ಲೇಡಿ ಆಫೀಸರ್ಗಳೇ ಈತನ ಟಾರ್ಗೆಟ್…!
ವೀರಮಾರ್ಗ ನ್ಯೂಸ್ : ಬೆಂಗಳೂರು : ಲೇಡಿ ಆಫೀಸರ್ಗಳೇ ಈತನ ಟಾರ್ಗೆಟ್! ಪ್ರೀತಿಯ ನಾಟಕವಾಡಿ 50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್…! ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೈಪ್ರೊಫೈಲ್ ವಂಚಕನೊಬ್ಬನ ಅಸಲಿ ಮುಖವಾಡ ಕಳಚಿದೆ. ಕಸ್ಟಮ್ಸ್ ಮತ್ತು ಜಿಎಸ್ಟಿ ವಿಭಾಗದ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ದೈಹಿಕ ಸಂಪರ್ಕ ಬೆಳೆಸಿ, ಬಳಿಕ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಭೀಕರ ಜಾಲವೊಂದನ್ನು ಪುಲಕೇಶಿ ನಗರ ಪೊಲೀಸರು ಭೇದಿಸಿದ್ದಾರೆ. ಯಾರೀತ ಕೃಪಾಲನಿ? ಈತನ ಮೋಸದ ಜಾಲ ಹೇಗಿತ್ತು? ಬಂಧಿತ ಆರೋಪಿ ಕೃಪಾಲನಿ ಎಂಬಾತ ತನ್ನನ್ನು…
ಜಮೀರ್ ಕೋಟೆಗೆ ‘ನಾಹು’ಸಾಬ್ ವಿಫಲ ಲಗ್ಗೆ
“ಜಮೀರ್ ಕೋಟೆಗೆ‘ನಾಹು’ಸಾಬ್ ವಿಫಲ ಲಗ್ಗೆ ವೀರಮಾರ್ಗ ನ್ಯೂಸ್ : ಮೊನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರxನ್ನು ಸಂಪರ್ಕಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಅವರು ಹಲವು ಧರ್ಮಸೂಕ್ಷ್ಮಗಳನ್ನು ವಿವರಿಸಿದ್ದಾರಂತೆ.ಅಂದ ಹಾಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜಮೀರ್ ಅಹ್ಮದ್ ಈ ರೀತಿ ತಗಲಿಕೊಳ್ಳಲು ಅಷ್ಟೊತ್ತಿಗಾಗಲೇ ಹಬ್ಬಿದ್ದ ಪುಕಾರುಗಳು ಕಾರಣ.ಇಂತಹ ಪುಕಾರುಗಳ ಪ್ರಕಾರ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಸೋಲಿಸಲು ಜಮೀರ್ ಅಹ್ಮದ್ ಒಳಸಂಚು ಮಾಡಿದರು.ಕಣದಲ್ಲಿದ್ದ ಇಬ್ಬರು…
ಮದುವೆಯಾಗಬೇಕಿದ್ದ ವೈದ್ಯ ಹತ್ಯೆಯಿಂದಮಸಣ ಸೇರಿದ..
