ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ವಾತ್ಸಲ್ಯ ಕಿಟ್ ವಿತರಣೆ..
ವೀರಮಾರ್ಗ ನ್ಯೂಸ್ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ದೊದ್ದನಕಟ್ಟೆ ಕಾಳಮ್ಮ ಅವರಿಗೆ ವಾತ್ಸಲ್ಯ ಕಿಟ್ ವಿತರಣೆ..ಮಾನವೀಯ ಮೌಲ್ಯಗಳು ಹಾಗೂ ಸೇವಾ ಸಂಕಲ್ಪದ ಜೀವಂತ ಪ್ರತಿರೂಪವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.ಪೂಜ್ಯ ಖಾವಂದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ, ಸಮಾಜದ ಅಂಚಿನಲ್ಲಿರುವ ಆಶ್ರಯವಿಲ್ಲದ ಹಾಗೂ ದುಡಿಯಲು ಅಶಕ್ತರಾದ ವಯೋವೃದ್ಧ ಬಡವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯ…