ಕಬ್ಬಿಗೆಬೆಲೆ,ಉತ್ತರಕರ್ನಾಟಕದಲ್ಲಿ ಒಂದೇ ದರ ಮಾಡಿ…
“ಕಬ್ಬಿಗೆ ಬೆಲೆ ಉತ್ತರ ಕರ್ನಾಟಕದಲ್ಲಿ ಒಂದೇ ದರ ಮಾಡಿ “ ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ತಾಲೂಕ್ ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಬೃಹತ್ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಇಂತಿವೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಬೇಕು, ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಮಾಡಿಕೊಡಬೇಕು, ಕಾರ್ಖಾನೆಯವರು ಉಳಿಸಿಕೊಂಡಿರುವ ಬಾಕಿ ಹಣ ಕೊಡಿಸಬೇಕು, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಯಾಗಬೇಕು, ಈ ವರ್ಷ…
ಹಾಸ್ಟೆಲ್ನಲ್ಲಿ ದಾರುಣ ಅಂತ್ಯ ಕಂಡ ಪ್ರತಿಭಾವಂತ ವಿದ್ಯಾರ್ಥಿನಿ!
ವೀರಮಾರ್ಗ ನ್ಯೂಸ್ : ದಾವಣಗೆರೆ ಟಿಮ್ ಅಕಾಡೆಮಿ ಕಾಲೇಜು ಹಾಸ್ಟೆಲ್ನಲ್ಲಿ ದಾರುಣ ಅಂತ್ಯ ಕಂಡ ಪ್ರತಿಭಾವಂತ ವಿದ್ಯಾರ್ಥಿನಿ! ಈಗಷ್ಟೇ ಸೆಕೆಂಡ್ ಪಿಯುಸಿಗೆ ಕಾಲಿಟ್ಟು, ಕಣ್ಣ ತುಂಬಾ ಹತ್ತಾರು ಕನಸುಗಳನ್ನು ಹೊತ್ತು ಹೆಜ್ಜೆ ಇಡುತ್ತಿದ್ದ ಆ ಕರುಳ ಕುಡಿ ಇಂದು ಹೆತ್ತವರನ್ನು ಅನಾಥವಾಗಿಸಿ ಹೊರಟುಹೋಗಿದ್ದಾಳೆ. ನಾಲ್ಕು ದಿನಗಳ ಹಿಂದಷ್ಟೇ ನೂತನ ಮನೆಯ ಗೃಹಪ್ರವೇಶದಲ್ಲಿ ನಗುನಗುತ್ತಾ ಎಲ್ಲರ ಕಣ್ಮಣಿಯಾಗಿದ್ದವಳು, ನಿನ್ನೆ ಸಾವನಪ್ಪಿದ್ದಾಳೆದಾವಣಗೆರೆಯ ಪ್ರತಿಷ್ಠಿತ ಟೀಮ್ ಅಕಾಡೆಮಿ ಹಾಸ್ಟೆಲ್ನಲ್ಲಿ ನಡೆದ ಈ ದುರಂತ ಈಗ ನಮ್ಮನೆಲ್ಲ ಬೆಚ್ಚಿಬೀಳಿಸಿದೆ. ನಮ್ಮ ಊರಿನ ಪಕ್ಕದ…
ಕುಡಿಯುವ ನೀರು ಪೋಲು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ..
ದುಗಹಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ಯಳಂದೂರು : ದುಗಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವಲ್ ಕಂದಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ಹೋಗಿ ಹಲವು ದಿನಗಳಿಂದ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮುಖ್ಯ ಪೈಪ್ ಲೈನ್ ಒಡೆದು ರಸ್ತೆಯುದ್ದಕ್ಕೂ ನೀರು ಹರಿದು ವ್ಯರ್ಥವಾಗುತ್ತಿದೆ. ಒಂದು ಕಡೆ ಕುಡಿಯುವ ನೀರಿಗೆ ಪರದಾಡುತ್ತಿದ್ದರೆ,…
ಪ್ರೇಮ ನಿರಾಕರಿಸಿದ ಹಿನ್ನೆಲೆ ಬಾಲಕಿಯ ಭೀಕರ ಕೊಲೆ..
