ಏ.೨೦ ರಿಂದ ಲಿಂ.ಶ್ರೀ ಕಾಡಸಿದ್ದೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ
ವೀರಮಾರ್ಗ ನ್ಯೂಸ್ ಗುಳೇದಗುಡ್ಡ : ಮರಡಿ ಮಠದ ೧೦ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ, ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ರಥೋತ್ಸವದ ಲೋಕಾರ್ಪಣೆ ಕಾರ್ಯಕ್ರಮ ಏ.೨೦ ರಿಂದ ೨೭ರ ವರೆಗೆ ನಡೆಯಲಿದೆ ಎಂದು ಅಮರೇಶ್ವರ ಮಠದ ಶ್ರೀ ನೀಲಕಂಠ ಸ್ವಾಮಿಗಳು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ವಾರದ ವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ, ತುಲಾಭಾರ, ಪ್ರಭಾತ ಯಾತ್ರೆ, ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಅಂಗವಾಗಿ ಏ.೨೦ರಿಂದ ೨೪ರ ವರೆಗೆ ದಿನನಿತ್ಯ ಸಂಜೆ ೭ ಗಂಟೆಗೆ ಕಮತಗಿಯ ಗಣೇಶ ಶಾಸ್ತ್ರಿಗಳಿಂದ ವಿವೇಕ ದರ್ಶನ ಪ್ರವಚನ ನೀಡುವರು.

ಪ್ರವಚನ ಉದ್ಘಾಟನಾ ಕಾರ್ಯಕ್ರಮ ಏ. ೨೦ರಂದು ಸಂಜೆ ೭ಗಂಟೆಗೆ ನಡೆಯಲಿದ್ದು, ಬಿಲ್ ಕೆರೂರಿನ ಬಿಲ್ವಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮಿಗಳು ಪ್ರವಚನ ಉದ್ಘಾಟಿಸುವರು. ಹೊಳೆಹುಚ್ಚೇಶ್ವರ ಮಠದ ಶ್ರೀ ಹುಚ್ಚೇಶ್ವರ ಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಸಿದ್ದನಗೊಳ್ಳದ ಶ್ರೀ ಶಿವಕುಮಾರ ಸ್ವಾಮಿಗಳು ಸಾನಿಧ್ಯ ವಹಿಸುವರು. ವಿಪ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹೇಶ ಬಿಜಾಪೂರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಸಂಜು ಕಾರಕೂನ, ಪಿ.ಎನ್. ಪವಾರ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಸಂಗಪ್ಪ ಜವಳಿ, ಡಾ.ವಿ.ಎ. ಬೆನಕನಾಳ, ಎಸ್.ಐ.ರಾಜನಾಳ, ಚಂದ್ರಶೇಖರ ತಾಂಡೂರ, ರವಿ ಗೌಡರ, ವಿಶ್ವನಾಥ ಹಿರೇಮಠ, ಮಲ್ಲಿಕಾರ್ಜುನ ಶೀಲವಂತ, ವೀರಣ್ಣ ಕುರಹಟ್ಟಿ, ಪ್ರಕಾಶ ಅಂಕದ, ಸಚಿನ ತೊಗರಿ, ಪ್ರಶಾಂತ ಜವಳಿ, ಭುವನೇಶ ಪೂಜಾರ, ಮುತ್ತಣ್ಣ ದೇವರಮನಿ, ಮಹೇಶ ಸೂಳಿಭಾವಿ, ಎಂ.ಎಸ್. ಹಿರೇಮಠ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.