ಗಗನ ಯಾತ್ರಿ ಸುನಿತಾ ಮರಳಿ ಭೂತಾಯಿ ಮಡಿಲಿಗೆ, ವಿದ್ಯಾರ್ಥಿಗಳಿಂದ ಸಂಭ್ರಮ

ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಸ್ಕೂಲ್ ಚಂದನದ ವಿದ್ಯಾರ್ಥಿಗಳು ಬುಧವಾರ ಶಾಲಾ ಅಂಗಳದಲ್ಲಿ ಸೇರಿ ಗಗನಯಾತ್ರಿಗಳು ಸುರಕ್ಷಿತವಾಗಿ ಭೂತಾಯಿ ಮಡಿಲಿಗೆ ಆಗಮಿಸಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದರು. ನೂರಾರು ಮಕ್ಕಳು ಸುನೀತಾ ಹಾಗೂ ಅವರ ಸಂಗಡಿಗ ಯಾತ್ರಿಗಳಿಗೆ ಶುಭಕೋರುವ ನಿಟ್ಟಿನಲ್ಲಿ ಪರಸ್ಪರ ಅಭಿನಂದಿಸಿ ಸುನೀತಾ ಅವರ ಹೆಸರಿನಲ್ಲಿ ಜಯಘೋಷಗಳನ್ನು ಮೊಳಗಿಸಿದರು.
ಶಾಲಾ ವಿದ್ಯಾರ್ಥಿಗಳು ೯ ತಿಂಗಳ ನಂತರ ಬಾಹ್ಯಾಕಾಶ ಗರ್ಭದಿಂದ ಭೂತಾಯಿಯ ಮಡಿಲಿಗೆ ಸೇರಿದ ಗಗನಯಾತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಸುನಿತಾ ಅವರು ಭೂಮಿಗೆ ಬರುತ್ತಿದ್ದಂತೆ, ಅವರು ಭೂಮಿಗೆ ಮರಳಿ ಬರುವಲ್ಲಿ ಕೈಗೊಂಡ ಆಪರೇಷನ್ ಯಶಸ್ವಿಯಾಗಿರುವದಕ್ಕೆ ಸ್ಕೂಲ್‌ಚಂದನದ ವಿದ್ಯಾರ್ಥಿಗಳು ತಮ್ಮ ಅSಖಔ (ಚಂದನ ಸ್ಪೇಸ್ ರಿಸರ್ಚ ಆರ್ಗನೈಸೇಶನ್) ಕೇಂದ್ರದಿಂದ ಅಭಿನಂದನೆಯನ್ನು ಸಲ್ಲಿಸಿ ಬಹಳ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು, ಸುನಿತಾ ವಿಲಿಯಮ್ಸ್ ಹಾಗೂ ಗಗನಯಾತ್ರಿಗಳ ಆರೋಗ್ಯ ಬೇಗನೆ ಭೂಮಿಗೆ ಹೊಂದಿಕೊಳ್ಳುವಂತಾಗಲಿ ಬೇಗನೆ ಗುಣಮುಖರಾಗಲಿ ಎಂದು ದೇವರನ್ನು ಪೂಜಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ನಾಸಾ, ಇಸ್ರೋ, ಸ್ಫೇಸ್ ಎಕ್ಸ ಸಂಸ್ಥೆಗೆ ಹಾಗೂ ಶ್ರಮಿಸಿದ ವಿಜ್ಞಾನಿಗಳಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸಿದರು. ಗಗನಯಾತ್ರಿಗಳ ಬಗ್ಗೆ ಧನತ್ಮಾಕವಾದ ವಿಚಾರಗಳನ್ನು ಉತ್ತಮವಾಗಿ ಪ್ರಚಾರ ಮಾಡಿದ ಮಾಧ್ಯಮಗಳಿಗೂ ಸಹ ಮಕ್ಕಳು ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *