ಲಕ್ಷ್ಮೇಶ್ವರ : ಉಗ್ರಹ ಅಟ್ಟಹಾಸ ಖಂಡಿಸಿ ಸಿಎಂಗೆ ಮನವಿ

ಲಕ್ಷ್ಮೇಶ್ವರ : ಉಗ್ರಹ ಅಟ್ಟಹಾಸ ಖಂಡಿಸಿ ಸಿಎಂಗೆ ಮನವಿ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ :
ಕಾಶ್ಮೀರದ ಪಹಲ್ಗಾಮದಲ್ಲಿನ ಉಗ್ರರ ಅಟ್ಟಹಾಸ ಖಂಡಿಸಿ ಗುರುವಾರ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬೈಸರನ್ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ಕೋಮುವಾದಿ ಮನಸ್ಥಿತಿಯಿಂದ ಮುಗ್ಧ ನಾಗರಿಕರ ಮೇಲೆ ನಡೆಸಿದ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಉಗ್ರರು ಅಮಾಯಕರ ಮೇಲೆ ನಡೆಸಿ ಈ ಕೃತ್ಯವನ್ನು ಎಂದಿಗೂ ಕ್ಷಮಿಸಲಾರವು. ಎಲ್ಲಾ ಧರ್ಮಗಳ ಸಾರ ’ಪ್ರೀತಿ’ ಮತ್ತು ’ಅಹಿಂಸೆ’ ಪ್ರೀತಿಯಿಂದ ಸಾಧಿಸಲಾಗದ್ದನ್ನು ಹಿಂಸೆ-ದ್ವೇ?ದಿಂದ ಸಾಧಿಸಲಾಗದು. ಕಾಶ್ಮೀರದ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮುಸ್ಲಿಂ ಸಮಾಜದಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಭದ್ರತಾ ಪಡೆಗಳನ್ನು ಹೆಚ್ಚಾಗಿ ನಿಯೋಜಿಸಬೇಕು. ಇದರಿಂದ ಶಾಂತಿ ಸ್ಥಾಪಿಸಲು ಸಾಧ್ಯ ಮುಗ್ಧ ಜನರನ್ನು ಹತ್ಯೆ ಮಾಡುವುದು ಇಡೀ ಮಾನವತೆಯನ್ನು ಹತ್ಯೆ ಮಾಡಿದಂತೆ.

ಉಗ್ರನ ಬಂದೂಕನ್ನು ಕಸಿದುಕೊಳ್ಳಲು ಯತ್ನಿಸಿದ ಯುವಕ ಪ್ರವಾಸಿಗರಿಗಾಗಿ ಜೀವತೆತ್ತ ಕುದುರೆ ಸವಾರ ಸಯ್ಯದ ಆದಿಲ್ ಹುಸೇನ್‌ಶಾ ತನ್ನ ಜೀವ ಲೆಕ್ಕಿಸದೇ ಹಲವರ ಪ್ರಾಣ ಉಳಿಸಿ ಸಹೋದರತ್ವವನ್ನು ಸಾರಿದ ಏಕಾಂಗಿ ಹೋರಾಟಗಾರನಿಗೆ ಮತ್ತು ಹತ್ಯೆಗೊಳಗಾದ ಆತ್ಮಗಳಿಗೆ ನಮನಗಳು. ದೇಶದ ಏಕತೆ ಹಾಗೂ ಸಮಗ್ರತೆಗೆ ಎಲ್ಲ ಧರ್ಮದವರು ಒಂದಾಗಬೇಕು. ಭಾರತ ದೇಶ ಶಾಂತಿ ಪ್ರಿಯ ದೇಶ ಮತ್ತು ಸಹಬಾಳ್ವೆ-ಸಾಮರಸ್ಯದಿಂದ ಬಾಳುತ್ತಿದ್ದೇವೆ. ಸರ್ಕಾರಗಳು ಉಗ್ರರ ಅಟ್ಟಹಾಸ ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡು ಪ್ರವಾಸಿ ತಾಣಗಳನ್ನು, ಸಾರ್ವಜನಿಕರು ರಕ್ಷಿಸಲು ಸರ್ವಧರ್ಮೀಯರನ್ನು ಈ ಮೂಲಕ ಒಮ್ಮತದಿಂದ ನಾವು ವಿನಂತಿ ಮಾಡುತ್ತೇವೆ. “ಮನುಕುಲಕ್ಕೆ ಮಾರಕವಾದ ಭಯೋತ್ಪಾದಕರನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಸದ್ಯದ ಸ್ಥಿತಿಯಲ್ಲಿ ಅಗತ್ಯ ಎಂದು ಮನವಿಯಲ್ಲಿ ಕೋರಲಾಗಿದೆ.
ಈ ವೇಳೆ ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಎಂ ಗದಗ, ದೂದಪೀರಾಂ ದರ್ಗಾ ಕಮೀಟಿ ಅಧ್ಯಕ್ಷ ಸುಲೆಮಾನಸಾಬ ಕಣಿಕೆ, ಪುರಸಭೆ ಉಪಾಧ್ಯಕ್ಷ ಫಿರ್ಧೊಸ್ ಆಡೂರ, ಎಸ್,ಕೆ ಹವಾಲ್ದಾರ, ಮುಸ್ತಾಕ್ಮದ ಶಿರಹಟ್ಟಿ, ಇಸ್ಮಾಯಿಲ್ ಆಡೂರ, ಕಲಂದರ ಸೂರಣಗಿ. ದಾದಾಪೀರ ತಂಬಾಕದ, ಭಾಷಾ ಶಿರಹಟ್ಟಿ ಸೇರಿ ಮುಸ್ಲಿಂ ಸಮುದಾಯದ ಮುಖಂಡರು, ಯುವರಕು ಇದ್ದರು. ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು.