ಅಪ್ರಾಪ್ತನಿಂದ ಅಪಘಾತ : ಆಟೋ ಮಾಲೀಕನಿಗೆ ಕೋಟಿ ರೂ. ದಂಡ…

ಅಪ್ರಾಪ್ತನಿಂದ ಅಪಘಾತ : ಆಟೋ ಮಾಲೀಕನಿಗೆ ಕೋಟಿ ರೂ. ದಂಡ…

ಮಕ್ಕಳು ಮಮತೆಗೆ ಪ್ರೀತಿಗೆ ವಾಹನ ಚಲಾಯಿಸಲು ಕೊಟ್ಟರೆ ದಂಡ ಮಾತ್ರ ಹೆತ್ತವರಿಗೆ…

ಮಕ್ಕಳು ಹಠಮಾರಿತನ ಮಾಡಿದರು ಕೂಡಾ ವಾಹನ ಚಲಾಯಿಸಲು ಕೊಡುವದು ತಪ್ಪೇ….

18 ವರ್ಷದ ನಂತರ ವಾಹನ ಚಲಾವಣೆ ಪರವಾನಿಗೆ ಪತ್ರದ ನಂತರ ವಾಹನ ಚಲಾಯಿಸಲು ಕೊಡುವುದು ಸೂಕ್ತ….

ಈ ಕೇಸನ್ನು ನೋಡಿದರೆ ತಂದೆ-ತಾಯಿ-ಅಜ್ಜ-ಅಜ್ಜಿ ಇನ್ನು ಅನೇಕರು ಹಿರಿಯರು ಎಚ್ಚರಿಕೆಯಿಂದ ಇರುವುದು ಕ್ಷೆಮಾ ಹಾಗೂ ಇನ್ನೊಬ್ಬರ ಜೀವದ ಬಗ್ಗೆ ಎಚ್ಚರಿಕೆ ವಹಿಸಿವುದು ಕೂಡಾ ಎಲ್ಲರ ಕರ್ತವ್ಯ….

ವೀರಮಾರ್ಗ ನ್ಯೂಸ್ : ಕೊಪ್ಪಳ ಜಿಲ್ಲಾ : ಅಪ್ರಾಪ್ತ ಬಾಲಕ ಆಟೋ ಚಲಾಯಿಸಿ ಅಪಘಾತಪಡಿಸಿ ವ್ಯಕ್ತಿಯೋರ್ವನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆಟೋ ಮಾಲೀಕನಿಗೆ ನ್ಯಾಯಾಧೀಶರು 1,41,61,580 ರೂ. ದಂಡ ವಿಧಿಸಿದ್ದಾರೆ.

ಯಲಬುರ್ಗಾ ಪಟ್ಟಣದಲ್ಲಿ ಕಳೆದ 2021ರ ಮಾರ್ಚ್ 10ರಂದು ಈ ಅಪಘಾತ ನಡೆದಿತ್ತು. ಅಪಘಾತದಲ್ಲಿ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಗಂಗಾವತಿ ನಿವಾಸಿ ರಾಜಶೇಖರ ಪಾಟೀಲ,ಮೃತಪಟ್ಟಿದ್ದರು. ರಾಜಶೇಖರ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅಪ್ರಾಪ್ತ ಬಾಲಕ(17) ಆಟೋ ಓಡಿಕೊಂಡು ಬಂದು ಅಪಘಾತ ಮಾಡಿದ್ದ. ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್.ಗಾಣಿಗೇರ ವಿಚಾರಣೆ ನಡೆಸಿ, ಆಟೋ ಮಾಲೀಕನಿಗೆ 1,41,61,580 ರೂ. ದಂಡ ವಿಧಿಸಿ, ತೀರ್ಪು ಪ್ರಕಟಿಸಿದ್ದಾರೆ. ಈ ಹಣವನ್ನು ರಾಜಶೇಖರ ಕುಟುಂಬಕ್ಕೆ ಪರಿಹಾರವಾಗಿ ನೀಡಬೇಕು ಎಂದೂ ಆದೇಶಿಸಿದ್ದಾರೆ. ಇದರಿಂದ ಅಪ್ರಾಪ್ತರಿಗೆ ವಾಹನ ನೀಡಬಾರದು ಎಂದು ಎಚ್ಚರಿಕೆಯ ತೀರ್ಪನ್ನು ನ್ಯಾಯಾಧೀಶರು ನೀಡಿದ್ದಾರೆ.