ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶ : ಸದಾಶಿವಾನಂದಶ್ರೀ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ವಿದ್ಯಾರ್ಥಿಗಳ ಅಂತರಾತ್ಮದಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಆ ಕಾರ್ಯವನ್ನು ಉಚಿತವಾಗಿ ಬಡ ಮಕ್ಕಳಿಗೆ ಭಾರತ ಸೇವಾ ಸಂಸ್ಥೆ ಆಶ್ರಯದಲ್ಲಿ ಮಾಡಿಕೊಂಡು ಬರುತ್ತಿರುವುದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ರವರ ಸೇವಾ ಮನೊಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗದಗಿನ ಶ್ರೀ ಶಿವಾನಂದ ಬೃಹನ್ ಮಠದ ಶ್ರೀ ಸದಾಶಿವಾನಂದ ಸ್ವಾಮಿಗಳು ನುಡಿದರು.

ಪಟ್ಟಣದ ಶ್ರೀ ವೀರಕ್ತಮಠದ ಆವರಣದಲ್ಲಿ, ಭಾರತ ಸೇವಾ ಸಂಸ್ಥೆ ಆಶ್ರಯದಲ್ಲಿ ನಡೆದ ೨೦ ದಿನಗಳ ಉಚಿತ ಬೆಸಿಗೆ ಶಿಬಿರದ ಸಮಾರೋಪ ಸಭೆಯನ್ನುದ್ದೇಸಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳು ಉಳಿಯಬೇಕಾದರೆ, ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಅವಸ್ಯಕತೆಯಿದೆ. ಎಲ್ಲ ಪರೀಕ್ಷೆಯಲ್ಲಿ ಪಾಸಾದರೇ ಮಾತ್ರ ಸರ್ಕಾರಿ ಶಾಲೆಗೆ ಶಿಕ್ಷಕರಾಗಲು ಸಾದ್ಯ. ಶಿಕ್ಷಣದ ಗುಣಮಟ್ಟ ಕಡಿಮೆ ಇರುವವರು, ಡೊನೇಷನ್ ನೀಡಿ ಖಾಸಗಿ ಶಾಲೆಗೆ ಶಿಕ್ಷಕರಾಗಿರುತ್ತಾರೆ. ಆದರೂ ಪಾಲಕರು ತಮ್ಮ ಮಕ್ಕಳ ಕಲಿಕೆಗಾಗಿ ಖಾಸಗಿ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಖೇದ ವ್ಯಕ್ತ ಪಡೆಸಿದರು.
ಬಿ.ಇ.ಒ.ಎಂ.ಬಿ.ಅಂಬಿಗೇರ ಮಾತನಾಡಿ, ಇಂದಿನ ಮಕ್ಕಳೆ ಮುಂದಿನ ಈ ದೇಶದ ಭವಿಷ್ಯ ಬರೆಯುವ ನಾಯಕರಾಗಬೇಕಾದರೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತಂದು, ಪ್ರೋತ್ಸಾಹಿಸುವ ಅವಸ್ಯಕತೆಯಿದೆ. ಅಂತಹ ಕೇಲಸವನ್ನು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ರವರು ಉಚಿತವಾಗಿ ಮಕ್ಕಳಿಗೆ ಬೆಸಿಗೆ ಶಿಬಿರವನ್ನು ಆಯೋಜಿಸಿ ಪರಿಣಿತರಿಂದ ತರಬೇತಿ ಕೊಡಿಸಿ ಮಕ್ಕಳ ಪ್ರತಿಭೆಯನ್ನು ಅನಾವರಣಗೋಳಿಸುತ್ತಿರುವ ಅವರ ಕಾರ್ಯ ಶ್ಲ್ಯಾಗನೀಯ ಕಾರ್ಯವಾಗಿದೆ ಎಂದು ಹೇಳಿದರು.
ತಹಶೀಲ್ದಾರ ರವಿಕುಮಾರ ಕೊರವರ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದಜೋತೆಗೆ ಸಂಸ್ಕಾರ, ಕ್ರೀಡೆಗೆ ಪ್ರೋತ್ಸಾಹ ನೀಡುವುದು ಮುಖ್ಯವಾಗಿದೆ. ಎಲ್ಲರೂ ಹಣದ ಆಸೆಗಾಗಿ ಬೆಸಿಗೆ ಶಿಬಿರವನ್ನು ಆಯೋಜಿಸಿದರೆ, ಶ್ರೀಕಾಂತ ದುಂಡಿಗೌಡ್ರ ರವರು ಬಡಮಕ್ಕಳಿಗೆ ಉಚಿತವಾಗಿ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ, ನೃತ್ಯ ಪರಿಣಿತರಿಂದ ತರಬೇತಿ ನೀಡುವಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಸಮಾರೋಪ ಸಭೆಯಲ್ಲಿ ಪ್ರಧರ್ಶಿಸುವಮೂಲಕ ಉಚಿತ ತರಬೇತಿ ಶಿಬಿರದ ಮಹತ್ವವನ್ನು, ತಮ್ಮ ಮಕ್ಕಳಲ್ಲಿ ಇದುವರೆಗೂ ಕಾಣದ ಪ್ರತಿಬೇಯನ್ನು ಅನಾವರಣ ಗೋಳಿಸುತ್ತಿರುವುದು ಶಿಬಿರದ ಏಶಸ್ವೀಗೆ ಹಿಡಿದ ಕೈಗನ್ನಡಿಯಾಗಿದೆ. ಬರುವ ಬೆಸಿಗೆ ಶಿಬಿರದಲ್ಲಿ ನನ್ನ ಮಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ವೇದಿಕೆಮೂಲಕ ಮನವಿ ಮಾಡಿದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ವೀರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು ಆಶೀರ್ವಚನ ನೀಡಿದರು.

ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ, ರವಿ ಮಡಿವಾಳರ, ನಾಗರಾಜ ನಾಡಗೇರ, ವಿಶ್ವನಾಥ ಗಾಣಗೇರ, ಚೇತನ ಕಲಾಲ, ಸಾದಿಖ್ ಮಲ್ಲೂರ, ನಿವೃತ್ತ ಶಿಕ್ಷಕ ಸಂಘದ ಅಧ್ಯಕ್ಷ ಸಿ.ವಿ.ಮತ್ತಿಗಟ್ಟಿ, ಡಾ.ಡಿ.ಎ.ಗೊಬ್ಬರಗುಂಪಿ, ದೈಹಿಕ ಶಿಕ್ಷಕ ಭರತ್ ಕಳ್ಳಿಮನಿ, ಬಸವರಾಜ ಹೊಸಪೇಟೆ, ರಾಘವೇಂದ್ರ ದೇಶಪಾಂಡೆ, ಬಸವರಾಜ ಮಿರ್ಜಿ, ಶೇತಸನದಿ, ಎಸ್.ವಿ.ಕುಲಕರ್ಣಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ನವೀನ ಸಾಸನೂರ ನಿರೂಪಿಸಿದರು.