Read More