ವೀರ ಮಾರ್ಗ

ಅಡ್ಡಬಂದ ಕತ್ತೆ ಕಿರುಬ ಠಾಣೆ ASI ಗಂಭೀರ,,,

ವೀರಮಾರ್ಗ ನ್ಯೂಸ್ : ಗದಗ : ಪೊಲೀಸ್ ಜೀಪ್ ಗೆ ಅಡ್ಡಬಂದ ಕತ್ತೆ ಕಿರುಬ,,, ಬೆಟಗೇರಿ ಠಾಣೆ ASI ಗಂಭೀರ, ಇನ್ನಿಬ್ಬರಿಗೆ ಗಾಯ! ರಸ್ತೆ ದಾಟುವಾಗ ಪೊಲೀಸ್ ಜೀಪ್ ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ ಪರಿಣಾಮವಾಗಿ ಕತ್ತೆ ಕಿರುಬ ಸಾವನ್ನಪ್ಪಿದ್ದಲ್ಲದೆ, ಪೊಲೀಸ್ ಜೀಪ್ ನಲ್ಲಿದ್ದ ಬೆಟಗೇರಿ ಠಾಣಾ ASI ಗಂಭೀರವಾಗಿ ಗಾಯಗೊಂಡ ಘಟನೆ ಗದಗ ತಾಲೂಕಿನ ಸೊರಟೂರು ಗ್ರಾಮದ ಬಳಿ ನಡೆದಿದೆ. ಬೆಟಗೇರಿ ಠಾಣೆ ASI ಕಾಶಿಮ್ ಸಾಬ್ ಹರಿವಾಣ ಗೆ ಗಂಭೀರವಾಗಿ ಗಾಯ…

Read More

ಚಿನ್ನದ ಸರದ ಆಸೆಗೆ ಮಾವನ ಮಗಳನ್ನೇ ಕೊಂದು ಭೂಪ…

ವೀರಮಾರ್ಗ ನ್ಯೂಸ್ : ಹಾಸನ : ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳನ್ನೇ ಕೊಂದು ಹೃದಯಾಘಾತ ಎಂದು ಬಿಂಬಿಸಿ, ಸತ್ಯ ಹೊರಬರುತ್ತಿದ್ದಂತೆ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಮಾವನ ಮಗಳನ್ನೇ ಕೊಂದ ಆರೋಪಿ. ತನಿಖೆ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷಗಳ ಹಿಂದೆ ಪಾಲಾಕ್ಷ ಜೊತೆ ವಿವಾಹವಾಗಿದ್ದ ಶಕುಂತಲಾ, ಮಕ್ಕಳಿಲ್ಲದ ಕಾರಣ ಮನೆಯಲ್ಲಿ…

Read More

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ…

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲೆ : ಚನ್ನಗಿರಿ ತಾಲ್ಲೂಕು ಇಟ್ಟಿಗಿ ಗ್ರಾಮ ಪಂಚಾಯತ್ ನಲ್ಲಿ ಗಂಗಾಮತ ಜಾತಿಗೆ ಒಬಿಸಿ ಗೆ ಸೇರಿದ ನಿಂಗರಾಜ್ ಎಂಬುವನು ಎಸ್ ಸಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ಮೋಸ ಮಾಡಿ ಸುಳ್ಳು ಎಸ್ ಸಿ ಜಾತಿ ಪ್ರಮಾಣ ಪತ್ರ ಪಡೆದು sc ಸಮುದಾಯಕ್ಕೆ ಮೋಸ ಮಾಡಿರುತ್ತಾನೆ ಈ ವಿಷಯ ತಿಳಿದ ಕರ್ನಾಟಕದಲ್ಲಿ ಸಂಘರ್ಷ ಸಮಿತಿ ಸಂಚಾಲಕರಾದ ಆನಂದ್ ಕಗ ತೂರ್ ರವರು ಎಸ್ ಸಿ ಎಸ್ ಟಿ ಸೇಲ್…

Read More

ಅಭಿವೃದ್ಧಿಗೆ ಹೊಸ ಕಾಯಕಲ್ಪ!!

