RTI ಸದುಪಯೋಗಕ್ಕಿಂತ ದುರುಪಯೋಗದ ಸುದ್ದಿಗಳೇ ಹೆಚ್ಚಾಗುತ್ತಿವೆ.
ಕೃಪೆ : ಫೇಸ್ಬುಕ್ ವೀರಮಾರ್ಗ ನ್ಯೂಸ್ : ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಜಾರಿಯಾದ ನಂತರ ದೊಡ್ಡ ಸಂಚಲನವೇ ಉಂಟಾಗಿತ್ತು. ಆದರೆ, ಈಗ ಸದುಪಯೋಗಕ್ಕಿಂತ ದುರುಪಯೋಗದ ಸುದ್ದಿಗಳೇ ಹೆಚ್ಚಾಗುತ್ತಿವೆ. ಸರ್ಕಾರದ ಯೋಜನೆಗಳು, ಅವುಗಳು ಜಾರಿ, ವಿವಿಧ ಕಾಮಗಾರಿಗಳು ಹೀಗೆ ಆಡಳಿತ ವ್ಯವಸ್ಥೆಯಲ್ಲಿನ ಆಗುಹೋಗುಗಳ ಮಾಹಿತಿ ಜನರಿಗೂ ತಿಳಿಯಲಿ ಎನ್ನುವ ಕಾರಣಕ್ಕೆ ಮಾಹಿತಿ ಹಕ್ಕು ಕಾಯ್ದೆಯನ್ನು ಪ್ರಜೆಗಳ ಕೈಗೆ ಕೊಡಲಾಗಿದೆ. ಆರ್ಟಿಐ ಬಂದ ನಂತರ ಮಾಹಿತಿ ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವರು ಆರ್ಟಿಐ ಕಾರ್ಯಕರ್ತರ…
ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಆಕ್ರೋಶ ಶಿಡ್ಲಾಪುರ..
ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳು ಭುವನೇಶ್ವರ ಶಿಡ್ಲಾಪುರ ಆಕ್ರೋಶ ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ರಾಜಕೀಯ ಕೆಸರಾಟದಲ್ಲಿ ನಿರತರಾಗಿ ದೇಶದ ಅನ್ನದಾತರ ಬಗ್ಗೆ ಗಮನಹರಿಸುತ್ತಿಲ್ಲ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಸರಿಯಾಗಿ ಸಿಗುತ್ತಿಲ್ಲ ದೇಶಕ್ಕೆ ಅನ್ನ ಕೊಡುವ ರೈತರು ರೈತ ಸಂಪರ್ಕ ಕೇಂದ್ರದ ಎದುರು ಬೀಜಕ್ಕಾಗಿ ಬಂದು ಬೀದಿಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿದೆ. ರಸಗೊಬ್ಬರದ ಬೆಲೆ ಏರಿಕೆಯಾಗಿದ್ದರು ಅಗತ್ಯ ಪ್ರಮಾಣದಲ್ಲಿ ರೈತರಿಗೆ ರಸಗೊಬ್ಬರ ದೊರಕುತ್ತಿಲ್ಲ ಈ ವಿಷಯದಲ್ಲಿ ಸರ್ಕಾರಗಳು ನಾಟಕವಾಡುತ್ತಿವೆ ಸರ್ಕಾರಗಳಿಗೆ…
ಗಾಮನಗಟ್ಟಿ ಮಿಯಾವಾಕಿ ಉದ್ಯಾನವನದ ಅರಣ್ಯ ಬೆಳೆಸಿ.
