ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ೪೯೫ ನೇ ಹಾಗು ಶ್ರೀ ಬಸವಣ್ಣೇಂದ್ರ ಮಹಾ ಸ್ವಾಮಿಗಳವರ ೪೨೦ನೇ ಪುಣ್ಯ ಸ್ಮರಣೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಂಕಾಪುರ ದೇಸಾಯಿಮಠದ ಶ್ರೀ ಮಹಾಂತಸ್ವಾಮಿಗಳು ಸದಾಶಿವಪೇಟೆ ಶರಣಬಸವೇಶ್ವರ ದಾಸೋಹಮಠದ ಶ್ರೀ ಶಿವದೇವ ಶರಣರು ಬಿಡುಗಡೆ ಗೋಳಿಸಿದರು.
ಶ್ರೀ ಮಹಾಂತಸ್ವಾಮಿಗಳು ಆಮಂತ್ರಣ ಬಿಡುಗಡೆಗೋಳಿಸಿ ಮಾತನಾಡಿ, ಶ್ರೀ ಮಠದ ಪೀಠಾಧಿಪತಿ ಲಿಂ. ಗದಿಗೇಶ್ವರ ಸ್ವಾಮಿಜಿ ಲಿಂಗೈಕ್ಯವಾದನಂತರ ಭಕ್ತರೇ ಶ್ರೀಮಠಕ್ಕೆ ಶಕ್ತಿಯಾಗಿನಿಂತು ಶ್ರೀ ಮಠದಲ್ಲಿ ನಡೆಯಲಿರುವ ಧರ್ಮಕಾರ್ಯವನ್ನು ನಿರಂತರ ಮುಂದುವರೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ. ಭಕ್ತರೂ ಮಠಕ್ಕೆ ಭೂಷಣವಾದರೆ, ಶ್ರೀ ಮಠಕ್ಕೆ ಪೀಠಾಧಿಪತಿಗಳೇ ಭೂಷಣ, ಆದ್ದರಿಂದ ಶ್ರೀಮಠಕ್ಕೆ ಒಳ್ಳೆಯ, ಉತ್ತಮ, ಸಂಸ್ಕಾರಯುತ ವಟುವನ್ನು ಭಕ್ತರೇ ಆಯ್ಕೆಮಾಡಬೇಕು. ಶ್ರೀಮಠದಲ್ಲಿ ನಿರಂತರ ಧರ್ಮಕಾರ್ಯಗಳು ಮುಂದುವರೆದುಕೊಂಡು ಸಾಗಬೇಕು. ಶ್ರೀಮಠದಲ್ಲಿ ಏ.4 ರಿಂದ ಏ. 7ರ ವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏಶಸ್ವೀಯಾಗಿ ನೆರವೇರಲಿ ಎಂದು ಆಶಿಸಿದರು.

ಶ್ರೀ ಶರಣಬಸವೇಶ್ವರ ದಾಸೋಹಮಠದ ಶ್ರೀ ಶಿವದೇವ ಶರಣರು ಮಾತನಾಡಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಗಪ್ಪ ವಡವಿ, ಕ.ಸಾ.ಪ.ಹೊಬಳಿ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ, ಶೇಖಯ್ಯ ನಂದಿಮಠ, ಶರಣಬಸವ ಬಿ.ಕೆ, ಎಸ್.ಜಿ.ಹಿರೇಮಠ, ಗದಿಗೇಪ್ಪ ಕಿವುಡನವರ, ಗಂಗಾಧರ ಶೆಟ್ಟರ, ಶಿವರುದ್ರಪ್ಪ ಇಚ್ಚಂಗಿ, ಸಚಿನ್ ನಂದಿಮಠ, ಬಸಪ್ಪ ಚಿಗರಿ, ಸಿ.ವಿ.ಕಿವುಡನವರ, ರವಿ ಬಂಕಾಪುರ, ಶರಣಪ್ಪ ಅತ್ತಿಗೇರಿ, ಸಿದ್ದರಾಮಯ್ಯ ಸಾಲಿಮಠ, ಶರಣಪ್ಪ ನಿಡಗುಂದಿ, ಗದಿಗಯ್ಯ ಮಹಾಂತಿನಮಠ, ಪುಟ್ಟಪ್ಪ ಭಾಗಣ್ಣವರ ಸೇರಿದಂತೆ ಇತರರು ಇದ್ದರು.