ಓದಿನ ಜೊತೆಗೆ ದೇಶಪ್ರೇಮದ ಸಂಸ್ಕಾರ ಬೆಳೆಸಿಕೊಳ್ಳಿ : ಪಿ.ಎಸ್.ಐ ಗಡದ

ಓದಿನ ಜೊತೆಗೆ ದೇಶಪ್ರೇಮದ ಸಂಸ್ಕಾರ ಬೆಳೆಸಿಕೊಳ್ಳಿ : ಪಿ.ಎಸ್.ಐ ಗಡದ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ :
ಶ್ರಮಪಟ್ಟು ಓದಿದರೆ ಯಶಸ್ಸು ಸಾಧ್ಯವೆಂದು ಪಿಎಸ್‌ಐ ನಾಗರಾಜ ಗಡದ ಹೇಳಿದರು.
ಅವರು ಪಟ್ಟಣದ ಬಳಿಗಾರ ಓಣಿಯಲ್ಲಿ ಪೊಲೀಸ್ ಇಲಾಖೆಯ ಹವಾಲ್ದಾರ ಪ್ರಕಾಶ ಮ್ಯಾಗೇರಿ ಅವರ ನಿವಾಸದಲ್ಲಿ ಇತ್ತೀಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಆದ ಓಣಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಾಧನೆಗೆ ಮೊದಲ ಮೆಟ್ಟಿಲು ಆಗಿದ್ದು,ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು, ಹೆಚ್ಚು ಓದಿನ ಕಡೆ ಗಮನ ಕೊಟ್ಟು, ಓದಿನ ಜೊತೆಗೆ ದೇಶಪ್ರೇಮ ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಕಾಲೇಜಿನಲ್ಲಿ ಯಾವುದೇ ಕೋರ್ಸ್ ಮಾಡಲಿ ಶ್ರದ್ದೆಭಕ್ತಿಯಿಂದ ಕಲಿತು ಹೆಚ್ಚು ಅಂಕ ಗಳಿಸಿದಾಗ ತಂದೆ ತಾಯಿಗಳಿಗೆ ಖುಷಿಕೊಡುತ್ತದೆ, ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಬಿ. ಬಳಿಗಾರ ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನ ಕೊಡಬೇಕು, ಸಮಯವನ್ನು ಹಾಳು ಮಾಡದೆ ಮೊಬೈಲ್‌ನಿಂದ ದೂರವಿದ್ದು, ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಹೇಳಿದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ಬಳಿಗಾರ ಓಣಿಯ ೧೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲೇಶಪ್ಪ ಬಾಡಗಿ,ತಿಪ್ಪಣ್ಣ ಬಳಿಗಾರ, ನಾಗಪ್ಪ ಕಠಾರಿ, ಡಿ ಎಂ ಪೂಜಾರ,ಶಿವಲಿಂಗಯ್ಯ ಹೊತಗಿಮಠ ಪೀರಸಾಬ್ ಸೂರಣಗಿ, ವಿನಾಯಕ ಮ್ಯಾಗೇರಿ, ಇದ್ದರು ಸಂಗೀತಾ ಮ್ಯಾಗೇರಿ, ಶ್ವೇತಾ ಮ್ಯಾಗೇರಿ ಕಾರ್ಯಕ್ರಮ ನಿರ್ವಹಿಸಿದರು.