ಪ್ರೇಮ ನಿರಾಕರಿಸಿದ ಹಿನ್ನೆಲೆ ಬಾಲಕಿಯ ಭೀಕರ ಕೊಲೆ: ಆರೋಪಿ ಅಮೀರ್ ಲಾಲ್ಸಾಬ್ ಜಮಾದಾರಗೆ ಜೀವಾವಧಿ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ ವೀರಮಾರ್ಗ ನ್ಯೂಸ್ : ಚಿಕ್ಕೋಡಿ : ಪ್ರೇಮವನ್ನು ನಿರಾಕರಿಸಿದ ಕಾರಣಕ್ಕೆ ನನಗೆ ಸಿಗದವಳು ಬೇರೆಯವರಿಗೂ ಸಿಗಬಾರದು ಎಂಬ ಕ್ರೂರ ಮನಸ್ಥಿತಿಯಿಂದ ಅಪ್ರಾಪ್ತ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಅಥಣಿ ತಾಲೂಕಿನ ನಾಗನೂರು…
ಇಂದು ಗುತ್ತಲಪಟ್ಟಣದಲ್ಲಿ ಕಬ್ಬು ಬೆಳೆಗಾರರ ಸಭೆ.
ಇಂದು ಗುತ್ತಲ ಪಟ್ಟಣದಲ್ಲಿ ರೈತ ಕಬ್ಬು ಬೆಳೆಗಾರರ ಸಭೆ.. ವೀರಮಾರ್ಗ ನ್ಯೂಸ್ : ಹಾವೇರಿ: ಜಿಲ್ಲೆ ಹಾವೇರಿ ತಾಲೂಕು ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ದಿನಾಂಕ 4/ 9/ 2026 ಶುಕ್ರವಾರ ದಿವಸ ಬೆಳಗ್ಗೆ 11 ಗಂಟೆಗೆ ಗುತ್ತಲ ವಿಭಾಗದ 30ಕ್ಕೂ ಹೆಚ್ಚು ಹಳ್ಳಿಗಳ ಕಬ್ಬು ಬೆಳೆಗಾರ ಸಭೆಯನ್ನು ಬೃಹತ್ ಪ್ರಮಾಣದಲ್ಲಿ ಕರೆಯಲಾಗಿದೆ ಆ ಭಾಗದ ಮುಖಂಡರು ಕಬ್ಬು ಬೆಳೆಗಾರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಬೇಕು ನಮಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ…
ಅಘೋರಿ ವೇಷದಲ್ಲಿ ವಿಕೃತಿ ಉಜ್ಜಯಿನಿಯಲ್ಲಿ ಕಾಳಿ ಬಂಧನ..
ಅಘೋರಿ ವೇಷದಲ್ಲಿ ವಿಕೃತಿ ಆರೋಪ: ಉಜ್ಜಯಿನಿಯಲ್ಲಿ ಕಾಳಿ ಅಲಿಯಾಸ್ ನಂದಗಿರಿ ಬಂಧನ ವೀರಮಾರ್ಗ ನ್ಯೂಸ್ : ಉಜ್ಜಯಿನಿ: ಅಘೋರಿ ಸಾಧುವಿನಂತೆ ಬಿಂಬಿಸಿಕೊಳ್ಳುತ್ತಿದ್ದ ಕಾಳಿ ಅಲಿಯಾಸ್ ನಂದಗಿರಿ ಎಂಬಾತನನ್ನು ಮಧ್ಯಪ್ರದೇಶದ ಉಜ್ಜಯಿನಿ ಪೊಲೀಸರು ಬಂಧಿಸಿದ್ದಾರೆ. ಚಕ್ರತೀರ್ಥ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಹಾಗೂ ಮಾನವ ಅವಶೇಷಗಳಿಗೆ ಅವಮಾನ ಮಾಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಕ್ರತೀರ್ಥ ಸ್ಮಶಾನದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಆರೋಪಿಯು ಉರಿಯುತ್ತಿದ್ದ ಚಿತೆಯ ಬಳಿ ತೆರಳಿ ಮಾನವ ಅವಶೇಷದೊಂದಿಗೆ…
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ (Justice M. Nagaprasanna) ಅವರು ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವಿಲೇವಾರಿ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ (Justice M. Nagaprasanna) ಅವರು ತಮ್ಮ ವೇಗವಾದ ಹಾಗೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವಿಲೇವಾರಿ ಮತ್ತು ಹಲವು ಮಹತ್ವದ ತೀರ್ಪುಗಳಿಂದ ಗಮನ ಸೆಳೆದಿರುವ ನ್ಯಾಯಮೂರ್ತಿಯಾಗಿದ್ದಾರೆ. ವೀರಮಾರ್ಗ ನ್ಯೂಸ್ : ಬೆಂಗಳೂರಿನ : BMS College of Lawನಲ್ಲಿ ಕಾನೂನು ಪದವಿ ಪಡೆದಿದ್ದಾರೆ. 26 ನವೆಂಬರ್ 2019ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 8ನೇ ಸೆಪ್ಟೆಂಬರ್ 2021ರಂದು ಖಾಯಂ ನ್ಯಾಯಮೂರ್ತಿಯಾದರು.ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ರಿಮಿನಲ್ ಪ್ರಕರಣಗಳು, ಜಾಮೀನು ಅರ್ಜಿಗಳು, ಸೇವಾ ವಿಷಯಗಳು…