ಅಭಿವೃದ್ಧಿಗೆ ಹೊಸ ಕಾಯಕಲ್ಪ!! ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ಭಕ್ತರು ದೇವಸ್ಥಾನಕ್ಕೆ ಉತ್ತರ ಈಶಾನ್ಯದ ಮೂಲಕ ಆಗಮಿಸಲು ಮೆಟ್ಟಿಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದವರು ಭರವಸೆ ನೀಡಿದರು. ಸಮಿತಿಯ ಕಾನೂನು ಸಲಹೆಗಾರ, ನ್ಯಾಯವಾದಿ ಶರಣಬಸವ ಅಂಗಡಿಯವರು ಮಾತನಾಡಿ ಕಳೆದ 50 ವರ್ಷಗಳಿಂದ ಹಳೆ ಸಮಿತಿ ಅಸ್ತಿತ್ವದಲ್ಲಿದ್ದು ಏನೊಂದು ಅಭಿವೃದ್ಧಿ ಕಾರ್ಯ ಮಾಡದೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಭಕ್ತರನ್ನು ವಂಚಿಸಿದೆ. ಕೆಲವೆಡೆ ಅವ್ಯವಹಾರ, ಹಣದ ಹಾಗೂ ಅಧಿಕಾರದ ದುರುಪಯೋಗ ಆಗಿದೆ ಎನ್ನುವ ಆರೋಪವಿದ್ದು, ಇನ್ನು ಮುಂದೆ…

Read More

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ವೀರಮಾರ್ಗ ನ್ಯೂಸ್ : ದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು(ಸೆ.21) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿಯವರ ಭಾಷಣವು GST ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೊಸ GST 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿವೆ ಎಂಬುದು ಗಮನಿಸಬೇಕಾದ ಸಂಗತಿ. ನವದೆಹಲಿ, ಸೆಪ್ಟೆಂಬರ್ 21: ಪ್ರಧಾನಿ ನರೇಂದ್ರ ಮೋದಿ ಇಂದು…

Read More

ಸರಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು ವಿಫಲ KRS ಪಕ್ಷ…

ಒತ್ತುವರಿಯಾದ ಸರ್ಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು ವಿಫಲ ಕೆ ಆರ್ ಎಸ್ ಪಕ್ಷ ಆರೋಪ. ಗಂಗಾವತಿ.ಇಂದು ಗಂಗಾವತಿ ತಾಲೂಕಿನ ಬಸಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 54/*/3 ವಿಸ್ತೀರ್ಣ 1 ಎಕರೆ 36 ಗುಂಟೆ ಭೂಮಿ ಬಸಪಟ್ಟಣ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಮೀಸಲಿಟ್ಟ ಸರ್ಕಾರಿ ಗಾಯರಾಣ ಭೂಮಿಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಈ ಸರ್ವೇ ಭೂಮಿಯಲ್ಲಿ ಸದ್ಯ ಭತ್ತವನ್ನು ನಾಟಿ ಮಾಡಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಯಾವುದೇ ಭಯ…

Read More

ಕೋರ್ಟ್ ಆವರಣದಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ…

ದಾವಣಗೆರೆ : ಕೋರ್ಟ್ ಆವರಣದಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ… ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ವಿಚ್ಛೇದನ ಅರ್ಜಿ ವಿಚಾರಣೆಗೆ ಕೋರ್ಟ್ ಒಳಗೆ ಬರುತ್ತಿದ್ದಂತೆ ಪತ್ನಿಗೆ ಪತಿಯೇ ಚಾಕು ಇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ನಿವಾಸಿಯಾದ 30 ವರ್ಷದ ಪದ್ಮಾವತಿ, ಪತಿ ಪ್ರವೀಣ್ ಕುಮಾರ್‌ನಿಂದ ಹಲ್ಲೆಗೆ ಒಳಗಾದ ಮಹಿಳೆ. ಪತಿ, ಪತ್ನಿ ನಡುವೆ ಮನಸ್ತಾಪ, ಜಗಳಕ್ಕೆ ಅಂತ್ಯ ಹಾಡಲು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ವಿಚಾರಣೆ ನಡೆಯುತ್ತಿತ್ತು….

