ಖಾಸಗಿ ಜೆಟ್ ವಿಮಾನ ಪತನವಾಗಿಇಬ್ಬರಿಗೆ ಗಂಭೀರ ಗಾಯ.
ಖಾಸಗಿ ಜೆಟ್ ವಿಮಾನ ಪತನವಾಗಿಇಬ್ಬರಿಗೆ ಗಂಭೀರ ಗಾಯ, ಪ್ರಾಣ ಹಾನಿ ಇಲ್ಲಾ. ವೀರಮಾರ್ಗ ನ್ಯೂಸ್ : ಕೊಲ್ಹಾರ : ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ವಿಮಾನ ಪತನ ವಿಮಾನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಖಾಸಗಿ ಜೆಟ್ ವಿಮಾನವೊಂದು ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಇಂಧನ ಖಾಲಿಯಾದರಿಂದ ವಿಮಾನ ಭಾನುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಪತನವಾಗಿದೆ.ರೆಡ್ ಬರ್ಡ್ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ಕೊಲ್ಹಾರ ಸಮೀಪದ ಮಂಗಳೂರು ಗ್ರಾಮದಲ್ಲಿ ರೈತ ಶಿವನಗೌಡ…
ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಗುರುವಂದನೆ ಸಂಸ್ಮರಣೆ…
ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಗುರುವಂದನೆ ಹಾಗೂ ಪುಣ್ಯ ಸಂಸ್ಮರಣೆ ವೀರಮಾರ್ಗ ನ್ಯೂಸ್ : ಕೃಷ್ಣರಾಜಪೇಟೆ : ಒಕ್ಕಲಿಗರ ಮಹಾ ಸಂಸ್ಥಾನ ಮಠದ ಭೈರವೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾ ಸ್ವಾಮೀಜಿಯವರ ಸಂಸ್ಕರಣೆ ಹಾಗೂ ಪೀಠಾಧಿಪತಿಗಳಾದ ಡಾ.ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮಕ್ಕೆ ಕೆ ಆರ್ ಪೇಟೆ ಪಟ್ಟಣದ ಟಿಎಪಿಸಿಎಂಎಸ್ ನ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದ ಆಭರಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಫೆಬ್ರವರಿ 10ನೇ ತಾರೀಖು ಮಂಗಳವಾರ ಬೆಳಿಗ್ಗೆ10 ಗಂಟೆಗೆ ಪ್ರವಾಸಿ…
ಅಭಿವೃದ್ಧಿ ಮಾಡುತ್ತೇನೆಂದು ಶಾಸಕ,ಪಠಾಣ ಶಪಥ..
ಸುಪ್ರಸಿದ್ಧ ಸಯ್ಯದ ಹಜರೆಶಾ ಖಾದ್ರಿ ದರ್ಗಾ ಜಂಡೆ ಕಾರ್ಯಕ್ರಮಕ್ಕೆ ಶಾಸಕರು ಬೇಟ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮುಂದಿನ ದಿನದಲ್ಲಿಕೋಟ್ಯಾಂತರ ಹಣವನ್ನು ತಂದು ಅಭಿವೃದ್ಧಿ ಮಾಡುತ್ತೇನೆಂದು ಶಪಥ ಮಾಡಿದ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ. ಸಂಜೆ 6.ಘಂಟೆಗೆ ಜಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲಕ್ಷಾಂತರ ಭಕ್ತಾದಿಗಳಿಗೆ ಭಕ್ತಿಯಿಂದ ಶುಭ ಕೋರಿದರು. ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ ಮಾತನಾಡಿ. ಮುಂದಿನ ವರುಷ ಜಂಡೆ ಕಾರ್ಯಕ್ರಮ ಬರುವ ಒಳಗಡೆಯಾಗಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಬರುವ ಲಕ್ಷಾಂತರ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ವಾತ್ಸಲ್ಯ ಕಿಟ್ ವಿತರಣೆ..
ವೀರಮಾರ್ಗ ನ್ಯೂಸ್ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ದೊದ್ದನಕಟ್ಟೆ ಕಾಳಮ್ಮ ಅವರಿಗೆ ವಾತ್ಸಲ್ಯ ಕಿಟ್ ವಿತರಣೆ..ಮಾನವೀಯ ಮೌಲ್ಯಗಳು ಹಾಗೂ ಸೇವಾ ಸಂಕಲ್ಪದ ಜೀವಂತ ಪ್ರತಿರೂಪವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.ಪೂಜ್ಯ ಖಾವಂದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ, ಸಮಾಜದ ಅಂಚಿನಲ್ಲಿರುವ ಆಶ್ರಯವಿಲ್ಲದ ಹಾಗೂ ದುಡಿಯಲು ಅಶಕ್ತರಾದ ವಯೋವೃದ್ಧ ಬಡವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯ…
ರಾಜ್ಯ ರೈತ ಘಟಕದಿಂದ ಚಳ್ಳಕೆರೆಯಲ್ಲಿ ರೈತ ಚೈತನ್ಯ ಯಾತ್ರೆ.
ಚಿತ್ರದುರ್ಗ ಜಿಲ್ಲ ಚಳ್ಳಕೆರೆ ತಾಲೂಕು : ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದಿಂದ ಚಳ್ಳಕೆರೆಯಲ್ಲಿ ರೈತ ಚೈತನ್ಯ ಯಾತ್ರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ಚಿತ್ರದುರ್ಗ ಜಿಲ್ಲ ಚಳ್ಳಕೆರೆ ತಾಲೂಕು ಸಮಿತಿ ನೇತೃತ್ವದಲ್ಲಿ ರೈತ ಚೈತನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಚಳ್ಳಕೆರೆ ತಾಲೂಕಾಧ್ಯಂತ ಹಳ್ಳಿ ಹಳ್ಳಿಗಳಲ್ಲಿ ಈ ವಿಶೇಷ ಯಾತ್ರೆಯ ಮೂಲಕ ರೈತರ, ಕೃಷಿ ಕಾರ್ಮಿಕರ,ಮಹಿಳೆಯರ ಎಲ್ಲಾ ವರ್ಗದ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಜನ ಸಂವಾದ ನಡೆಸಿ ಅವರ ಕುಂದು…
ಪೊಲೀಸಪ್ಪನೇ ಕಳ್ಳರ ಗ್ಯಾಂಗಿಗೆ ಲೀಡರ್,
ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡರ್, ತನ್ನದೇ ಸ್ಟೇಷನಲ್ಲಿ ಕಂಬಿ ಹಿಂದೆ ಕಾನ್ಸ್ಟೇಬಲ್: ಗೌಡರ ಮನೆ ಕಳ್ಳತನ ಕೇಸ್ಗೆ ಟ್ವಿಸ್ಟ್! ಹಾವೇರಿ SP ಮಾರ್ಗದರ್ಶನದ ಮೇರೆಗೆ ರಾಣೆಬೆನ್ನೂರ್ DYSP ಲೋಕೇಶ್ ಜಿ ಅವರು ಎರಡರಿಂದ ಮೂರು ತಂಡಗಳನ್ನು ರಚನೆ ಮಾಡಿಕೊಂಡು, ಹಗಲಿರಳು ಶ್ರಮಕ್ಕೆ ಫಲ, ಪೊಲೀಸ್ ಇಲಾಖೆಯಲ್ಲೆ ನುರಿತ ಪೊಲೀಸ್ ಕಾನ್ಸ್ಟೇಬಲ್ ಇರುವುದರಿಂದ ಸಾಕ್ಷಿ ಸಿಗದ ಹಾಗೆ ಏನೆಲ್ಲಾ ಪ್ರಯತ್ನಗಳನ್ನ ಮಾಡಿದ್ದಾರೆ, ಸಾಕ್ಷಿ ನಾಶಕ್ಕೆ ಮಾಡಿರುವುದು ಕಂಡು ಬಂದಿದೆ ಅನ್ನುವ ಮಾಹಿತಿ ದೊರಕಿದೆ. ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್…
ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನಾದವರೆಗೂ.
ಮೇಷ ರಾಶಿ : ಈ ವಾರ, ನಿಮ್ಮ ಹೆತ್ತವರ ಸಹಾಯದಿಂದ, ನಿಮ್ಮ ಹಿಂದಿನ ಯಾವುದೇ ಹಣಕಾಸಿನ ನಿರ್ಬಂಧಗಳಿಂದ ಹೊರಬರಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡದಿಂದ ನೀವು ಪರಿಹಾರ ಪಡೆಯುವುದಲ್ಲದೆ, ನಿಮ್ಮ ಸ್ಥಿತಿಯನ್ನು ಸುಧಾರಿಸಿದ ನಂತರ ನಿಮ್ಮ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಚಂದ್ರ ರಾಶಿಗೆ ಹೋಲಿಸಿದರೆ ರಾಹು ಹನ್ನೊಂದನೇ ಮನೆಯಲ್ಲಿ ಇರುವುದರಿಂದ, ನಿಮ್ಮ ತಮಾಷೆಯ ಸ್ವಭಾವವು ಸಾಮಾಜಿಕ ಒಟ್ಟುಗೂಡಿಸುವ ಸ್ಥಳಗಳಲ್ಲಿ ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯನ್ನು…
ಪ್ರಾರಂಭವಾದ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಬಂದ್.
ಬಿಜೆಪಿ ಒತ್ತಡಕ್ಕೆ ಪ್ರಾರಂಭವಾದ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಬಂದ್. ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಕುಕ್ಕುವಾಡ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಮುಗಿದಿದೆ. ನೋಂದಣಿಗಾಗಿ ಬಂದ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದುರುಗಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಉಪಸ್ಥಿತರಿದ್ದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ಶಾಮನೂರು ಎಸ್…
ಮೈಲಾರ ಕಾರ್ಣಿಕ 2026: ಸಂಪಾಯಿತಲೇ ಪರಾಕ್..!
ವೀರಮಾರ್ಗ ನ್ಯೂಸ್ : ಹಾವೇರಿ : ರಾಜ್ಯದಲ್ಲಿಯೇ ಹೆಸರುವಾಸಿಯಾದ ಜಾತ್ರೆ ಅಂದರೆ ಅದು ಮೈಲಾರಲಿಂಗಶ್ವರ ಜಾತ್ರೆ ವಿಶೇಷವಾಗಿ ಸಾವಿರಾರು ಭಕ್ತರ ಮಧ್ಯೆ ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ರಾಜ್ಯಾದ್ಯಂತ ಭಕ್ತರು ಈ ಕ್ಷಣಕ್ಕಾಗಿ ಕಾತರದಿಂದ ಕಾದು ಕುಳಿತಿರುತ್ತಾರೆ. ಅದರಂತೆಯೇ ಇದೀಗ ಗೊರವಪ್ಪ ಭವಷ್ಯವಾಣಿ ನುಡಿದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಪ್ರಸಿದ್ಧ ದೊಡ್ಡ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ಅಂಗವಾಗಿ ಈ ವರ್ಷದ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಭಕ್ತರ ಅಪಾರ ನಿರೀಕ್ಷೆಯ…
ತಹಶೀಲ್ದಾರ್ ಕಿರುಕುಳ ಆತ್ಮಹತ್ಯೆಗೆ ಯತ್ನ.
ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ: ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ – ಗ್ರಾಮಸ್ಥರಿಂದ ರಕ್ಷಣೆ ವೀರಮಾರ್ಗ ನ್ಯೂಸ್ : ಭದ್ರಾವತಿ ತಾಲ್ಲೂಕು ಕಚೇರಿಯ ಮಾನ್ಯ ತಹಶೀಲ್ದಾರ್ ಪರಸಪ್ಪ ವಿರುದ್ಧ ಮಾನಸಿಕ ಕಿರುಕುಳ ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ್ದ ಘಟನೆ ಇಂದು ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಯಿತು.ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ…