ಆಹಾರ ಪದ್ಧತಿ ಹಾಗೂ ದೈನಂದಿನ ದಿನಚರಿಗಳಲ್ಲಿ ಬದಲಾವಣೆ ಕಾಣದೇ ಉತ್ತಮ ಆರೋಗ್ಯ ಸಾಧ್ಯವಿಲ್ಲ: ಮಾಜಿ ಶಾಸಕ ಸುರೇಶಗೌಡ ಪಾಟೀಲ
ವೀರಮಾರ್ಗ ನ್ಯೂಸ್ ಬ್ಯಾಡಗಿ : ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡದೇ ಉತ್ತಮ ಆರೋಗ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ದಿವಂಗತ ಬಿ.ಎಚ್.ಬಡ್ಡಿ ಇವರ ಸ್ಮರಣಾರ್ಥ ಜಿಲ್ಲಾ ರಕ್ತನಿಧಿ ಕೇಂದ್ರ ಹಾವೇರಿ, ವೈದ್ಯಕೀಯ ವಿಜ್ಞಾನ (ಹಿಮ್ಸ್) ಹಾವೇರಿ ಹಾಗೂ ಬಿಇಎಸ್ ಶಾಲೆಯ ೨೦೦೩-೦೪ ಸಾಲಿನ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿ ಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯವೇ ಭಾಗ್ಯ ಹಾಗೂ ನಮ್ಮ ಸಂಪತ್ತು ಅದರಲ್ಲಿ ಯಾವುದೇ ಅನುಮಾನವಿಲ್ಲ ಹಣ ಗಳಿಸಿದ ರೀತಿಯಲ್ಲಿಯೇ ಆರೋಗ್ಯವನ್ನು ಕೂಡ ಕ?ಪಟ್ಟು ಗಳಿಸಿಕೊಳ್ಳಬೇಕಾಗುತ್ತದೆ ಒಬ್ಬ ವ್ಯಕ್ತಿ ಸುಂದರ ಬದುಕನ್ನು ನಿರ್ವಹಿಸುವ ಪ್ರಮುಖ ವಿ?ಯಗಳಲ್ಲಿ ಆರೋಗ್ಯ ಮೊದಲ ಸ್ಥಾನದಲ್ಲಿದೆ, ಆದರೆ ಇತ್ತೀಚೆಗೆ ಒತ್ತಡ ಜೀವನ ಎಲ್ಲರನ್ನು ರೋಗಗಳಿಗೆ ತುತ್ತಾಗು ವಂತೆ ಮಾಡಿದೆವೆಂದು ಖೇದ ವ್ಯಕ್ತಪಡಿಸಿದರು.
ಡಾ.ಎಸ್.ಎನ್.ನಿಡಗುಂದಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿ ತನ್ನ ಎಂದಿನ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ಕ್ರೀಯಾಶೀಲರಾಗಿರಲು ಸಾಧ್ಯವಿಲ್ಲ, ಹೀಗಾಗಿ ಉತ್ತಮ ಆರೋಗ್ಯಕ್ಕೆ ನಾವು ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ, ರೋಗ ಬಂದ ಬಳಿಕ ಉಪಚರಿಸುವುದಕ್ಕಿಂತ ಬರದಂತೆ ಎಚ್ಚರಿಕೆ ವಹಿಸುವುದು ಸೂಕ್ತ, ಇತ್ತೀಚಿನ ಜಂಕ್ ಫುಡ್, ಮದ್ಯಸೇವನೆ, ಧೂಮಪಾನ ನಮ್ಮ ಆರೋಗ್ಯದ ಮೇಲೆ ಹೆಚ್ಚು ದು?ರಿಣಾಮಗಳನ್ನು ಬೀರು ತ್ತಿವೆ ಎಂದ ಅವರು, ಯಾವುದಕ್ಕೂ ಕನಿ? ೩ ತಿಂಗಳಿಗೊಮ್ಮೆ ರಕ್ತದೊತ್ತಡ (ಬಿಪಿ) ಮಧುಮೇಹ (ಶುಗರ್) ಸೇರಿದಂತೆ ನಮ್ಮ ದೇಹದಲ್ಲಿರುವ ರಕ್ತವನ್ನು ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ಒಟ್ಟು ೭೦ ಜನ ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರದ ಬಸವರಾಜ ತಳವಾರ, ಎಸ್.ಆರ್.ಪಾಟೀಲ, ಎಂ.ಎನ್.ಉಮಾಪತಿ, ಯು.ಎನ್.ಛತ್ರದ, ಸಿ.ಎಚ್.ಹೀರೆಮಠ, ಪ್ರವೀಣ ಆಲದಗೇರಿ, ಮಲ್ಲಿಕಾರ್ಜುನ, ಪ್ರವೀಣ ಮುಳಗುಂದ, ಸಿ.ಎಚ್.ಮೋಹನಕುಮಾರ, ಡಾ.ದೀಪಕ್ ಸೂಡಿ, ಡಾ. ಸಂತೋ? ಪಾಟೀಲ ಹಾಗೂ ೨೦೦೩-೦೪ ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.