ಕಳಪೆ ಕಾಮಗಾರಿ ಸಹಿಸುವುದಿಲ್ಲ: ಶಾಸಕ ಪಠಾಣ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಗುತ್ತಿಗೆದಾರರು, ಕ್ರೀಯಾಯೋಜನೆ ಪ್ರಕಾರ ರಸ್ತೆ ಕಾಮಗಾರಿ ಅವದಿಯ ಒಳಗಾಗಿ ಪೂರ್ಣಗೋಳಿಸಬೇಕು. ಕಳಪೆಕಾಮಗಾರಿ ಯಾದರೇ ಸಹಿಸುವುದಿಲ್ಲ ಎಂದು ಶಾಸಕ ಯಾಸೀರಹಮ್ಮದಖಾನ ಪಠಾಣ ಎಚ್ಚರಿಸಿದರು.

ತಾಲೂಕಿನ ಬಂಕಾಪುರ ಪಟ್ಟಣದ ಮುಂಡಗೋಡ-ಬಾಡ ಕ್ರಾಸ್ವರೆಗೆ ೩ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಕೈಗೊಂಡ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈ ಬಾರಿ ಅಂತಹ ಕಳಪೆಕಾಮಗಾರಿಗೆ ಅವಕಾಶ ಸಿಗುವುದಿಲ್ಲ. ಸುಸಿಜ್ಜತ ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿದ್ದು, ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ, ಕ್ರೀಯಾ ಯೋಜನೆಯಲ್ಲಿದ್ದಂತೆ ಕಾಮಗಾರಿ ಪೂರ್ಣ ಗೋಳಿಸುವಂತೆ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಆಯೂಬುಖಾನ್ ಪಠಾಣ, ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ, ಸದಸ್ಯರಾದ ಸತೀಶ ಆಲದಕಟ್ಟಿ, ಮಹ್ಮದ ಗೌಸ್ ಗುಲ್ಮಿ, ಬಸವರಾಜ ಕಟ್ಟೀಮನಿ, ತಹಮಿದ ಖಾಜಿ, ಸೋಮಣ್ಣ ಕುರಿ, ರಮೇಶ ಸಿದ್ದುನವರ, ಶಿವಪ್ಪ ಮಾಗಿ, ರಾಜು ಹಳವಳ್ಳಿ, ಗದಿಗೆಪ್ಪ ಬಳ್ಳಾರಿ, ಮಾಲತೇಶ ಸಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
