ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆಕೊಟ್ಟಕಬ್ಬು ಬೆಳೆಗಾರರ ಸಂಘ.
ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ಕೊಟ್ಟ ರಾಜ್ಯ ಕಬ್ಬು ಬೆಳೆಗಾರರ ಸಂಘ. ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಘನ ಸರ್ಕಾರದ ಸಕ್ಕರೆ ಸಚಿವರಾದ ಶ್ರೀ ರುದ್ರಪ್ಪ ಲಮಾಣಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಇವರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು ನವಂಬರ್ ಒಂದನೇ ತಾರೀಕಿನವರೆಗೂ ಯಾವುದೇ ಕಾರ್ಖಾನೆಯನ್ನು ಶುರು ಮಾಡಕೂಡದು, ಹಾವೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಉತ್ತರ ಕರ್ನಾಟಕದ ಕಾರ್ಖಾನೆಗಳು ಯಾವ ದರ ಕೊಡುತ್ತಿವೆಯೋ…
ಪೊಲೀಸರೊಂದಿಗೆ 30 ವರ್ಷ ಕಣ್ಣಾಮುಚ್ಚಾಲೆ.
ಪೊಲೀಸರೊಂದಿಗೆ 30 ವರ್ಷ ಕಣ್ಣಾಮುಚ್ಚಾಲೆಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು ಮೂರು ತಿಂಗಳ ಹಿಂದಿನ ಮಾತು. ಮಂಗಳೂರು ಪೊಲೀಸರು ಪೆಂಡಿಂಗ್ ಇರುವ ಕೇಸುಗಳ ಕಡತಗಳನ್ನು ವಿಲೇವಾರಿ ಮಾಡುತ್ತಿರುತ್ತಾರೆ. ಆಗ ಸವಾಲಿನಂತೆ ಎದುರು ಕಂಡದ್ದು ಮಿಸ್ಟರ್ ಆಂಟನಿಯ ಕೇಸ್ ಫೈಲು. 2019ರಲ್ಲಿ ಚಾರ್ಜ್ಶೀಟ್ ಆಗಿದ್ದ ಕೇಸು ಅದು. ಈ ಬಾರಿ ಏನಾದರೂ ಮಾಡಿ ಆಸಾಮಿಯನ್ನು ಪತ್ತೆ ಮಾಡಲೇಬೇಕು ಅಂತಾಯ್ತು. ಅದಕ್ಕಾಗಿ ಸಿಟಿ ಕ್ರೈಮ್ ಬ್ರಾಂಚ್ ಉಸ್ತುವಾರಿಯಲ್ಲಿ ಮೂರು ತಂಡಗಳ ರಚನೆ ಆಯ್ತು. ಆತ ಹೇಗೆ ಕಾಣಿಸುತ್ತಾನೆ ಅನ್ನೋದೊಂದನ್ನು ಬಿಟ್ಟು ಪೊಲೀಸರ…
(CID) ಪೊಲೀಸರು ಯಶಸ್ವಿ ಕಾರ್ಯಾಚರಣೆ.
ವೀರಮಾರ್ಗ ನ್ಯೂಸ್ : ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೊನೆಗೂ 8 ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ (CID) ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರೂ ಯುವತಿಯರನ್ನು ಪತ್ತೆಹಚ್ಚಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ಓದುತ್ತಿದ್ದ ತೇಜಸ್ವಿನಿ ಕಳೆದ ಜನವರಿ 31 ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ನಾಪತ್ತೆಯಾಗಿದ್ದರು. ವಿದ್ಯಾರಣ್ಯಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಪೊಲೀಸರು ಶೋಧ ಆರಂಭಿಸಿದರೂ ಯಾವುದೇ ಮಹತ್ವದ…
ಪಾದಯಾತ್ರೆಗೆ ತೆರಳುವ ವೇಳೆ ಅಪಘಾತ ಬಿಜೆಪಿ ಕಾರ್ಯಕರ್ತ ಸಾವು..
ಬಳ್ಳಾರಿ ಪಾದಯಾತ್ರೆಗೆ ತೆರಳುವ ವೇಳೆ ಅಪಘಾತ ; ಬೆಳಗಾವಿ ಬಿಜೆಪಿ ಕಾರ್ಯಕರ್ತ ಸಾವು.. ವೀರಮಾರ್ಗ ನ್ಯೂಸ್ : ಬೆಳಗಾವಿ : ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಪಾದಯಾತ್ರೆಗೆ ತೆರಳುವ ವೇಳೆ ಅಪರಿಚಿತ ಬೈಕ್ ಗುದ್ದಿದ ಪರಿಣಾಮ ಬೆಳಗಾವಿ ಬಿಜೆಪಿ ಕಾರ್ಯಕರ್ತ ಸಾವಿಗೀಡಾದ ದುರ್ಘಟನೆ ಸಂಭವಿಸಿದೆ. ಮಹಾವೀರ ಗುಡಾಜ್ ಮೃತ ದುರ್ದೈವಿ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಮೋರ್ಚಾದ ಪದಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕು.
ಕಬ್ಬಿಗೆಬೆಲೆ,ಉತ್ತರಕರ್ನಾಟಕದಲ್ಲಿ ಒಂದೇ ದರ ಮಾಡಿ…
“ಕಬ್ಬಿಗೆ ಬೆಲೆ ಉತ್ತರ ಕರ್ನಾಟಕದಲ್ಲಿ ಒಂದೇ ದರ ಮಾಡಿ “ ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ತಾಲೂಕ್ ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಬೃಹತ್ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಇಂತಿವೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಬೇಕು, ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಮಾಡಿಕೊಡಬೇಕು, ಕಾರ್ಖಾನೆಯವರು ಉಳಿಸಿಕೊಂಡಿರುವ ಬಾಕಿ ಹಣ ಕೊಡಿಸಬೇಕು, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಯಾಗಬೇಕು, ಈ ವರ್ಷ…
ಹಾಸ್ಟೆಲ್ನಲ್ಲಿ ದಾರುಣ ಅಂತ್ಯ ಕಂಡ ಪ್ರತಿಭಾವಂತ ವಿದ್ಯಾರ್ಥಿನಿ!
ವೀರಮಾರ್ಗ ನ್ಯೂಸ್ : ದಾವಣಗೆರೆ ಟಿಮ್ ಅಕಾಡೆಮಿ ಕಾಲೇಜು ಹಾಸ್ಟೆಲ್ನಲ್ಲಿ ದಾರುಣ ಅಂತ್ಯ ಕಂಡ ಪ್ರತಿಭಾವಂತ ವಿದ್ಯಾರ್ಥಿನಿ! ಈಗಷ್ಟೇ ಸೆಕೆಂಡ್ ಪಿಯುಸಿಗೆ ಕಾಲಿಟ್ಟು, ಕಣ್ಣ ತುಂಬಾ ಹತ್ತಾರು ಕನಸುಗಳನ್ನು ಹೊತ್ತು ಹೆಜ್ಜೆ ಇಡುತ್ತಿದ್ದ ಆ ಕರುಳ ಕುಡಿ ಇಂದು ಹೆತ್ತವರನ್ನು ಅನಾಥವಾಗಿಸಿ ಹೊರಟುಹೋಗಿದ್ದಾಳೆ. ನಾಲ್ಕು ದಿನಗಳ ಹಿಂದಷ್ಟೇ ನೂತನ ಮನೆಯ ಗೃಹಪ್ರವೇಶದಲ್ಲಿ ನಗುನಗುತ್ತಾ ಎಲ್ಲರ ಕಣ್ಮಣಿಯಾಗಿದ್ದವಳು, ನಿನ್ನೆ ಸಾವನಪ್ಪಿದ್ದಾಳೆದಾವಣಗೆರೆಯ ಪ್ರತಿಷ್ಠಿತ ಟೀಮ್ ಅಕಾಡೆಮಿ ಹಾಸ್ಟೆಲ್ನಲ್ಲಿ ನಡೆದ ಈ ದುರಂತ ಈಗ ನಮ್ಮನೆಲ್ಲ ಬೆಚ್ಚಿಬೀಳಿಸಿದೆ. ನಮ್ಮ ಊರಿನ ಪಕ್ಕದ…
ಕುಡಿಯುವ ನೀರು ಪೋಲು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ..
ದುಗಹಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ಯಳಂದೂರು : ದುಗಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವಲ್ ಕಂದಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ಹೋಗಿ ಹಲವು ದಿನಗಳಿಂದ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮುಖ್ಯ ಪೈಪ್ ಲೈನ್ ಒಡೆದು ರಸ್ತೆಯುದ್ದಕ್ಕೂ ನೀರು ಹರಿದು ವ್ಯರ್ಥವಾಗುತ್ತಿದೆ. ಒಂದು ಕಡೆ ಕುಡಿಯುವ ನೀರಿಗೆ ಪರದಾಡುತ್ತಿದ್ದರೆ,…
ಪ್ರೇಮ ನಿರಾಕರಿಸಿದ ಹಿನ್ನೆಲೆ ಬಾಲಕಿಯ ಭೀಕರ ಕೊಲೆ..
