ಆಟೋ ಚಾಲಕ 53 ವರ್ಷ ಕಾಂಪೌಂಡ್ ಕುಸಿದು ಸಾವು.
ವೀರಮಾರ್ಗ ನ್ಯೂಸ್ : ಬೆಂಗಳೂರಿನ ವಿಜಯನಗರದಲ್ಲಿ ದಾರುಣ ಘಟನೆಯೊಂದು ನಡೆದು ಹೋಗಿದೆ. ಆಟೋ ಚಾಲಕ 53 ವರ್ಷದ ಶಿವಬೋರಯ್ಯ ಎಂಬುವರು ಕಾಂಪೌಂಡ್ ಕುಸಿದು … ಇಹಲೋಕ ತ್ಯಜಿಸಿದ್ದಾರೆ. ಪತ್ನಿ, ಮಕ್ಕಳನ್ನು ಆಸ್ಪತ್ರೆಗೆ ಬಿಟ್ಟು ಹೊರಕ್ಕೆ ಬಂದ ಶಿವಬೋರಯ್ಯ ಆಟೋ ತೆಗೆದುಕೊಂಡು ಹೊರಟಾಗ, ಮೂತ್ರಕ್ಕೆ ಅವಸರ ಆಗಿದೆ. ಮಳೆ ಬಂದು ನಿಂತಿತ್ತು. ಚಳಿ ಬೇರೆ.. ಸೂಸು ಮಾಡಲು ಕಾಂಪೌಂಡ್ ಪಕ್ಕಕ್ಕೆ ಹೋಗಿದ್ದಾರೆ. ದುರಾದೃಷ್ಟವಶಾತ್ ಕಾಂಪೌಂಡ್ ಕುಸಿದಿದೆ. ಇತ್ತೀಚೆಗೆ ಮಗಳನ್ನ ಕಳೆದುಕೊಂಡಿದ್ದ ಶಿವಬೋರಯ್ಯಗೆ ಒಬ್ಬ ಮಗ, ಹೆಂಡತಿ ಮತ್ತು ವಯಸ್ಸಾದ…
ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ಅಧಿಕಾರಿಗೆ ಶಾಕ್.
ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲಾ : ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ಅಧಿಕಾರಿಗೆ ಶಾಕ್. ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ, ಇಒ ದೊಡ್ಡಸಿದ್ದಯ್ಯ ಸಸ್ಪೆಂಡ್. ಭಾನುವಾರ ನಿವೃತ್ತಿಯಾಗಬೇಕಿದ್ದ ಚಿಕ್ಕನಾಯಕನಹಳ್ಳಿ ಇಒ ದೊಡ್ಡಸಿದ್ದಯ್ಯ ಅಮಾನತು. ಮಧುಗಿರಿಯಲ್ಲಿ ಇಒ ಆಗಿದ್ದಾಗ ಬರೋಬ್ಬರಿ 4.5 ಕೋಟಿ ರೂ. ಭ್ರಷ್ಟಾಚಾರ ನಡೆಸಿದ ಆರೋಪ. ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣದಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದ ದೊಡ್ಡಸಿದ್ದಯ್ಯ. ಗಂಭೀರ ಆರೋಪ ಹಿನ್ನೆಲೆ ನಿನ್ನೆ ರಾತ್ರಿಯೇ ಅಮಾನತು ಆದೇಶ ಹೊರಡಿಸಿದ ಸರ್ಕಾರ….