Read More

ಪಂಚ ಸೇನೆಯಿಂದ ಮಹತ್ವದ ಸಭೆ…

ಮಹತ್ವದ ಸಭೆ ನಡೆಸಿದ ಪಂಚೆ ಸೇನೆಯ ಯುವ ಸೈನಿಕರು. ಪಂಚೆ ಸೇನೆ ಯುವ ಸೈನಿಕರಿಗೆ ಮಾತೃ ಘಟಕದ ಹಿರಿಯರಿಂದ ಸಲಹೆ ಮತ್ತು ಮಾರ್ಗದರ್ಶನ. ಪಂಚೆ ಸೇನೆಯ ಯುವಕರು ಹಾನಗಲ್ ತಾಲೂಕಿನ ಹಳ್ಳಿಯ ಮನೆ ಮನೆಗೆ ತೆರಳಿ ಮಾಹಿತಿ ನೀಡಿದರು. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್ : ಸಂಜೆ 7ಘಂಟೆಗೆ ಹಾನಗಲ್ಲ ತಾಲೂಕಾ ಪಂಚಸೇನಾ ಸಂಘಟನೆ ತಾಲೂಕಾ ಘಟಕದಿಂದ ಜಾತಿ ಗಣತಿ ಜಾಗೃತಿ ಸಭೆಯನ್ನು ಹಾನಗಲ್ಲ ತಾಲೂಕ ಸಮಸಗಿ ಗ್ರಾಮದಲ್ಲಿ ಮಾಡಲಾಯಿತು.ಈ ಸಭೆಯಲ್ಲಿ ಜಾತಿ…

Read More

ಅಪಘಾತದಲ್ಲಿ ಯುವಕ ಬಲಿ.

ವೀರಮಾರ್ಗ ನ್ಯೂಸ್ : ಎಚ್.ಡಿ.ಕೋಟೆ : ಸ್ನೇಹಿತರ ಮನೆಯಲ್ಲಿ ಪಿತೃಪಕ್ಷದ ಊಟ ಮುಗಿಸಿ ದ್ವಿ-ಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಯುವಕ ಬಲಿಯಾಗಿದ್ದಾನೆ. ಎಚ್‌.ಡಿ.ಕೋಟೆ ಪಟ್ಟಣದ ನಿವಾಸಿ ಮಂಜುನಾಥ್(42) ಮೃತ ದುರ್ದೈವಿ. ಗುರುವಾರ ರಾತ್ರಿ 11:30ರ ವೇಳೆಯಲ್ಲಿ ಹುಣಸೂರು-ಬೇಗೂರು ರಸ್ತೆ ಮಾರ್ಗದ ಕೆ.ಎಡತೊರೆ ಬಳಿ ಬರುತ್ತಿದ್ದ ಹಿಂಬದಿಯಿಂದ ಅತಿ ವೇಗದಲ್ಲಿ ಬರುತ್ತಿದ್ದ ಕಾರೊಂದು ಬೈಕ್ ಗೆ ಗುದ್ದಿದ ಕಾರಣ ಸುಮಾರು 100ಮೀ. ದೂರದ ಕಂದಕಕ್ಕೆ ಉರುಳಿದ ಬೈಕ್ ಸವಾರನ ತಲೆಗೆ ಕಲ್ಲೊಂದು ಒಡೆದ ಪರಿಣಾಮ ಸ್ಥಳದಲ್ಲಿಯೇ…

Read More