ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ : ಶಾಸಕ ಮಾನೆ
ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ : ಶಾಸಕ ಮಾನೆವೀರಮಾರ್ಗ ನ್ಯೂಸ್ ಹಾನಗಲ್ : ವ್ಯವಸ್ಥೆ ಬದಲಾಗಬೇಕಾದರೆ ನಾವೂ ಸಹ ಬದಲಾವಣೆಯ ಭಾಗವಾಗಬೇಕು. ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಹಾವಣಗಿ ಗ್ರಾಮದಲ್ಲಿ ಇಲ್ಲಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ, ಜಾತಿಗಳ ಹೆಸರಿನಲ್ಲಿ ಬಡಿದಾಡುವುದು ಈ ನೆಲದ ಸಂಸ್ಕೃತಿ ಅಲ್ಲ. ಸಾಮರಸ್ಯ, ಸೌಹಾರ್ದತೆಯಿಂದ ಪರಸ್ಪರ…