ತಾಪಂ ಕಛೇರಿಯಲ್ಲಿ ಬಾಬೂ ಜಗಜೀವನರಾಮ್ ಜಯಂತಿ ಆಚರಣೆ
ವೀರಮಾರ್ಗ ನ್ಯೂಸ್ ರಾಣೇಬೆನ್ನೂರು : ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬೂ ಜಗಜೀವನರಾಮ್ ಅವರ ೧೧೮ನೇ ಜಯಂತ್ಯುತ್ಸವವನ್ನು ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಸಾಂಕೇತಿಕವಾಗಿ ಆಚರಿಸಲಾಯಿತು.
ಶಾಸಕ ಪ್ರಕಾಶ ಕೋಳಿವಾಡ, ಗ್ರೇಡ್-೨ ತಹಸೀಲ್ದಾರ ಅರುಣ ಕಾರಗಿ, ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತೇಶ ಸಿ.ಬಿ., ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಜು ಶಿರೂರ, ಸಿಡಿಪಿಓ ಪಾರ್ವತಿ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ನೀಲಕಂಠ ಅಂಗಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿದೇಶಕ ನೂರ ಅಹ್ಮದ್ ಹಲಗೇರಿ, ನಗರ ಯೋಜನಾ ಪ್ರಾಧಿಕಾರ ಕಾರ್ಯದರ್ಶಿ ರವಿಕಿರಣ, ಇಂಜಿನಿಯರ್ ರಾಕೇಶ ರೆಡ್ಡಿ, ಚಂದ್ರಣ್ಣ ಬೇಡರ, ಸಣ್ಣತಮ್ಮಪ್ಪ ಬಾರ್ಕಿ,ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮನವರ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಹನುಮಂತಪ್ಪ ಕಬ್ಬಾರ, ಮಲ್ಲೇಶಪ್ಪ ಮದ್ಲೇರ, ಶ್ರೀಧರ ಚಲವಾದಿ, ಭರತರೆಡ್ಡಿ ಮತ್ತಿತರರಿದ್ದರು.
ತಾಪಂ ಕಛೇರಿಯಲ್ಲಿ ಬಾಬೂ ಜಗಜೀವನರಾಮ್ ಜಯಂತಿ ಆಚರಣೆ
