ಇಂದು ೬೩ನೇ ವರ್ಷದ ಗಂಜೀ ಬಸವೇಶ್ವರ ಜಾತ್ರಾ ಮಹೋತ್ಸವ
ವೀರಮಾರ್ಗ ನ್ಯೂಸ್ ಗದಗ : ಗದಗ ನಗರದ ಉಸುಗಿನಗಟ್ಟಿ ಓಣಿಯ ಶ್ರೀ ಗಂಜೀ ಬಸವೇಶ್ವರ ೬೩ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗಂಜೀ ಬಸವೇಶ್ವರ ಜಾತ್ರಾ ಕಮೀಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದೇವಸ್ಥಾನದ ಮುಂಭಾಗದ ಬಸವ ಮಂಟಪದಲ್ಲಿ ದಿನಾಂಕ:೨೮-೦೪-೨೦೨೫ರಂದು ಸಾಯಂಕಾಲ ೭.೩೦ ಗಂಟೆಗೆ ವಿವಿಧ ಜೈ ಕಿಸಾನ ಕಲಾ ತಂಡ ಕೊಣ್ಣೂರು ಇವರಿಂದ ಜಾನಪದ ನೃತ್ಯ, ಜಾನಪದ ಹಾಡು ಹಾಗೂ ನಗೆಹಾಸ್ಯ ಕಾರ್ಯಕ್ರಮಗಳು ನೆರವೇರುವವು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ಘ.ಚ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ಧೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ, ನರಗುಂದ ಇವರು ಪಾಲ್ಗೊಳ್ಳುವರು. ಗಂಜೀ ಬಸವೇಶ್ವರ ಜಾತ್ರಾ ಕಮೀಟಿ ಅಧ್ಯಕ್ಷರಾದ ಪ್ರಶಾಂತ ಶಂಕ್ರಯ್ಯ ಶಾಬಾದಿಮಠ ಅಧ್ಯಕ್ಷತೆಯನ್ನು ವಹಿಸುವರು, ಕಾರ್ಯಕ್ರಮದ ಉದ್ಘಾಟಕರಾಗಿ ಕಾನೂನು ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು, ಬೆಂಗಳೂರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರು ಉದ್ಘಾಟಿಸುವರು. ಉಪನ್ಯಾಸವನ್ನು ಅಶೋಕ ಬಸಪ್ಪ ಬರಗುಂಡಿ ಇವರು ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ವಾಕರಸಾ ಸಂಸ್ಥೆಯ ಉಪಾಧ್ಯಕ್ಷರಾದ ಪೀರಸಾಬ ಕೌತಾಳ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಬಸವರಾಜ ಕಡೇಮನಿ, ಶ್ರೀಮತಿ ಪರವಿನಬಾನು ಮಲ್ಲಾ ಇನ್ನೂ ಮುಂತಾದವರು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಪರಮೇಶ್ವರಪ್ಪ ಜಂತ್ಲಿ, ಮಹೇಶ್ವರಿ ವಿವಿದೋದ್ಧೇಶ ಮಹಿಳಾ ಮಂಡಳದ ಡಾ|| ಶ್ರೀಮತಿ ಜಯಶ್ರೀ ಬಸಯ್ಯ ಹಿರೇಮಠ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