ಪತ್ನಿಯ ಸಹೋದರಿಯನ್ನು ಮದುವೆಯಾಗಬೇಕಿದ್ದ ವೈದ್ಯನ ಹತ್ಯೆ! ಶಿರಸಿಯ ವೈದ್ಯನ ನಿಗೂಢ ಹತ್ಯೆ ಹಿಂದೆ ಅಡಗಿದೆಯೇ ದೊಡ್ಡ ರಹಸ್ಯ? ವೀರಮಾರ್ಗ ನ್ಯೂಸ್ : ಇಡೀ ಮನೆ ಮದುವೆಯ ಸಂಭ್ರಮದಲ್ಲಿತ್ತು, ನಾಳೆ ಹಸೆಮಣೆ ಏರಬೇಕಿದ್ದ ವರನ ಕನಸುಗಳು ನೂರಾರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹೆಂಡತಿಯ ತಂಗಿಯ ಜೊತೆ ಎರಡನೇ ಮದುವೆಯಾಗಬೇಕಿದ್ದ ವೈದ್ಯರೊಬ್ಬರು ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ನಿಗೂಢವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಕೆಎಚ್ಬಿ (KHB) ಕಾಲೋನಿಯ ನಿವಾಸಿ,…
ಶಾಮನೂರು,ಕೋಟೆಯಲ್ಲಿ’ಸಂಪತ್ತಿಗೆ ಸವಾಲ್’
ಶಾಮನೂರು ಕೋಟೆಯಲ್ಲಿ‘ಸಂಪತ್ತಿಗೆ ಸವಾಲ್’ ವೀರಮಾರ್ಗ ನ್ಯೂಸ್ : ಅವತ್ತು ರಾಜ್ಯದಲ್ಲಿ ಜೆ.ಹೆಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ಅಸ್ತಿತ್ವದಲ್ಲಿತ್ತು.ಜನತಾದಳದ ಸುಪ್ತಿಮೋ ದೇವೇಗೌಡರು ಪ್ರಧಾನಿ ಗದ್ದುಗೆ ಏರಿ ವಾಪಸ್ಸು ಬಂದಿದ್ದರು.ಈ ಸಂದರ್ಭದಲ್ಲೇ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಯಿತು. ಹೀಗೆ ಉಪಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಒಂದು ರಾಮನಗರ.ಮತ್ತೊಂದು ಮೊಳಕಾಲ್ಮೂರು.ಅವತ್ತು ರಾಜಕೀಯ ಬಲಾಬಲದ ದೃಷ್ಟಿಯಿಂದ ಜನತಾದಳ ಭರ್ಜರಿ ಗೆಲುವು ಸಾಧಿಸವೇಕಿತ್ತು.ಆದರೆ ಉಪಚುನಾವಣೆಯಲ್ಲಿ ಜನತಾದಳದ ಲೆಕ್ಕಾಚಾರ ಉಲ್ಟಾ ಆಗಿ ಪ್ರತಿಪಕ್ಷ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಗೆಲುವು ಸಾಧಿಸಿದರು.ಅವತ್ತು ರಾಮನಗರ ಕ್ಷೇತ್ರದಲ್ಲಿ…
ರೈತರ ಬೇಡಿಕೆ ಈಡೇರಿಕೆಗಾಗಿ KRS ಪಕ್ಷದಿಂದ ಒತ್ತಾಯ.
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆಆರ್ಎಸ್ ಪಕ್ಷದಿಂದ ಜಿಲ್ಲಾಧಿಕಾರಿಗೆ ಒತ್ತಾಯ. ವೀರಮಾರ್ಗ ನ್ಯೂಸ್ : ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಉಲ್ಬಣಗೊಂಡಿರುವ ವಿವಿಧ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಈ ಮನವಿ ಪತ್ರ ಸಲ್ಲಿಕೆಗೆ ರೈತ ಘಟಕದ ಅಧ್ಯಕ್ಷರಾದ ಜೋಗನಹಳ್ಳಿ ಗುರುಮೂರ್ತಿ ನೇತೃತ್ವ ವಹಿಸಿದ್ದರು. ಮನವಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೋಗನಹಳ್ಳಿ ಗುರುಮೂರ್ತಿ ಅವರು ಬಳ್ಳಾರಿ ಕಸಬಾ…
ವದು ನೋಡಲು ಹೊರಟ ಕುಟುಂಬದವರು ಸಾವಿನ ಮನೆ ಸೇರಿದರು..
ಒಂದೇ ಕುಟುಂಬದಲ್ಲಿ ನಾಲ್ವರ ಸಾವು, ಕನ್ಯಾ ನೋಡಲು ಹೊರಟ ಕುಟುಂಬಕ್ಕೆ ಯಮನು ಕಾದು ಕುಳಿತಿದ್ದ… ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ ಗ್ರಾಮದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ಕಾರು ಹಾಗು ಬಸ್ ಗೆ ಬೆಳ್ಳುಳ್ಳಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾನಪುರದ ಬಳಿ ನಡೆದಿದೆ, ಸುಜಾತಾ ಒಳಗಡ್ಡಿ ಅತಿಥಿ ಶಿಕ್ಷಕಿ ಹಾಗೂ ಅವರ ತಂದೆ ನಾಗರಾಜ ತಾಯಿ ಬಸಮ್ಮ ಗಂಡ…
ಕಾರ ಮರಕ್ಕೆ ಡಿಕ್ಕಿ ಸ್ಥಳದಲ್ಲೇ CPI ಮೃತಪಟ್ಟಿದ್ದಾರೆ.
ವೀರಮಾರ್ಗ ನ್ಯೂಸ್ : ದಾವಣಗೆರೆಯಲ್ಲಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವೃತ್ತ ನಿರೀಕ್ಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.ಮೃತರನ್ನು ಪೊಲೀಸ್ ವೃತ್ತ ನಿರೀಕ್ಷಕರು (CPI) ಎಂದು ಗುರುತಿಸಲಾಗಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಅತೀ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿ…
ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಲಹೆ ಭಜಂತ್ರಿ..
ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಂತೋಷ್ ಭಜಂತ್ರಿ ಸಲಹೆ ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಶಿಕ್ಷಣ ತಜ್ಞರ ಪ್ರಕಾರ ಇಂದಿನ ವ್ಯವಹಾರ ಜಗತ್ತಿಗೆ ಹೊಂದಿಕೆಯಾಗಲು ಬಿಕಾಂ ಪದವಿ ಕೋರ್ಸ್ ಅತ್ಯುತ್ತಮ ಪದವಿಯಾಗಿದೆ ಎಂದು ಬಿ.ಎ. ಜೆ.ಎಸ್.ಎಸ್ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಂತೋಷ್ ಭಜಂತ್ರಿ ಹೇಳಿದ್ದಾರೆ. ಬುಧವಾರ ಈ ಕುರಿತು ಬಿಕಾಂ ಪದವಿ ಹಿನ್ನೆಲೆ ಮತ್ತು ಅದರ ಆಳ, ಆಗಲ, ಸಮಗ್ರ ಔದ್ಯೋಗಿಕ ಬೆಳವಣಿಗೆ ಕುರಿತು ವಿಶ್ಲೇಷಿಸಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.ಈ ಕೋರ್ಸ್ ಮಾಡಿದವರು ಲೆಕ್ಕ…
ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ:ಡಾ.ಹರೀಶ್.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್ ವೀರಮಾರ್ಗ ನ್ಯೂಸ್ : ಕಾರವಾರ : ಮಾಹಿತಿ ಹಕ್ಕು ಕಾಯಿದೆ 2005 ರಡಿ ಮಾಹಿತಿ ಕೋರಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ನಿಗಧಿತ ಅವಧಿಯೊಳಗೆ ಅಗತ್ಯ ಮಾಹಿತಿ ಒದಗಿಸುವುದು ಎಲ್ಲಾ ಇಲಾಖೆಗಳ ಮಾಹಿತಿ ಅಧಿಕಾರಿಗಳ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ…
ಕಳ್ಳತನ-ಕಳೆದುಕೊಂಡ್ಡಿದ್ದನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು :13 ನಗರ ತಾಲೂಕು, ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು 210 ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಕಳ್ಳತನ ಅಥವಾ ಕಳೆದುಕೊಂಡ್ಡಿದ್ದನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸ್ ರು. ಅವುಗಳನ್ನು ಕಳೆದುಕೊಂಡ ವಾರಸುದಾರರಿ ತಲುಪಿಸುವಲ್ಲಿ ತಮ್ಮ ಪ್ರಾಮಾಣಿಕತೆ ಮೆರೆದು ಸಾರ್ವಜನಿಕರಲ್ಲಿ ಪೊಲೀಸರು ಆತ್ಮವಿಶ್ವಾಸ ಮೂಡಿಸಿದ್ದಾರೆ. ಕಳೆದುಕೊಂಡ ವಾರಸುದಾರರಿಗೆ ಪತ್ತೆ ಹಚ್ಚಿರುವ ಪೊಲೀಸರು ಸಂಬಂಧಿಸಿದವರಿಗೆ ಥಾಣೆಗೆ ಕರೆಸಿ ಅಧಿಕ ಬೆಲೆ ಬಾಳುವ ಮೊಬೈಲ್ಗಳನ್ನು ತಲುಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ…