ವನಹಳ್ಳಿ ಗ್ರಾಪಂ ರಾಷ್ಟ್ರದ್ವಜ ಅವರೋಹಣ ಮಾಡದಿದ್ದಕ್ಕೆ ಸೂಕ್ತ ಕ್ರಮಕ್ಕೆ ಜಯಕರ್ನಾಟಕ ಆಗ್ರಹ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ವನಹಳ್ಳಿ ಗ್ರಾಮದ ಗ್ರಾಮಪಂಚಾಯತ ಆವರಣದಲ್ಲಿ ಆರೋಹಣ ಮಾಡಿದ ರಾಷ್ಟ್ರದ್ವಜವನ್ನು ಸಂಜೆ ಅವರೋಹಣ ಮಾಡದೇ ಇರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಾ.ಪ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಏ.೧ ರಂದು ವನಹಳ್ಳಿ ಗ್ರಾ.ಪಂ.ಆವರಣದಲ್ಲಿ ಆರೋಹಣ ಮಾಡಿದ ರಾಷ್ಟ್ರದ್ವಜವನ್ನು ಅವರೋಹಣ ಮಾಡದೇ ಇರುವುದನ್ನು ನೋಡಿ, ದೂರವಾಣಿ ಮೂಲಕ ತಾ.ಪ.ಇಓ ಕುಮಾರ ಮಣ್ಣವಡ್ಡರ ಗಮನಕ್ಕೆ ತಂದರೂ ಇಲ್ಲಿಯವರೆಗೆ ತಪ್ಪಿತಸ್ತ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದು ರಾಷ್ಟ್ರ ದ್ವಜಕ್ಕೆ ಮಾಡಿದ ಅವಮಾನವಾಗಿದೆ. ಕೂಡಲೇ ತಪ್ಪಿತಸ್ತ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮನವಿಮೂಲಕ ಎಚ್ಚರಿಸಿದ್ದಾರೆ.
ಜಯಕರ್ನಾಟಕ ಸಂಘಟನೆ ತಾಲೂಕಾ ಅಧ್ಯಕ್ಷ ಹನುಮಂತಪ್ಪ ಬಂಡಿವಡ್ಡರ, ಯಲ್ಲಪ್ಪ ವಡ್ಡರ, ಗೋವಿಂದಪ್ಪ ವಾಲಿಕಾರ ಸೇರಿದಂತೆ ಇತರರು ಇದ್ದರು.
ವನಹಳ್ಳಿ ಗ್ರಾಪಂ ರಾಷ್ಟ್ರದ್ವಜ ಅವರೋಹಣ ಮಾಡದಿದ್ದಕ್ಕೆ ಸೂಕ್ತ ಕ್ರಮಕ್ಕೆ ಜಯಕರ್ನಾಟಕ ಆಗ್ರಹ
