ಬಂಕಾಪುರ: ಸಿಡಿಲು ಬಡಿದು ಮೃತಪಟ್ಟ ಕುರಿಗಾಹಿ ಸೋಮಣ್ಣ ಗಡ್ಡೆ, ಮಗ ಹೆಚ್ಚಿನ ಚಿಕಿತ್ಸೆಗೆ ಕೀಮ್ಸ್ಗೆ ದಾಖಲೆ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಕುರಿಗಳನ್ನು ಮೇಯಿಸುತ್ತಿದ್ದ ತಂದೆ-ಮಗನಿಗೆ ಸಿಡಿಲು ಬಡಿದು, ತಂದೆ ಸ್ಥಳದಲ್ಲೇ ಮೃತಪಟ್ಟು, ಮಗ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಮೂಕಬಸರೀಕಟ್ಟಿ ಗ್ರಾಮದ ಹೊರ ವಲಯದಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ನತದೃಷ್ಠ ಕುರಿಗಾಯಿ ಮೃತನನ್ನು ತಾಲೂಕಿನ ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ (೪೫) ಎಂದು ಗುರುತಿಸಲಾಗಿದೆ. ತೀವೃ ಗಾಯಗೊಂಡ ಮೃತರ ಮಗ ಆಕಾಶ ಸೋಮಣ್ಣ ಗಡ್ಡೆ (೧೯) ಶಿಗ್ಗಾವಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರವಿಕುಮಾರ ಕೊರವರ, ಉಪ ತಹಶೀಲ್ದಾರ ವೆಂಕಟೇಶ ಕುಲಕರ್ಣಿ, ಪಿಎಸ್ಐ ನಿಂಗರಾಜ ಕರಕಣ್ಣವರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪರಿಶೀಲಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
