ವೀರಮಾರ್ಗ ನ್ಯೂಸ್ ಗದಗ : ಲಕ್ಷ್ಮೇಶ್ವರ ಇಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ತಾಲ್ಲೂಕು ಕದಳಿ ಮಹಿಳಾ ವೇದಿಕೆ ಇವರ ಆಶ್ರಯದಲ್ಲಿ ಅಂತರರಾಷ್ಟ್ರಿಯ ಮಹಿಳಾ ದಿನ ಆಚರಿಸಲಾಯಿತು.
ಡಾ.ರಂಜಿತಾ ಎನ್. ಮಲ್ಲಾಡದ ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಹೆಜ್ಜೆ ಮೂಡಿಸುತ್ತಿದ್ದಾಳೆ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬುದಕ್ಕೆ ಇಂದಿನ ಮಹಿಳೆಯರು ಸಾಕ್ಷಿ ಆಗಿದ್ದಾರೆ. ಆದರೆ ಆಕೆ ಸಾಧನೆ ಮಾಡಲು ಪ್ರೋತ್ಸಾಹ ಅಗತ್ಯ. ಕುಟುಂಬದ ಸದಸ್ಯರು ಅವಳಿಗೆ ಆಸರೆಯಾಗಿ ನಿಂತರ ಎಂಥ ಕೆಲಸವನ್ನಾದರೂ ಮಹಿಳೆ ಮಾಡಬಲ್ಲಳು ಎಂದು ತಿಳಿಸಿದ ಅವರು ಮಹಿಳೆ ತನ್ನ ಕ್ಷೇತ್ರದಲ್ಲಿ ಯಶಸ್ವಿ ಆಗಬೇಕಾದರೆ ಅದಕ್ಕೆ ಪತಿಯ ಸಹಕಾರ ಬಹಳ ಮುಖ್ಯ. ಇಂದು ಸಾಕಷ್ಟು ಮಹಿಳೆಯರು ಉನ್ನತ ಸಾಧನೆ ಮಾಡಿದ್ದಾರೆ ಎಂದರೆ ಅದರ ಹಿಂದೆ ಅವರ ಪತಿಯ ಸಹಾಯ ಇದ್ದೇ ಇರುತ್ತದೆ ಎಂದರು.

ಇoದುಮತಿ ಎಸ್. ಪಿಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆರುಂಧತಿ ಎಸ್. ಬಳಿಗಾರ ಉದ್ಘಾಟಿಸಿದರು. ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಲಲಿತಕ್ಕ ಕೆರಿಮನಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿರ್ಮಲಾ ಅರಳಿ, ಸರೋಜಕ್ಕ ಬನ್ನೂರ, ಶಾರದಾ ಬಟಗುರ್ಕಿ, ಕಾಂಚನಾ ಹಸರೆಡ್ಡಿ, ಅರುಂಧತಿ ಬಿಂಕದಕಟ್ಟಿ, ಚಿತ್ರಾ ಹಣಗಿ, ಅಂಕಿತಾ ಅರಳಿ, ಅನ್ನಕ್ಕ ಯಾಳಗಿ, ಮಂಜುಳಾ ಓದುನವರ, ಕುಸುಮಾ ಮಲ್ಲಾಡದ, ಸುಲೋಚನ ಜವಾಯಿ, ರೂಪಾ ಕಳ್ಳಿಗುಡ್ಡ, ವಿಜಯಲಕ್ಷ್ಮಿ ಪಿಳ್ಳಿ, ಮಂಜುಳಾ ಪಿಳ್ಳಿ, ಪ್ರತಿಮಾ ಮಹಾಜನಶೆಟ್ಟ, ಕವಿತಾ ಅರಳಹಳ್ಳಿ, ಪಾರ್ವತಿ ಕಳ್ಳಿಮಠ ಮತ್ತಿತರರು ಇದ್ದರು. ಎಚ್.ಡಿ. ನಿಂಗರೆಡ್ಡಿ ಸ್ವಾಗತಿಸಿದರು. ಡಿ.ಎಫ್. ಪಾಟೀಲ ನಿರೂಪಿಸಿದರು. ನೀಲಾ ಕುಂಬಿ ವಂದಿಸಿದರು.