ಹಾಡುಹಗಲೇ ಕಳ್ಳತನ : ATMಗೆ ಹಣ ಸಾಗಿಸುವ ವಾಹನಕ್ಕೆ ಅಟ್ಯಾಕ್,,,,

ವೀರಮಾರ್ಗ ನ್ಯೂಸ್ : ಬೆಂಗಳೂರು : ಬೆಂಗಳೂರಿನಲ್ಲಿ ಹಾಡುಹಗಲೇ ಕಳ್ಳತನ : ATMಗೆ ಹಣ ಸಾಗಿಸುವ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ.!

ಬೆಂಗಳೂರು : ನಗರದಲ್ಲಿ ಹಾಡ ಹಗಲೇ ಎಟಿಎಂ ಹಣ ತುಂಬುವ ವಾಹನದಿಂದ ಕೋಟಿ ಕೋಟಿ ರಾಬರಿ ನಡೆದಿದೆ. ಹೌದು ನಗರದಲ್ಲಿ ದುಷ್ಕರ್ಮಿಗಳು ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಿದ್ದಾರೆ.

ಈ ಘಟನೆ ನಗರ ಅಶೋಕ ಪಿಲ್ಲರ್ ಬಳಿ ನಡೆದಿದೆ. ಸಿಎಂಎಸ್ ಕಂಪನಿಗೆ ಸೇರಿದ ವಾಹನದಿಂದ ಹಣ ರಾಬರಿ ಮಾಡಲಾಗಿದೆ.

ಜೆಪಿ ನಗರ ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಹಣ ತರ್ತಿದ್ದ ಸಿಎಂಎಸ್ ವಾಹನವನ್ನು ಇನ್ನೋವಾ ಕಾರಿನಲ್ಲಿ ಬಂದ ರಾಬರ್ಸ್ ಅಡ್ಡಗಟ್ಟಿದ್ದಾರೆ.

ಈ ವೇಳೆ ನಾವು ಸೆಂಟ್ರಲ್ ಟ್ಯಾಕ್ಸ್ ಆಫೀಸರ್ಸ್, ಡಾಕ್ಯುಮೆಂಟ್ ವೆರಿಫೈ ಮಾಡಬೇಕು ಎಂದಿದ್ದಾರೆ.

ಈ ವೇಳೆ ಹಣದ ಸಮೇತ ಸಿಬ್ಬಂದಿಯನ್ನ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ.

ಡೈರಿ ಸರ್ಕಲ್ ಬಳಿ ಕರೆದೋಯ್ದು ಸಿಎಂಎಸ್ ಸಿಬ್ಬಂದಿ ಬಿಟ್ಟು ಹಣದ ಸಮೇತ ರಾಬರ್ಸ್ ಎಸ್ಕೇಪ್ ಆಗಿದ್ದಾರೆ. ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವರದಿ : ಚನ್ನೇಶ್, ಬೆಂಗಳೂರು.