ಮಲಗಿದ್ದ ಮಹಿಳೆಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ.
ವೀರಮಾರ್ಗ ನ್ಯೂಸ್ : ಮನೆಯಲ್ಲಿ ಮಲಗಿದ್ದ ವಿವಾಹಿತ ಮಹಿಳೆಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಡಾವಣೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರದೊಂದಿಗೆ ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಸರಗಳ್ಳತನಕ್ಕಾಗಿ ನಡೆದ ಕೊಲೆ ಎಂದು ಬಿಂಬಿತವಾಗುತ್ತಿದ್ದರೂ, ಮೃತಳ ಪೋಷಕರು ಮಾತ್ರ ಇದು ಗಂಡನ ಮನೆಯವರೇ ಸ್ಕೆಚ್ ಹಾಕಿ ಮಾಡಿಸಿರುವ ‘ವ್ಯವಸ್ಥಿತ ಸುಪಾರಿ ಕೊಲೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಧ್ಯರಾತ್ರಿ ನಡೆದಿದ್ದೇನು? ಒಳನುಗ್ಗಿದ ದರೋಡೆಕೋರರು!ಸ್ಥಳೀಯ ಮೇಸ್ತ್ರಿ ನರಸಿಂಹಮೂರ್ತಿ ಎಂಬುವರ…