ಗಾಮನಗಟ್ಟಿ ಮಿಯಾವಾಕಿ ಉದ್ಯಾನವನದ ಅರಣ್ಯ ಬೆಳೆಸಿ ಪರಿಸರ ಸಂರಕ್ಷಣೆಗೆ ಮಾದರಿಯಾದ ಪಾಲಿಕೆ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಹುಬ್ಬಳ್ಳಿ : ಪರಿಸರ ಸಂರಕ್ಷಣೆ ಕುರಿತು ಕೇವಲ ಜಾಗೃತಿ ಮೂಡಿಸುವುದಲ್ಲದೆ, ತಾವೇ ಮುಂದಾಗಿ ಉದ್ಯಾನವನದಲ್ಲಿ ‘ಮಿಯಾವಾಕಿ ಅರಣ್ಯ’ ಬೆಳೆಸುವ ಮೂಲಕ ಮಹಾನಗರ ಪಾಲಿಕೆಯ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ಅವರು ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಸಮೀಪದ ಗಂಗೋತ್ರಿ ಪಾರ್ಕ್ನಲ್ಲಿ ಅವರು ಕೈಗೊಂಡಿರುವ ಈ…
ಪಾಂಡಿಚ್ಚೆರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ –
ವೀರಮಾರ್ಗ ನ್ಯೂಸ್ : ಪಾಂಡಿಚ್ಚೆರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ – ತಡಸಿನಕೊಪ್ಪದ ಇಂದ್ರು ಮಾದೇವ ದುರಗಣ್ಣವರ್ ಸಾಧನೆ ಧಾರವಾಡ : ಇತ್ತೀಚೆಗೆ ಪಾಂಡಿಚ್ಚೆರಿಯಲ್ಲಿ ನಡೆದ 15 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲೆಯ ತಡಸಿನಕೊಪ್ಪ ಗ್ರಾಮದ ಪ್ರತಿಭಾವಂತ ಕ್ರೀಡಾಪಟು ಇಂದ್ರು ಮಾದೇವ ದುರಗಣ್ಣವರ್ ಅವರು ರಾಜ್ಯದ ಪರವಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಕುಸ್ತಿ ಕ್ರೀಡೆಗೆ ಅಪಾರ ಆಸಕ್ತಿ ಹೊಂದಿದ್ದ ಇಂದ್ರು, ಧಾರವಾಡದ ಮಾರುತಿ…
ಮಣ್ಣಿನ ಜೈವಿಕ ಗುಣಲಕ್ಷಣಗಳು
11)👆🌱 ಮಣ್ಣಿನ ಜೈವಿಕ ಗುಣಲಕ್ಷಣಗಳು ಆರೋಗ್ಯಕರ ತೋಟಗಳ ಜೀವಂತ ಅಡಿಪಾಯಮಣ್ಣು ಕೇವಲ ಬೆಳೆಯುವ ಮಾಧ್ಯಮವಲ್ಲ – ಇದು ಜೀವಂತ ಪರಿಸರ ವ್ಯವಸ್ಥೆಯಾಗಿದೆ. ಮಣ್ಣಿನ ಜೈವಿಕ ಗುಣಲಕ್ಷಣಗಳು ಮಣ್ಣಿನಲ್ಲಿರುವ ಜೀವಂತ ಜೀವಿಗಳು ಮತ್ತು ಅವುಗಳ ಚಟುವಟಿಕೆಗಳನ್ನು ಉಲ್ಲೇಖಿಸುತ್ತವೆ, ಇದು ಮಣ್ಣಿನ ಫಲವತ್ತತೆ, ಸಸ್ಯ ಆರೋಗ್ಯ ಮತ್ತು ಸುಸ್ಥಿರ ತೋಟದ ಉತ್ಪಾದಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 🔬 1. ಮಣ್ಣಿನ ಸೂಕ್ಷ್ಮಜೀವಿಗಳು ಮಣ್ಣು ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಆಕ್ಟಿನೊಮೈಸೆಟ್ಗಳು, ಪಾಚಿ ಮತ್ತು ಪ್ರೊಟೊಜೋವಾಗಳಂತಹ ಶತಕೋಟಿ ಸೂಕ್ಷ್ಮಜೀವಿಗಳನ್ನು ಹೊಂದಿದೆ. ಈ ಸೂಕ್ಷ್ಮಜೀವಿಗಳು: ಸಾವಯವ…
CMಆಗ್ಲೇನ್ ಅಂದವನ ಜಾತಕ ಜಾಲಾಡುತ್ತಿರುವ ಬೆಳಗಾವಿ ಪೊಲೀಸ್.
ಮುಖ್ಯಮಂತ್ರಿ ಆಗ್ಲೇನ್ ಅಂದವನ ಜಾತಕ ಜಾಲಾಡುತ್ತಿರುವ ಬೆಳಗಾವಿ ಪೊಲೀಸ್ ! ; 40 ಸಾವಿರ ಜನಕ್ಕೆ ತಿರುಪತಿ ನಾಮ ಹಾಕಿದ್ನಾ ಶಿವಾನಂದ ನೀಲಣ್ಣನವರ ವೀರಮಾರ್ಗ ನ್ಯೂಸ್ : ಬೆಳಗಾವಿ : ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರ್ಗೆ ಸೇರಿದ ಕಚೇರಿಗಳ ಮೇಲೆ ನಡೆದ ದಾಳಿ ಪ್ರಕರಣ ತಿರುವು ಪಡೆಯುತ್ತಿದ್ದು, ಇದೀಗ ತನಿಖೆ ಮತ್ತಷ್ಟು ಗಂಭೀರ ಹಂತ ತಲುಪಿದೆ. ಅಧಿಕಾರಿಗಳು ಶಿವಾನಂದ ನೀಲಣ್ಣನವರ್ಗೆ ಸಂಬಂಧಿಸಿದ ಮೂರು ಕಚೇರಿಗಳು ಹಾಗೂ ಅಪಾರ್ಟ್ಮೆಂಟ್ನಲ್ಲಿದ್ದ ಕೆಲವು ಪ್ಲಾಟ್ಗಳನ್ನು ಸೀಜ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ದಾಳಿಯ ವೇಳೆ…