ನಕಲಿ PHD ಪದವೀಧರರ ವಿರುದ್ಧ ಸರ್ಕಾರ ಸಮರ…
ನಕಲಿ PHD ಪದವೀಧರರ ವಿರುದ್ಧ ಸರ್ಕಾರ ಸಮರ : ಕ್ರಿಮಿನಲ್ ಪ್ರಕರಣ.. ವೀರಮಾರ್ಗ ನ್ಯೂಸ್ : ಬೆಂಗಳೂರು : ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಕಲಿ ಪಿಹೆಚ್ಚಿ ಪದವಿ ಪ್ರಮಾಣಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರ ಹುದ್ದೆ ಗಿಟ್ಟಿಸಿಕೊಂಡ 249 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಆನ್ಸೆನ್ ಕೌನ್ಸಲಿಂಗ್ ಮೂಲಕ ನೇಮಕಗೊಂಡಿದ್ದ ಉಪನ್ಯಾಸಕರ ದಾಖಲೆಗಳನ್ನು ಇಲಾಖೆಯ ನಿರ್ವಹಣಾ ವ್ಯವಸ್ಥೆ ಮೂಲಕ ಪರಿಶೀಲನೆ ನಡೆಸಿದ ವೇಳೆ ಅಕ್ರಮ ಬಯಲಾಗಿದೆ ಎಂದು ತಿಸಿಸಿದರು. ಈ ಕುರಿತು…
ವಿದ್ಯಾರ್ಥಿ ಹಿಮಾಚಲ ಪ್ರದೇಶದ 6,111 ಮೀಟರ್ ಎತ್ತರದ ‘ಯುನಮ್ ಪೀಕ್’ ಯಶಸ್ವಿ ಆರೋಹಣ.
ವಿಷಯ : ಹಾವೇರಿ ಜಿಲ್ಲೆಯ ಸಾಹಸಿ ಯುವಕ, ದಾವಣಗೆರೆ R. L. ಲಾ ಕಾಲೇಜಿನ ವಿದ್ಯಾರ್ಥಿ ಮನೋಜ ಹೊನ್ನಪ್ಪ ಚಿಕ್ಕಪ್ಪನವರ ಅವರಿಂದ ಹಿಮಾಚಲ ಪ್ರದೇಶದ 6,111 ಮೀಟರ್ ಎತ್ತರದ ‘ಯುನಮ್ ಪೀಕ್’ ಯಶಸ್ವಿ ಆರೋಹಣ. ಹಾವೇರಿ / ರಾಣೇಬೆನ್ನೂರು : ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಸಾಹಸಿ ಯುವಕ ಮನೋಜ ಹೊನ್ನಪ್ಪ ಚಿಕ್ಕಪ್ಪನವರ (ಪ್ರಸ್ತುತ ದಾವಣಗೆರೆಯ R. L. ಲಾ ಕಾಲೇಜಿನಲ್ಲಿ LLB ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ) ಅವರು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಕಣಿವೆಯಲ್ಲಿರುವ…
ಕಬ್ಬು ಬೆಳೆಗಾರರ ಹೋರಾಟಕ್ಕೆ ರೈತ ಬಾಂಧವರಿಗೆ ಕರೆ.
ಕಬ್ಬು ಬೆಳೆಗಾರರ ಹೋರಾಟಕ್ಕೆ ರೈತ ಬಾಂಧವರಿಗೆ ಕರೆ ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆ ಹಾವೇರಿ ತಾಲೂಕ ಹೊಸರಿತ್ತಿ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಭೆ ಆಯೋಜಿಸಲಾಗಿದೆ 2026/ 27 ನೇ ಸಾಲಿನ ಕಬ್ಬು ಕಟಾವು ಹಂಗಾಮ ಪ್ರಾರಂಭವಾಗುವ ಸಮಯ ಬಂದಿದೆ ಕಳೆದ ವರ್ಷಗಳಂತೆ ಈ ವರ್ಷವೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಇಳುವರಿ (ರಿಕವರಿ )ಕಡಿಮೆ ತೋರಿಸುವುದು ಹಾಗೂ ಕಬ್ಬಿಗೆ ಕಡಿಮೆ ದರ ನೀಡುವ ಮೂಲಕ ರೈತರಿಗೆ ಕಾರ್ಖಾನೆ ಅವರಿಂದ ಅನ್ಯಾಯವಾಗುವ ಸಾಧ್ಯತೆ ಇದೆ ಆದ್ದರಿಂದ…