ಪ್ರೇಮ ನಿರಾಕರಿಸಿದ ಹಿನ್ನೆಲೆ ಬಾಲಕಿಯ ಭೀಕರ ಕೊಲೆ: ಆರೋಪಿ ಅಮೀರ್ ಲಾಲ್ಸಾಬ್ ಜಮಾದಾರಗೆ ಜೀವಾವಧಿ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ ವೀರಮಾರ್ಗ ನ್ಯೂಸ್ : ಚಿಕ್ಕೋಡಿ : ಪ್ರೇಮವನ್ನು ನಿರಾಕರಿಸಿದ ಕಾರಣಕ್ಕೆ ನನಗೆ ಸಿಗದವಳು ಬೇರೆಯವರಿಗೂ ಸಿಗಬಾರದು ಎಂಬ ಕ್ರೂರ ಮನಸ್ಥಿತಿಯಿಂದ ಅಪ್ರಾಪ್ತ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಅಥಣಿ ತಾಲೂಕಿನ ನಾಗನೂರು…
ಇಂದು ಗುತ್ತಲಪಟ್ಟಣದಲ್ಲಿ ಕಬ್ಬು ಬೆಳೆಗಾರರ ಸಭೆ.
ಇಂದು ಗುತ್ತಲ ಪಟ್ಟಣದಲ್ಲಿ ರೈತ ಕಬ್ಬು ಬೆಳೆಗಾರರ ಸಭೆ.. ವೀರಮಾರ್ಗ ನ್ಯೂಸ್ : ಹಾವೇರಿ: ಜಿಲ್ಲೆ ಹಾವೇರಿ ತಾಲೂಕು ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ದಿನಾಂಕ 4/ 9/ 2026 ಶುಕ್ರವಾರ ದಿವಸ ಬೆಳಗ್ಗೆ 11 ಗಂಟೆಗೆ ಗುತ್ತಲ ವಿಭಾಗದ 30ಕ್ಕೂ ಹೆಚ್ಚು ಹಳ್ಳಿಗಳ ಕಬ್ಬು ಬೆಳೆಗಾರ ಸಭೆಯನ್ನು ಬೃಹತ್ ಪ್ರಮಾಣದಲ್ಲಿ ಕರೆಯಲಾಗಿದೆ ಆ ಭಾಗದ ಮುಖಂಡರು ಕಬ್ಬು ಬೆಳೆಗಾರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಬೇಕು ನಮಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ…
ಅಘೋರಿ ವೇಷದಲ್ಲಿ ವಿಕೃತಿ ಉಜ್ಜಯಿನಿಯಲ್ಲಿ ಕಾಳಿ ಬಂಧನ..
ಅಘೋರಿ ವೇಷದಲ್ಲಿ ವಿಕೃತಿ ಆರೋಪ: ಉಜ್ಜಯಿನಿಯಲ್ಲಿ ಕಾಳಿ ಅಲಿಯಾಸ್ ನಂದಗಿರಿ ಬಂಧನ ವೀರಮಾರ್ಗ ನ್ಯೂಸ್ : ಉಜ್ಜಯಿನಿ: ಅಘೋರಿ ಸಾಧುವಿನಂತೆ ಬಿಂಬಿಸಿಕೊಳ್ಳುತ್ತಿದ್ದ ಕಾಳಿ ಅಲಿಯಾಸ್ ನಂದಗಿರಿ ಎಂಬಾತನನ್ನು ಮಧ್ಯಪ್ರದೇಶದ ಉಜ್ಜಯಿನಿ ಪೊಲೀಸರು ಬಂಧಿಸಿದ್ದಾರೆ. ಚಕ್ರತೀರ್ಥ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಹಾಗೂ ಮಾನವ ಅವಶೇಷಗಳಿಗೆ ಅವಮಾನ ಮಾಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಕ್ರತೀರ್ಥ ಸ್ಮಶಾನದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಆರೋಪಿಯು ಉರಿಯುತ್ತಿದ್ದ ಚಿತೆಯ ಬಳಿ ತೆರಳಿ ಮಾನವ ಅವಶೇಷದೊಂದಿಗೆ…