ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರ
ಲೇಖನ: ಲೋಕೇಶ್ ಎಂ. ಮಲ್ಲಿಗವಾಡ
ವೀರಮಾರ್ಗ ನ್ಯೂಸ್ ಗದಗ : ಸಾಧನೆ ಎಂಬ ಪದವನ್ನು ಕೇಳಲು ಹಿತ ಅನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ.
ಪಟ್ಟಣದ ಯೂನಿಕ್ ಸ್ಕೂಲ್ನ ೧೦ನೇ ತರಗತಿ ವಿದ್ಯಾರ್ಥಿನಿ ಪಂಚಮಿ ಶಿವಶಂಕರ ಅಂಬಿಗೇರ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಹೆಜ್ಜೆ ಇಡುತ್ತಿದ್ದಾಳೆ,
ಮೂಲತಃ ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಶಿವಶಂಕರ ಅಂಬಿಗೇರ ಶಿಗ್ಗಾoವಿಯಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಲಕ್ಷ್ಮಿ ಅಂಬಿಗೇರ,ಅವರ ಮಗಳೆ ಪಂಚಮಿ ಅಂಬಿಗೇರ, ಲಕ್ಷ್ಮೇಶ್ವರದಲ್ಲಿ ಕಳೆದ ೨೦ವರ್ಷದಿಂದ ವಾಸುಸುತ್ತಿರುವ ಇವರು ಮಗಳ ಸಾಧನೆಗೆ ಹೆಗಲು ಕೊಟ್ಟು ನಿಂತಿದ್ದಾರೆ.

ತನ್ನ ೧೧ನೇ ವರ್ಷದಿಂದ ಸಂಗೀತ ಕಡೆ ಒಲವು ತೋರಿಸಿದ ವಿದ್ಯಾರ್ಥಿನಿ ಪಟ್ಟಣದ ಶಾರದಾ ಸ್ವರಾಂಜಲಿ ಸಂಗೀತ ಪಾಠ ಶಾಲೆಯಲ್ಲಿ ೬ ವರ್ಷದಿಂದ ಸಂಗೀತ ಗುರುಗಳಾದ ಲಕ್ಷಣ ತಳವಾರ ಹತ್ತಿರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜೂನಿಯರ್ ನಲ್ಲಿ ಶೃದ್ದೆಯಿಂದ ಅಭ್ಯಾಸ ಮಾಡುತ್ತಿದ್ದಾಳೆ, ಇವಳ ಗಾಯನಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವಳ ಸಾಧನೆಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದು ಸ್ಥಳೀಯವಾಗಿ ನಡೆದ ಸ್ಟಾರ್ ಆಫ್ ಲಕ್ಷ್ಮೇಶ್ವರ ಪ್ರಶಸ್ತಿ, ಹೊಸಪೇಟೆಯಲ್ಲಿ ರಾಷ್ಟ್ರ ಮಟ್ಟದ ಗಾನಕೋಗಿಲೆ ಪ್ರಶಸ್ತಿ, ಅದೇ ರೀತಿ ಆನ್ಲೈನ್ ಕಾರ್ಯಕ್ರಮದಲ್ಲಿ ಇವಳು ಕಳಿಸಿದ ಹಾಡಿಗೆ ೩ ಅಂತರರಾಷ್ಟ್ರಿಯ ಪ್ರಶಸ್ತಿ ಪತ್ರಗಳು ೫ ರಾಷ್ಟ್ರಿಯ ಪ್ರಶಸ್ತಿ ಪತ್ರಗಳು ಲಭಿಸಿವೆ.
ಇವಳ ಕಂಠಸಿರಿಯಿಂದ ರಾಜ್ಯದ ಗಂಗಾವತಿ ಇಳಕಲ್, ಗಜೇಂದ್ರಗಡ ಲಕ್ಷ್ಮೇಶ್ವರ ಸೇರಿದಂತೆ ಅನೇಕ ಕಡೆ ಸಭಾ ಕಾರ್ಯಕ್ರಮದಲ್ಲಿ ಸಂಗೀತ ಕಚೇರಿಯಲ್ಲಿ ಬಾಗವಹಿಸಿದ್ದಾಳೆ, ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಬಾಗವಹಿಸಿ ಪ್ರಶಸ್ತಿ ಗಿಟ್ಟಿಸಿ ಕೊಂಡಿದ್ದಾಳೆ.
ಕಲಿಕೆಯಲ್ಲಿಯೂ ಉತ್ತಮ ವಿದ್ಯಾರ್ಥಿನಿ ಯಾಗಿರುವ ಇವಳು ಶಾಲೆಯ ಎಲ್ಲರಿಗೂ ಪ್ರೀತಿ ಪಾತ್ರಳು, ಇವಳ ಸಾಧನೆಗೆ ತಂದೆ ತಾಯಿ ಸಹೋದರಿ, ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು, ಹಾಗೂ ಸಂಗೀತ ಶಾಲೆಯ ಶಿಕ್ಷಕರು ಬೆನ್ನೆಲುಬು ಆಗಿ ನಿಂತಿದ್ದಾರೆ. ಒಟ್ಟಾರೆ ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿಸುವ ಕೆಲಸ ಆಗಬೇಕು.
- ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬುವ ಆಸೆ ಹೊಂದಿದ್ದು ಸಂಗೀತ ಶಿಕ್ಷಕಿ ಯಾಗಿ ಹೆಸರು ಮಾಡಬೇಕು ತಂಗಿ ನಾಗವೇಣಿಯು ಸಂಗೀತ ದಲ್ಲಿ ಅಭ್ಯಾಸ ಮಾಡುತ್ತಿದ್ದು ಅವಳ ಪ್ರೋತ್ಸಾಹ ಬಹಳವಿದೆ
- ಪಂಚಮಿ ಶಿವಶಂಕರ ಅಂಬಿಗೇರ
ಯುವಗಾಯಕಿ - ಶಾರದಾ ಸ್ವರಾoಜಲಿ ಸಂಗೀತ ಪಾಠ ಶಾಲೆಯ ಉತ್ತಮ ವಿದ್ಯಾರ್ಥಿನಿ ಆಗಿದ್ದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅಭ್ಯಾಸ ಮಾಡುತ್ತಿದ್ದು ಉತ್ತಮ ಗಾಯಕಿ ಆಗುವ ಅರ್ಹತೆಗಳು ಇವೆ
- ಲಕ್ಷ್ಮಣ ತಳವಾರ
ಸಂಗೀತ ಗುರುಗಳು