ಕಾನೂನು ವಿದ್ಯಾರ್ಥಿನಿ ಇತಿಹಾಸ ಪ್ರಸಿದ್ಧ ಶುಭಾ ಕೇಸ್
ವೀರಮಾರ್ಗ ನ್ಯೂಸ್ : ಬೆಂಗಳೂರು : ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಮುಗಿಸಿದ ಕಾನೂನು ವಿದ್ಯಾರ್ಥಿನಿ! ಇತಿಹಾಸ ಪ್ರಸಿದ್ಧ “ಶುಭಾ ಕೇಸ್” ನಿಶ್ಚಿತಾರ್ಥವಾಗಿ ಕೇವಲ 3 ದಿನಕ್ಕೆ ಭಾವಿ ಪತಿಯನ್ನು ಭೀಕರವಾಗಿ ಕೊ# ಮಾಡಿಸಿದ ಬೆಂಗಳೂರಿನ ಶುಭಾ ಶಂಕರನಾರಾಯಣ್ ಪ್ರಕರಣದ ಕರಾಳ ಸತ್ಯ ಇಲ್ಲಿದೆ. ಯಾರು ಈ ಶುಭಾ? 21 ವರ್ಷದ ಲಾ ಸ್ಟೂಡೆಂಟ್. ತನಗಿಂತ ಕಿರಿಯ ಅರುಣ್ ವರ್ಮಾ ಜೊತೆ ಲವ್ ಇತ್ತು. ಸಂಚು ಏನಿತ್ತು? ತಂದೆ ನಿಗದಿಪಡಿಸಿದ ಸಾಫ್ಟ್ವೇರ್ ಇಂಜಿನಿಯರ್ ಗಿರೀಶ್ ಜೊತೆ ನಿಶ್ಚಿತಾರ್ಥವಾದ ಬಳಿಕ,…
DKSHI ಗೇ ಪಟ್ಟಾಭಿಷೇಕ..
ಡಿ.ಕೆ. ಶಿವಕುಮಾರ್ ಗೆ ಸೋಮವಾರ ಗೋಧೂಳಿ ಮುಹೂರ್ತದಲ್ಲಿ ಪಟ್ಟಾಭಿಷೇಕ,,,,?: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ.. ರಾಜ್ಯದಲ್ಲಿ ಅನೇಕ ಬದಲಾವಣೆ… ಕ್ಷಣ ಕ್ಷಣದ ಸುದ್ದಿಗಾಗಿ ವೀರಮಾರ್ಗ ನ್ಯೂಸ್ ಪೇಪರ್ ಓದಿ. ಹೋರಾಟದ ಹಾದಿಯಿಂದ ಮುಖ್ಯಮಂತ್ರಿ ಹುದ್ದೆಯವರೆಗೆ: ಸಿದ್ದರಾಮಯ್ಯ ಅವರ ರಾಜಕೀಯ ಪಯಣ ಬರಹ : ಚಂದ್ರಶೇಖರ ಎಂ. ಹಿರೇಮಠ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯ ಕುಟುಂಬದಿಂದ ಹೊರಹೊಮ್ಮಿ, ತಮ್ಮದೇ ಆದ ಚಿಂತನೆ, ಹೋರಾಟ ಮತ್ತು ಜನಪರ ಆಡಳಿತದ ಮೂಲಕ ಅಚ್ಚಳಿಯದ ಗುರುತು ಮೂಡಿಸಿದ ನಾಯಕರಲ್ಲಿ ಸಿದ್ದರಾಮಯ್ಯ ಅವರು ಪ್ರಮುಖರು. ಗ್ರಾಮೀಣ…
ಬೆಳಗಾವಿ : ಸಿಪಿಐ ಶ್ರೀಶೈಲ್ ಚೌಗಲೆ ಆತ್ಮಹತ್ಯೆಗೆ ಶರಣು..!
ವೀರಮಾರ್ಗ ನ್ಯೂಸ್ : ಬೆಳಗಾವಿ : ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್)ಯ SDRF ಸಿಪಿಐ ಶ್ರೀಶೈಲ ಚೌಗಲೆ (37) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಚನ್ನಮ್ಮ ನಗರದಲ್ಲಿ ಗುರುವಾರ ನಡೆದಿದೆ. ಚೌಗಲೆ ಅವರು ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದ ವೇಳೆ ಅನುಮಾನಗೊಂಡ ಪತ್ನಿ ತಕ್ಷಣವೇ ಎಸ್ಡಿಆರ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು…
ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆ ಸಭೆ.
ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆ ಸಭೆ : ಜೂನ್ 7ರ ಸಮಾವೇಶಕ್ಕೆ ಎಲ್ಲ ಒಳಪಂಗಡಗಳ ಬೆಂಬಲ ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಹುಬ್ಬಳ್ಳಿ : ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ಹಾಗೂ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ, ಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳ ಮುಖಂಡರು ಒಗ್ಗಟ್ಟಿನ ಸಂಕಲ್ಪ ವ್ಯಕ್ತಪಡಿಸಿ, ದಿನಾಂಕ ರವಿ ವಾರ 07/06/2026 ರಂದು ನಡೆಯಲಿರುವ ಮಹತ್ವದ ಸಮಾವೇಶಕ್ಕೆ…
ಜಾತಿ ನಿಂದನೆಗೆ ಶಿಕ್ಷೆಯಾಗಲಿ, ಆದರೆ ಅಮಾಯಕರ ಶಿಕ್ಷಿಸುವ ಅಸ್ತ್ರವಾಗದಿರಲಿ…
ಎಲ್ಲಿದೆ ಅಸ್ಪೃಶ್ಯತೆ,,,? ಜಾತಿ ನಿಂದನೆಗೆ ಶಿಕ್ಷೆಯಾಗಲಿ, ಆದರೆ ಅಮಾಯಕರ ಶಿಕ್ಷಿಸುವ ಅಸ್ತ್ರವಾಗದಿರಲಿ… ನಾವೀಗ 2026ರ ಕಾಲಘಟ್ಟದಲ್ಲಿದ್ದೇವೆ. ಸುಮಾರು ವರ್ಷಗಳ ಹಿಂದೆ ಇದ್ದ ಅಸ್ಪೃಶ್ಯತೆ ಬಹುತೇಕ ಇಲ್ಲವಾಗಿದೆ. ಕಾನೂನು ಕಟ್ಟಳೆಗಳು ಇಂಥ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವುದರಿಂದ ಜಾತಿ ನಿಂದನೆ ಮಾಡುವ ಪ್ರಕರಣಗಳು ಕಡಿಮೆಯೇ ಎನ್ನಬಹುದು. ಆದರೆ ಈ ಜಾತಿ ನಿಂದನೆ ಮತ್ತು ಅಸ್ಪೃಶ್ಯತೆ ಎನ್ನುವುದು ಕೆಲವರ, ಕೆಲವು ಸಂಘಟನೆಗಳ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಮಾತ್ರ ಸುಳ್ಳಲ್ಲ. ಇಂಥ ಕೆಲ ಪ್ರಕರಣಗಳಲ್ಲಿ ಅಮಾಯಕರು ಮಾನಕ್ಕೆ ಅಂಜಿ ಪ್ರಾಣ ಕಳೆದುಕೊಂಡ ನಿದರ್ಶನಗಳೂ…
RTI ಸದುಪಯೋಗಕ್ಕಿಂತ ದುರುಪಯೋಗದ ಸುದ್ದಿಗಳೇ ಹೆಚ್ಚಾಗುತ್ತಿವೆ.
ಕೃಪೆ : ಫೇಸ್ಬುಕ್ ವೀರಮಾರ್ಗ ನ್ಯೂಸ್ : ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಜಾರಿಯಾದ ನಂತರ ದೊಡ್ಡ ಸಂಚಲನವೇ ಉಂಟಾಗಿತ್ತು. ಆದರೆ, ಈಗ ಸದುಪಯೋಗಕ್ಕಿಂತ ದುರುಪಯೋಗದ ಸುದ್ದಿಗಳೇ ಹೆಚ್ಚಾಗುತ್ತಿವೆ. ಸರ್ಕಾರದ ಯೋಜನೆಗಳು, ಅವುಗಳು ಜಾರಿ, ವಿವಿಧ ಕಾಮಗಾರಿಗಳು ಹೀಗೆ ಆಡಳಿತ ವ್ಯವಸ್ಥೆಯಲ್ಲಿನ ಆಗುಹೋಗುಗಳ ಮಾಹಿತಿ ಜನರಿಗೂ ತಿಳಿಯಲಿ ಎನ್ನುವ ಕಾರಣಕ್ಕೆ ಮಾಹಿತಿ ಹಕ್ಕು ಕಾಯ್ದೆಯನ್ನು ಪ್ರಜೆಗಳ ಕೈಗೆ ಕೊಡಲಾಗಿದೆ. ಆರ್ಟಿಐ ಬಂದ ನಂತರ ಮಾಹಿತಿ ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವರು ಆರ್ಟಿಐ ಕಾರ್ಯಕರ್ತರ…
ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಆಕ್ರೋಶ ಶಿಡ್ಲಾಪುರ..
ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳು ಭುವನೇಶ್ವರ ಶಿಡ್ಲಾಪುರ ಆಕ್ರೋಶ ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ರಾಜಕೀಯ ಕೆಸರಾಟದಲ್ಲಿ ನಿರತರಾಗಿ ದೇಶದ ಅನ್ನದಾತರ ಬಗ್ಗೆ ಗಮನಹರಿಸುತ್ತಿಲ್ಲ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಸರಿಯಾಗಿ ಸಿಗುತ್ತಿಲ್ಲ ದೇಶಕ್ಕೆ ಅನ್ನ ಕೊಡುವ ರೈತರು ರೈತ ಸಂಪರ್ಕ ಕೇಂದ್ರದ ಎದುರು ಬೀಜಕ್ಕಾಗಿ ಬಂದು ಬೀದಿಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿದೆ. ರಸಗೊಬ್ಬರದ ಬೆಲೆ ಏರಿಕೆಯಾಗಿದ್ದರು ಅಗತ್ಯ ಪ್ರಮಾಣದಲ್ಲಿ ರೈತರಿಗೆ ರಸಗೊಬ್ಬರ ದೊರಕುತ್ತಿಲ್ಲ ಈ ವಿಷಯದಲ್ಲಿ ಸರ್ಕಾರಗಳು ನಾಟಕವಾಡುತ್ತಿವೆ ಸರ್ಕಾರಗಳಿಗೆ…
ಗಾಮನಗಟ್ಟಿ ಮಿಯಾವಾಕಿ ಉದ್ಯಾನವನದ ಅರಣ್ಯ ಬೆಳೆಸಿ.
ಗಾಮನಗಟ್ಟಿ ಮಿಯಾವಾಕಿ ಉದ್ಯಾನವನದ ಅರಣ್ಯ ಬೆಳೆಸಿ ಪರಿಸರ ಸಂರಕ್ಷಣೆಗೆ ಮಾದರಿಯಾದ ಪಾಲಿಕೆ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಹುಬ್ಬಳ್ಳಿ : ಪರಿಸರ ಸಂರಕ್ಷಣೆ ಕುರಿತು ಕೇವಲ ಜಾಗೃತಿ ಮೂಡಿಸುವುದಲ್ಲದೆ, ತಾವೇ ಮುಂದಾಗಿ ಉದ್ಯಾನವನದಲ್ಲಿ ‘ಮಿಯಾವಾಕಿ ಅರಣ್ಯ’ ಬೆಳೆಸುವ ಮೂಲಕ ಮಹಾನಗರ ಪಾಲಿಕೆಯ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ಅವರು ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಸಮೀಪದ ಗಂಗೋತ್ರಿ ಪಾರ್ಕ್ನಲ್ಲಿ ಅವರು ಕೈಗೊಂಡಿರುವ ಈ…