ಮಹಿಳೆ ಕೊಲೆ ಆರೋಪಿಗಳ ಪತ್ತೆ ಕಾರು ಬೈಕು ವಶ

ಮಹಿಳೆ ಕೊಲೆ ಆರೋಪಿಗಳ ಪತ್ತೆ ಕಾರು ಬೈಕು ವಶ
ಲಕ್ಷ್ಮೇಶ್ವರ :
ತಾಲ್ಲೂಕಿನ ಸೂರಣಗಿ ಗ್ರಾಮದ ಬೈಲ್ ಬಸವಣ್ಣದೇವರ ದೇವಸ್ಥಾನದ ಹತ್ತಿರ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಬಿಸಾಕಿದ ಆರೋಪಿಗಳನ್ನು ಲಕ್ಷ್ಮೇಶ್ವರದ ಪೊಲೀಸರು ಪತ್ತೆ ಹಚ್ಚಿ ಘಟನೆಯಲ್ಲಿ ಆರೋಪಿಗಳು ಬಳಸಿದ ಕಾರು ಹಾಗೂ ಒಂದು ಬೈಕ್‌ನ್ನು ವಶ ಪಡಿಸಿಕೊಂಡಿದ್ದಾರೆ.
ಈ ಕುರಿತು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ ಲಕ್ಷ್ಮೇಶ್ವರ ತಾಲೂಕ ನೆಲೂಗಲ್ಲ ಗ್ರಾಮದ ನಿವಾಸಿ ಲಕ್ಷ್ಮೀ ಆನಂದ ಇಂಗಳಗಿ (೩೩) ಕೊಲೆಯಾದ ಮಹಿಳೆ. ಈಕೆ ಗಂಡನೊಡನೆ ಜಗಳ ಮಾಡಿಕೊಂಡು ನೆಲೂಗಲ್ಲನ ತನ್ನ ತವರು ಮನೆಯಲ್ಲಿ ವಾಸಿವಾಗಿದ್ದಳು. ತನ್ನ ಮೂರು ಮಕ್ಕಳ ಜೀವನೋಪಾಯಕ್ಕಾಗಿ ಮಂಗಳೂರಿಗೆ ದುಡಿಯಲು ಹೋದಾಗ ಅಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕು ಗೊಟಗೋಡಿ ಗ್ರಾಮದ ಸುನೀಲ್ ಅಶೋಕ ಮಲ್ಲಾರಿ ಅವನೊಂದಿಗೆ ಸ್ನೇಹ ಬೆಳೆಸಿದ್ದಳು ಮೃತ ಮಹಿಳೆ ಪ್ರಿಯಕರ ಸುನೀಲನಿಗೆ 5ಲಕ್ಷ ಹಣ ಕೊಡುವಂತೆ ಪೀಡಿಸುತ್ತಿದ್ದಳು ಕೊಡದೆ ಇದ್ದರೆ.

ನನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ವಿಷಯವನ್ನು ನಿಮ್ಮ ಮನೆಯ ಜನರಿಗೆ ಹೇಳುತ್ತೇನೆ ಎಂದು ಕಿರಿಕಿರಿ ಕೊಟ್ಟಿದ್ದರೆಂದು ತಿಳಿದು ಬಂದಿದೆ. ಇದರಿಂದಾಗಿ ರೊಚ್ಚಿಗೆದ್ದಿದ್ದ ಸುನಿಲ ಏ.೨೨ರಂದು ರಾತ್ರಿ ತನ್ನ ಮೂವರು ಸಹಚರರೊಂದಿಗೆ ಕೂಡಿಕೊಂಡು ಕಾರಿನಲ್ಲಿ ಮಹಿಳೆಯನ್ನು ಮಂಗಳೂರಿನತ್ತ ಕರೆದುಕೊಂಡು ಹೋಗುತ್ತಿದ್ದ. ಸಮಯದಲ್ಲಿ ಹಿಂದಿನಿoದ ಮಹಿಳೆಯ ಕುತ್ತಿಗೆ ಹಗ್ಗ ಬಿಗಿದು ಆಕೆಯನ್ನು ಸಾಯಿಸಿ ಸೂರಣಗಿ ಗ್ರಾಮದ ಹತ್ತಿರ ಬಿಸಾಕಿ ಹೋಗಿದ್ದರು.
ಈ ಪ್ರಕರಣವನ್ನು ಬೆನ್ನತ್ತಿದ್ದ ಲಕ್ಷ್ಮೇಶ್ವರ ಪೊಲೀಸರು ಅದನ್ನು ಬೇಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡದ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳ ಪತ್ತೆಗೆ ಇಳಿದ ಅಪರಾದ ವಿಭಾಗದ ಪಿ.ಎಸ್.ಐ, ಟಿ. ಕೆ. ರಾಠೋಡ ಹಾಗೂ ಪೊಲೀಸರ ತಂಡ ಸುನೀಲ್ ಅಶೋಕ ಮಲ್ಲಾರಿ, ಸಿದ್ದಪ್ಪ ನಾಗಪ್ಪ ಕುಬಸದ, ನಟರಾಜ ಈರಪ್ಪ ನೀರಲಗಿ ಹಾಗೂ ರಮೇಶ ಉರ್ಪ್ ಮುತ್ತುರಾಜ ದೇವಪ್ಪ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಲಕ್ಷ್ಮೇಶ್ವರ ಪೊಲೀಸರನ್ನು ಅಭಿನಂದಿಸಿ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿ.ಎಸ್‌.ಐ ಟಿ.ಕೆ. ರಾಠೋಡ, ಸಿಬ್ಬಂದಿಗಳಾದ ಶಿರಹಟ್ಟಿಯ ಎ.ಎಸ್.ಐ ಮಹಾವೀರ ಸದರಣ್ಣವರ, ಲಕ್ಷ್ಮೇಶ್ವರದ ಎ.ಎಸ್.ಐ.ಎನ್.ಎ ಮೌಲ್ವಿ ಪಾಂಡುರಂಗರಾವ, ಡಿ.ಎಸ್. ನದಾಪ್, ಹೆಚ್.ಐ. ಕಲ್ಲಣ್ಣವರ, ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ, ಮದುಚಂದ್ರ ಧಾರವಾಡ, ಸೋಮು ವಾಲ್ಮೀಕಿ, ನಂದಯ್ಯ ಮಠಪತಿ ರಾಮು ಮಾಳೊತ್ತರ, ಲೋಹಿತ ಹಮ್ಮಗಿ, ಕೃಷ್ಣಾ ಹುಲಗೂರ, ಅಪ್ಪಣ್ಣ ರಾಠೋಡ, ಗುರು ಬೂದಿಹಾಳ, ಸಂಜು ಕೊರಡೂರ ಇವರ ಕಾರ್ಯಕ್ಕೆ ಗದಗ ಜಿಲ್ಲಾ ಎಸ್.ಬಿ.ಎಸ್ ನೇಮಗೌಡ ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ.