ಅಂತರ್ ಜಿಲ್ಲಾ ಕಳ್ಳನ ಬಂಧಿಸಿದ ಬಂಕಾಪುರ ಪೊಲೀಸರು
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಇತ್ತಿಚೆಗೆ ತಾಲೂಕಿನ ಬಂಕಾಪುರ ಪಟ್ಟಣದ ಮಾಲತೇಶ ಬಾರ್, ರೆಸ್ಟೋರೆಂಟ್ನಲ್ಲಿ ಯಾರೋ ಕಳ್ಳರು ಸೆಟರ್ಸ ಮೂರಿದು ಡ್ರಾದಲ್ಲಿದ್ದ ೧೬೦೦/- ರೂ ಗಳನ್ನು ಕಳ್ಳತನಮಾಡಿಕೊಂಡು ಹೋದಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ಜಾಡನ್ನು ಬೆನ್ನುಹತ್ತಿದ ಪಟ್ಟಣದ ಪೊಲೀಸ್ ಠಾಣೆ ಪಿ.ಎಸ್.ಐ.ನಿಂಗರಾಜ ಕರಕಣ್ಣನವರ ನೇತೃತ್ವದ ಪೊಲೀಸ್ ತಂಡ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏ.೧೫ ರಂದು ಪಟ್ಟಣದ ಪೊಲೀಸರು ವಾಹನಗಳ ತಪಾಸಣೆ ಸಮಯದಲ್ಲಿ ಅನುಮಾನಾಸ್ಪದವಾಗಿ ಕಾರುಚಲಾಯಿಸಿಕೊಂಡು ಬಂದಚಾಲಕನನ್ನು ತಡೆದು ವಿಚಾರಿಸಿದಾಗ ಮಾಲತೇಶ ಬಾರ್ ಕಳ್ಳತನಮಾಡಿರುವುದಾಗಿ ವಪ್ಪಿಕೊಂಡಿದದ್ದಾನೆ. ಆರೋಪಿತನನ್ನು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಕಬ್ಬಿನಹಳ್ಳಿ ಗ್ರಾಮದ ಜಗದೀಶ ಕೆ, (೩೯) ಎಂದು ತಿಳಿದುಬಂದಿದೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಹಾವೇರಿ ಜಿಲ್ಲೆ ಕಾಕೋಳ, ಕಜ್ಜರಿ ಬಾರ್ಗಳಲ್ಲಿ ಹಾಗು ರಾಜ್ಯದ ಬೇರೆ, ಬೇರೆ ಜಿಲ್ಲೆಗಳಲ್ಲಿರುವ ಬಾರ್, ರೆಸ್ಟೋರೆಂಟ್ಗಳ ಬಾಗಿಲನ್ನು ಮುರಿದು ಕಳ್ಳತನ ಮಾಡಿರುವುದಾಗಿ ವಪ್ಪಿಕೊಂಡಿದ್ದಾನೆ. ಇತನಮೇಲೆ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ೫೪ ಪ್ರಕರಣಗಳು ದಾಖಲಿರುವಬಗ್ಗೆ ಪೊಲೀಸರಿಂದ ತಿಳಿದುಬಂದಿದೆ. ಆರೋಪಿತನಿಂದ ೬ ಲಕ್ಷ ಬೆಲೆಬಾಳುವ ಒಂದು ಕಾರ್, ೧,೦೦,೬೦೦/- ರೂ ಹಣ, ೫,೧೦೦/- ರೂ ಬ್ಯಾಟರಿ ಚಾಲಿತ ಕಟರ್ ಮಿಷನ್, ೯೦,೦೦೦/- ಕಿ.ಮ. ವಿವಿಧ ಕಂಪನಿಯ ಮೊಬೈಲ್ಗಳು, ೧,೨೫೦/- ಕಿ.ಮ ಕೃತ್ಯಕ್ಕೆ ಬಳಸಲಾದ ಕಬ್ಬಿಣದ ರಾಡ್ಗಳು ಸೇರಿ ಒಟ್ಟು ೭,೯೭,೦೦೦/- ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಗಳಾದ ನಿಂಗರಾಜ ಕೆ, ಶಿವಾನಂದ ವನಹಳ್ಳಿ, ವೆಂಕಟೇಶ ಲಮಾಣಿ, ಗೋವಿಂದ ಲಮಾಣಿ, ಬೀರಪ್ಪ, ಎ.ಕೆ.ನದಾಫ್, ಕರಬಸಪ್ಪ ಹಾವಣಗಿ, ಮಾರುತಿ ಹಾಲಬಾವಿ, ಸತೀಶ ಮಾರುಕಟ್ಟೆ, ಶಶಿಧರ ಪಾಲ್ಗೋಂಡಿದ್ದರು. ಇವರ ಕಾರ್ಯಕ್ಕೆ ಎಸ್.ಪಿ. ಅಂಶುಕುಮಾರ ಮೆಚ್ಚುಗೆ ವ್ಯಕ್ತಪಡೆಸಿದ್ದಾರೆ.