ತಹಶೀಲ್ದಾರ ಪ್ಲಾಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ ಅನ್ಯಾಯ ಮಾಡಿದಂತಾಗುತ್ತದೆ : ಶಾಸಕ ಪಠಾಣ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಬಂಕಾಪುರ ಪಟ್ಟಣದ ಗೌಸ್ ಮೊದಿನ ತಹಶೀಲ್ದಾರ ಲೇಔಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ, ಅನ್ಯಾಯಮಾಡಿದಂತಾಗುತ್ತದೆ. ಸರ್ಕಾರಕ್ಕೆ ಬರಿಸಬೇಕಾದ ಹಣಭರಿಸಿ ಪ್ಲಾಟ್ ಖರೀದಿ ಮಾಡಿದವರಿಗೆ ಇಸ್ವತ್ತು ಉತಾರ ಪುರೈಸಲು ಕ್ರಮ ಕೈಗೋಳ್ಳಲಾಗುವುದು ಎಂದು ಶಾಸಕ ಯಾಸೀರಹಮ್ಮದಖಾನ ಪಠಾಣ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ಲಾಟ್ ಮಾಲಕರು ಉಧ್ಯಾವನಕ್ಕೆ ಬಿಡಲಾದ ಸೈಟ್ನ್ನು ಮಾರಾಟಮಾಡಿದ್ದಾರೆ. ಅದರ ಬದಲಾಗಿ ಬೇರೆ ಸೈಟ್ನ್ನು ಉಧ್ಯಾವನಕ್ಕೆ ನೀಡಲಾಗಿದೆ. ಸಮಸ್ಯ ಇರುವುದು ಎರಡು ಸೈಟ್ಗಳ ಮಧ್ಯ, ಆ ಕಾರಣ ಇಟ್ಟುಕೊಂಡು ೨೪೦ ಸೈಟ್ ಖರೀದಾರರಿಗೆ ಉತಾರ ಪುರೈಸದೇ ಇರುವುದು ಯಾವ ನ್ಯಾಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ತಹಶೀಲ್ದಾರ ಪ್ಲಾಟ್ ಖರೀದಿದಾರರಿಗೆ ಕಾನೂನಾತ್ಮಕವಾಗಿ ನಾನೇ ಮುಂದೆ ನಿಂತು ಉತಾರ ಪುರೈಸುವ ಬರವಸೆ ನೀಡಿದರು.
ಬಂಕಾಪುರ, ಸವಣೂರ, ಶಿಗ್ಗಾವಿ ಪಟ್ಟಣಗಳಿಗೆ ಶಾಸ್ವತ ಕುಡಿಯುವ ನೀರನ್ನು ವದಗಿಸಲು, ತವರಮೇಳ್ಳಿಹಳ್ಳಿ, ಮೋತಿತಲಾಬ್, ನಾಗನೂರ ಕೆರೆ ಜಾಕ್ವೆಲ್ ಗಳ ಅಭಿವೃದ್ಧಿಗೆ ೩ ನೂರು ಕೋಟಿ ರೂಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ೩೦ ಕೋಟಿ ರೂ ವೆಚ್ಚದಲ್ಲಿ ಮಲ್ಲಪ್ಪನ ಕೆರೆ ಅಭಿವೃದ್ಧಿಪಡೆಸುವ ಗುರಿಹೊಂದಲಾಗಿದೆ. ಸುಂಕದಕೇರಿ ದುರ್ಗಾದೇವಿ ಹೊಂಡವನ್ನು ೨ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡೆಸಲಾಗುವುದು. ಪಶು ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾದ ಇಂಧಿರಾ ಕ್ಯಾಂಟಿನ್ ಪ್ರಾರಂಭಿಸಿ ಕೂಲಿ ಕಾರ್ಮಿಕರಿಗೆ ಆಟೋಚಾಲಕರಿಗೆ, ಬಡ ಬಗ್ಗರಿಗೆ ರಿಯಾತಿದರದಲ್ಲಿ ಊಟ, ಉಪಹಾರ ಸೇವೆ ಕಲ್ಪಿಸಲಾಗುವುದು. ಬರುವ ದಿನಗಳಲ್ಲಿ ಸಮೂದಾಯ ಆರೋಗ್ಯ ಕೇಂದ್ರದ ಕ್ವಾಟರ್ಸ ನಿರ್ಮಾಣ, ನಾಡಕಚೇರಿ ಅಭಿವೃದ್ಧಿ, ಕ್ರೀಡಾಂಗಣ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ಧಿಗೋಸ್ಕರ್ ಯಾವುದೇ ಟೆಂಡರ್ ಗಳಿಗೆ, ತಡೆ ನೀಡಬಾರದು. ಟೆಂಡರ್ ದಾರರಿಂದ ಕ್ರೀಯಾ ಯೋಜನೆ ಪ್ರಕಾರ ಕೇಲಸ ಪಡೆಯುವಂತೆ ಸಲಹೆ ನೀಡಿದರು. ಸಭೆಯಲ್ಲಿ ಜಮಾ ಖರ್ಚು ವಿಷಯಕ್ಕೆ ಮಂಝುರು, ೨೦೨೫-೨೬ ನೇ ಸಾಲಿನ ಆಯ ವ್ಯಯ ಅಂದಾಜು ಪತ್ರಿಕೆಗೆ ಅನುಮೊದನೆ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆ, ಎಸ್.ಎಫ.ಸಿ. ವಿಶೇಷ ಅನುದಾನದ ಬಳಕೆ, ಪಟ್ಟಣದಲ್ಲಿ ಸಿಪಿಎಚ್ಸಿ-ಯುಹೆಚ್ಸಿ ಕಾರ್ಯಕ್ರಮದಡಿ ಆಯುಷ್ಮಾನ ಆರೋಗ್ಯ ಮಂದಿರ ನಿರ್ಮಾಣಕ್ಕೆ ಬೇಕಾದ ನಿವೇಶನ ಮಂಜೂರು ಮಾಡುವ ಬಗ್ಗೆ, ದಿ.ಮಾಡರ್ನ ಹೈಸ್ಕೂಲ್ ಗೆ ನಿವೇಶನ, ಅಂಗನವಾಡಿ, ವಾಲ್ಮೀಕಿ ಹಾಗು ಭೋವಿ ಸಮಾಜದ ಸಮೂದಾಯ ಭವನಕ್ಕೆ ನಿವೇಶನ ನೀಡುವ ಕುರಿತು ಚರ್ಚಿಸಿ ಸದಸ್ಯರಿಂದ ಅನುಮೊದನೆ ಪಡೆಯಲಾಯಿತು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಮುಖ್ಯಾಧಿಕಾರಿ, ಶಿವಾನಂದ ಅಜ್ಜಣ್ಣವರ, ಸ್ಥಾಯಿ ಸಮೀತಿ ಅಧ್ಯಕ್ಷ ಅಯೂಬಖಾನ ಪಠಾಣ, ಸಿ.ಪಿ.ಐ. ಅನೀಲ್ ಕುಮಾರ ರಾಠೋಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯರು, ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಹಶೀಲ್ದಾರ ಪ್ಲಾಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ ಅನ್ಯಾಯ ಮಾಡಿದಂತಾಗುತ್ತದೆ : ಶಾಸಕ ಪಠಾಣ
