ವೀರಾ ಮಾರ್ಗ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆಲಸ ಮಾಡುತ್ತಿದೆ. ಮಹಿಳೆಯರು ಮೌಡ್ಯಗಳಿಂದ ಹೊರ ಬಂದು ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದು ಸಮಾಜ ಸೇವಕ, ಜಿಲ್ಲಾ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು

ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಗ್ರಾಮಗಳ ಸಮಗ್ರವಾದ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ನಿಂತಿದೆ ಎಂಬ ಸತ್ಯ ಅರಿತಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಭಿವೃದ್ಧಿ ಯೋಜನೆಯ ಮೂಲಕ ಒಂದು ಸರ್ಕಾರವು ಮಾಡಲಾಗದ ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಬಡವರ ಪಾಲಿನ ಕಾಮಧೇನು ವಾಗಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಬ್ಯಾoಕುಗಳ ಮೂಲಕ ಸಾಲ ಸೌಲಭ್ಯವನ್ನು ಕೊಡಿಸಿ ಗುಡಿ ಕೈಗಾರಿಕೆಗಳ ಸ್ಥಾಪನೆಗೆ…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನಾ ರಾಶಿ ವರಗೆ.

ವಾರ ಭವಿಷ್ಯ ಮೇಷದಿಂದ ಮೀನಾ ರಾಶಿ ವರಗೆ. ಮೇಷ ರಾಶಿ : ಈ ವಾರ ನಿಮ್ಮ ಮನೆಯ ನವೀಕರಣ ಅಥವಾ ದುರಾಸೆಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ಆರಂಭದಲ್ಲಿ ನೀವು ಇದನ್ನು ಊಹಿಸಲಾರರು ಆದರೆ ಈ ವೆಚ್ಚವುಗಳು ನಿಮ್ಮ ಮುಂದಿನ ಸಮಯದಲ್ಲಿ ಹಾರ್ದಿಕ ಬಿಕ್ಕಟ್ಟನ್ನು ಸೃಷ್ಟಿಸಲು ಮುಖ್ಯ ಕಾರಣವಾಗಿ ಹೊರಹೊಮ್ಮುತ್ತದೆ. ಈ ವಾರ ಕುಟುಂಬ ಸಮಸ್ಯೆಗಳಿಗೆ ಸಂಬಂಧಿಸಿದ ನಿಮ್ಮ ಸ್ವಾರ್ಥ ತೀರ್ಪು ಕುಟುಂಬ ಸದಸ್ಯರನ್ನು ನಿಮ್ಮ ವಿರುದ್ಧ ತಿರುಗಿಸಬಹುದು. ಆದ್ದರಿಂದ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು…

Read More

ಕ್ರೈಂ ಬ್ರಾಂಚ್ ಆಫೀಸರ್ ಹೆಸರಲ್ಲಿ ಯುವತಿಯರಿಗೆ ಕಿರುಕುಳ.. ಹೋಮ್ ಗಾರ್ಡ್ ಅರೆಸ್ಟ್..!

ವೀರಮಾರ್ಗ ನ್ಯೂಸ್ : BENGALUR STATE NEWS : ರಾತ್ರಿ ವೇಳೆ ನಾನು ಪೊಲೀಸ್ ಅಂತ ಯುವತಿಯರ ರೂಂಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಹೋಂ ಗಾರ್ಡ್ ಸುರೇಶ್ ಕಿರುಕುಳ ಕೊಡ್ತಿದ್ದ.. ಪೊಲೀಸರು ಸ್ಥಳಕ್ಕೆ ಬರ್ತಿದ್ದಂತೆ ಹೋಂ ಗಾರ್ಡ್ ಬಣ್ಣ ಬಯಲು. ಕಳೆದ ಆರು ತಿಂಗಳಿನಿಂದ ಟಾರ್ಚರ್ ಕೊಡ್ತಿದ್ದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ‌ ಹೋಂ ಗಾರ್ಡ್ ಸುರೇಶ್ ವಿರುದ್ಧ FIR ದಾಖಲು. ಕೇರಳದಿಂದ ಬೆಂಗಳೂರಿಗೆ ಬಂದು ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಓದ್ತಿದ್ದ ವಿದ್ಯಾರ್ಥಿನಿ. 2ನೇ ವರ್ಷದ ಬಿಎಸ್ ಸಿ…

Read More

ಸಸ್ಯಗಳಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ತಾಪಮಾನದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು

ಸಸ್ಯಗಳಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಒಪ್ಪಂದ ಮಾಡಿಕೊಳ್ಳುತ್ತದೆ, ಸೂಕ್ತವಾದ ತಾಪಮಾನವು ಸಾಮಾನ್ಯವಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಆದರೆ ತೀವ್ರವಾದ ಶಾಖ ಅಥವಾ ಶೀತವು ಬೇರಿನ ಬೆಳವಣಿಗೆ, ಮಣ್ಣಿನ ಸೂಕ್ಷ್ಮಜೀವಿಯ ಚಟುವಟಿಕೆ ಮತ್ತು ಸಸ್ಯದ ಚಯಾಪಚಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಮೂಲಕ ಈ ಪ್ರಕ್ರಿಯೆಗೆ ಅಡ್ಡಿಯಾಗಬಹುದು; ಮೂಲಭೂತವಾಗಿ, ಸೂಕ್ತವಾದ ವ್ಯಾಪ್ತಿಯಲ್ಲಿ, ಬೆಚ್ಚಗಿನ ತಾಪಮಾನವು ಮಣ್ಣಿನಲ್ಲಿ ಬೇರುಗಳ ಬೆಳವಣಿಗೆ ಮತ್ತು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಆದರೆ ಹೆಚ್ಚಿನ ಅಥವಾ ಕಡಿಮೆ ತಾಪಮಾನವು ಈ ಕಾರ್ಯಗಳನ್ನು…

Read More

ಜನಸ್ನೇಹಿ ಬಜೆಟ್‌ಗಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ದೇಶದ ಆರ್ಥಿಕತೆಯನ್ನು ಸುಭದ್ರವಾಗಿಸಿ, ವಿಕಸಿತ ಭಾರತದ ನಿರ್ಮಾಣದ ಸಂಕಲ್ಪ ಈಡೇರಿಸುವ ಅತ್ಯುತ್ತಮ ಬಜೆಟ್ ಮಂಡಿಸಿದೆ. ಜನಸಾಮಾನ್ಯರಿಗೆ ಭರವಸೆ ಮೂಡಿಸುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ. ಜನಸ್ನೇಹಿ ಬಜೆಟ್‌ಗಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ರೇಣಕನಗೌಡ ಪಾಟೀಲ, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರು, ಶಿಗ್ಗಾಂವ.

Read More

ಇದೊಂದು ಜನ ಸ್ನೇಹಿ ಬಜೆಟ್ ಎಂದ ಶ್ರೀ ಗದಿಗೆಪ್ಪಗೌಡ.G ಹೊಟ್ಟಿ ಗೌಡರು

ಜನರ ಜೆಬಿಗೆ ಭಾರವಾಗದ ಬಜೆಟ್ 1) ದೇಶದ ರೈತರಿಗೆ 100 ಜಿಲ್ಲೆಗಳಲ್ಲಿ ಕೃಷಿಯಿಂದ ಉತ್ತಮವಾದ ಯೋಜನೆಗಳನ್ನು ರೂಪಿಸಿದ್ದಾರೆ. 2) ವಿಶೇಷವಾಗಿ ಹತ್ತಿ ಬೆಳೆಯುವ ಬೆಳೆಗಾರರಿಗೆ ಬರುವ ಮುಂದಿನ 5 ವರ್ಷದಲ್ಲಿ ಹೊಸ ಯೋಜನೆ ರೂಪಿಸಿದ್ದಾರೆ. ಇದು ಬಹಳಷ್ಟು ರೈತರಿಗೆ ಅನುಕೂಲವಾಗಲಿದೆ 3) ಸಣ್ಣ ಮಧ್ಯಮ ವರ್ಗದವರಿಗೆ ಟ್ಯಾಕ್ಸ್ ಕಟ್ಟುವ ತೆರಿಗೆದಾರಿಗೆ 12 ಲಕ್ಷದವರೆಗೆ ಆದಾಯದ ಮಿತಿಯನ್ನು ಹೆಚ್ಚಿಸಿದ್ದಾರೆ ಅವರಿಗೆ ಯಾವುದೇ ತರದ ಆದಾಯ ತೆರಿಗೆ ಇರುವುದಿಲ್ಲ ವಿನಾಯಿತಿ ಕೊಡುಗೆ ಕೊಟ್ಟಿದ್ದಾರೆ. ಇದು ಮಧ್ಯಮ ವರ್ಗದವರಿಗೆ ಬಹಳ ಸಹಕಾರಿ…

Read More

ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಚರಿಸೋಣ.!

ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿ ದೇಶದಲ್ಲಿಯೆ ಮೊದಲು ಸೋಲಿನ ರುಚಿ ತೋರಿಸಿದ ಪ್ರಥಮ ಸ್ವಾತಂ ತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು,ಅರ್ಥಪೂರ್ಣವಾಗಿ ಆಚರಿ ಸೊಣ ಎಂದು ಕೂಡಲಸಂಗಮ ಪಂಚಮ ಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.ಅವರು ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಅನೇಕ ಹೋರಾ ಟಗಾರರ ನಾಡಿನಲ್ಲಿ ಅವರ ಸ್ಮರಣೆ ಸದಾ…

Read More

ಸಸಿಗಳನ್ನು ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡು ಅಕ್ಸಿಜನ್ ಕ್ರಾಂತಿ ಯೋಜನೆಗೆ ಬೆಂಬಲ ನೀಡುವ ಕಾರ್ಯ ಶ್ಲಾಘನೀಯ ….. ಪಂಪಾಪತಿ ಕೆ.ಎಸ್.

ಸಿಂಧನೂರು ನಗರದ ಜನತಾ ಕಾಲೋನಿಯ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶನಿವಾರ ವನಸಿರಿ ಪೌಂಡೇಷನ್(ರಿ). ರಾಯಚೂರು ರಾಜ್ಯ ಘಟಕದ ವತಿಯಿಂದ ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಕಾರ್ಯಕ್ರಮ ಹಾಗೂ ಪರಿಸರ ಪ್ರೇಮಿಗಳು,ಶಿಕ್ಷಣ ಪ್ರೇಮಿಗಳು ಹಾಗೂ ವನಸಿರಿ ಪೌಂಡೇಷನ್ ಮಾರ್ಗದರ್ಶಕರಾದ ಶಂಕರಗೌಡ ಎಲೆಕೊಡ್ಲಿಗಿ ಅವರ 41ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಪಂಪಾಪತಿ ಮಾತನಾಡಿ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ…

Read More

ಅತ್ಯಾಚಾರಕ್ಕೊಳಗಾಗಿ 16 ವರ್ಷದ ಅಪ್ರಾಪ್ತ ಬಾಲಕಿ ಧರಿಸಿರುವ 28 ವಾರಗಳ ಗರ್ಭವನ್ನು ತೆಗೆಯಲು ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವೀರಮಾರ್ಗ ನ್ಯೂಸ್: ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ 16 ವರ್ಷದ ಅಪ್ರಾಪ್ತ ಬಾಲಕಿ ಧರಿಸಿರುವ 28 ವಾರಗಳ ಗರ್ಭವನ್ನು ತೆಗೆಯಲು ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ ಸಂತ್ರಸ್ತ ಬಾಲಕಿಯ ವೈದ್ಯಕೀಯ ಗರ್ಭಪಾತದ ವೆಚ್ಚವನ್ನು ಆಸ್ಪತ್ರೆ ಭರಿಸಬೇಕು ಎಂದೂ ಸೂಚಿಸಿದೆ. ಸಂತ್ರಸ್ತ ಬಾಲಕಿಯ ಪರವಾಗಿ ಯಲಹಂಕ ನಿವಾಸಿಯಾದ ಆಕೆಯ ತಾಯಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಸಂತ್ರಸ್ತೆಯ ಜೀವಕ್ಕೆ ಹಾನಿಯಾಗದಂತೆ ಗರ್ಭಪಾತ ಮಾಡುವ ಸಂಬಂಧ…

Read More

ಫೆ.01 ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಕಚೇರಿ ಉದ್ಘಾಟನೆ.

ಚಿತ್ರದುರ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿö್ಮÃ ನೊಂದಣಿಯಲ್ಲಿ ಚಿತ್ರದುರ್ಗ ಜಿಲ್ಲೆ 3ನೇ ಸ್ಥಾನದಲ್ಲಿದೆ. ಉಳಿದ ಗ್ಯಾರಂಟಿ ಯೋಜನೆಗಳು ಸಹ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿವೆ. ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಕಚೇರಿಯನ್ನು ನಗರದ ಜಿ.ಪಂ.ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ನೂತನ ಕಚೇರಿಯನ್ನು ಫೆ.01 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್…

Read More