ಎಫ್ಐಡಿ ಮುಖಾಂತರ ಗೊಬ್ಬರ ಖರೀದಿಸಿ ಬೆಳೆ ಬೆಳೆಯುವುದು ಕಷ್ಟ,
“ಎಫ್ಐಡಿ ಮುಖಾಂತರ ಗೊಬ್ಬರ ಖರೀದಿಸಿ ಬೆಳೆ ಬೆಳೆಯುವುದು ಕಷ್ಟ, “ ಆದೇಶ ಈ ವರ್ಷ ಬೇಡ ಮುಂದಿನ ವರ್ಷ ದಿಂದ ಹಂತ ಹಂತವಾಗಿ ಮಾಡಿ ವೀರಮಾರ್ಗ ನ್ಯೂಸ್ : ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ರಸಗೊಬ್ಬರ. ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಫ್ ಐ ಡಿ ಮುಖಾಂತರ ರೈತರು ಗೊಬ್ಬರ ಖರೀದಿ ಮಾಡಿ ಬೆಳೆ ಬೆಳೆಯುವುದು ಕಷ್ಟ ಆದ್ದರಿಂದ ಮುಂದಿನ ವರ್ಷದಿಂದ ಹಂತ ಹಂತವಾಗಿ ಈ ಆದೇಶವನ್ನು ಜಾರಿಗೆ ತರಬೇಕೆಂದು ರೈತ…
ಆಕ್ಟಿವ್ ಆಗಿದೆಯೇ ಹನಿಟ್ರ್ಯಾಪ್ ಗ್ಯಾಂಗ್..?
ದಾವಣಗೆರೆಯಲ್ಲಿ ಆಕ್ಟಿವ್ ಆಗಿದೆಯೇ ಹನಿಟ್ರ್ಯಾಪ್ ಗ್ಯಾಂಗ್..? ಯುವಕರಿಗೆ ಗಾಳ ಹಾಕಿ ಲಕ್ಷ ಲಕ್ಷ ಸುಲಿಗೆ ಮಾಡುತ್ತಿದ್ದ ಕಿಲಾಡಿಗಳು ಪೊಲೀಸ್ ವಶಕ್ಕೆ! ವೀರಮಾರ್ಗ ನ್ಯೂಸ್ : ದಾವಣಗೆರೆ : ಶ್ರೀಮಂತ ಯುವಕರನ್ನೇ ಟಾರ್ಗೆಟ್ ಮಾಡಿ, ಸ್ನೇಹದ ನಾಟಕವಾಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಒಂದನ್ನು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ ಹೆಡೆಮುರಿ ಕಟ್ಟಿದ್ದಾರೆ. ಯುವಕನಿಗೆ ವಂಚಿಸಿ ಚಿನ್ನ ಹಾಗೂ ನಗದು ಸುಲಿಗೆ ಮಾಡಿದ್ದ ಒಬ್ಬ ಮಹಿಳೆ ಸೇರಿದಂತೆ ಒಟ್ಟು ಐದು ಜನ…
ರಸ್ತೆಗುರುಳಿದ LPG ತಪ್ಪಿದ ನಿಟ್ಟುಸಿರುಬಿಟ್ಟ ಪೊಲೀಸರು.
ರಸ್ತೆಗುರುಳಿದ ಎಲ್ಪಿಜಿ ಇಂಧನ ಹೊತ್ತ ಭಾರಿವಾಹನ : ತಪ್ಪಿದ ಭಾರೀ ದುರಂತ, ನಿಟ್ಟುಸಿರುಬಿಟ್ಟ ಪೊಲೀಸರು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಎಲ್ಪಿಜಿ ಗ್ಯಾಸ್ ಇಂಧನ ಹೊತ್ತ ಭಾರೀ ಗಾತ್ರದ ಟ್ಯಾಂಕರ್ ವಾಹನ ರಸ್ತೆ ಗುರುಳಿ ಆತಂಕ ಸೃಷ್ಟಿ.l ಯಾಗಿತ್ತು. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸದೆ ಕ್ರೇನ್ಗಳು ಬಳಸಿ ಟ್ಯಾಂಕರ್ ವಾಹನ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . ಗುರುವಾರ ಬೆಳಗಿನ…
ವಿದ್ಯಾರ್ಥಿನಿ ಬಂಧನ ₹35 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ ಜಪ್ತಿ.!!
ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಥಿನಿ ಬಂಧನ; ₹35 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ ಜಪ್ತಿ.!! ವೀರಮಾರ್ಗ ನ್ಯೂಸ್ : ಮಂಗಳೂರು : ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಭಾರಿ ಮೌಲ್ಯದ ಹೈಡ್ರೋವಿಡ್ (Hydrovid) ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯ ವಿವರದಿನಾಂಕ 12-05-2026 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ…