ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ : ಡಾ. ಸಿದ್ದರಾಮ ಮಹಾಸ್ವಾಮಿಗಳು
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ ಕಾಯಕ ವ್ಯಾಪಾರ ಜನರಿಗೆ ಸೇವೆ ಮಾಡುವ ಕ್ಷೇತ್ರ ಎಂದು ಗದಗ-ಡಂಬಳದ ಮನ್ನಿರಂ ಜನ ಜಗದ್ಗುರು ಡಾ”ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಸರಾಫ ಬಜಾರ ಹತ್ತಿರ ನೂತನವಾಗಿ ಲಿಂಬಯ್ಯಸ್ವಾಮಿ ಸಮೂಹ ಸಂಸ್ಥೆಗಳ ನೂತನ,ಗ್ರಹ ಉಪಯೋಗಿ ಪಾತ್ರೆಗಳ ಬಂಡಾರ, ’ಲಿ ಮಾರ್ಟ್ ಕಿಚನ್ ವೇರ್ನ’ ಉದ್ಘಾಟಿಸಿ ಮಾತನಾಡುತ್ತ ಲಕ್ಷ್ಮೇಶ್ವರ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು ಜನರಿಗೆ ಒಂದೆ ಸೂರಿನಲ್ಲಿ ಸಿಗುವ ಹಾಗೆ ಮಳಿಗೆ ಹೊಂದಿದೆ, ದಿನನಿತ್ಯ ಕಾಯಕ ಮಾಡಿ ಯಾರು ಬದುಕುತ್ತಾರೆ ಅವರೇ ನಿಜವಾದ ಭಕ್ತರು, ಪರಿಶುದ್ಧ ಪ್ರಾಮಾಣಿಕವಾಗಿ ಕಾಯಕ ಮಾಡುವವರನ್ನು ದೇವರು ಸಹಿತ ಮೆಚ್ಚುತ್ತಾನೆ, ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಲಕ್ಷ್ಮಿಕೂಡ ಓಲೆಯುತ್ತಾಳೆ, ಯಾವುದೆ ಕಾಯಕ ಮಾಡಿದರು ಪರಿಶುದ್ಧ ವಾಗಿರಬೇಕು, ೧೨ನೇ ಶತಮಾನದಲ್ಲಿ ಪ್ರತಿಯೊಬ್ಬರು ಹಾಗೂ ಶರಣರು ಸಹಿತ ಕಾಯಕ ಮಾಡುತ್ತಿದ್ದರು ಅದಕ್ಕೆ ಅವರು ಶರಣರೆನಿಸಿಕೊಂಡರು, ಅದಕ್ಕೆ ಅಂದಿನ ಕಾಲದಲ್ಲಿ ಮನೆ ಬಾಗಿಲಿಗೆ ಬಾಗಿಲು ವಿದ್ದಿಲ್ಲ, ಕಳ್ಳ ಕಾಕರ ಕಾಟ ವಿದ್ದಿಲ್ಲ, ಯಾಕೆ ಎಂದರೆ ಪ್ರತಿಯೊಬ್ಬರು ದುಡಿತಾ ಇದ್ದರು, ಮನುಷ್ಯ ಎಷ್ಟು ಗಳಿಸುತ್ತಾನೆ ಎಂಬುದು ಮುಖ್ಯವಲ್ಲ ಎಷ್ಟು ಸಂತೋಷವಾಗಿ ಇರುತ್ತಾನೆ ಎಂಬುದು ಮುಖ್ಯ ಮನುಷ್ಯ ದುಡಿದ ಹಣದಲ್ಲಿ ಸ್ವಲ್ಪ ದಾಸೋಹಕ್ಕಾಗಿ ನೀಡಬೇಕು ಎಂದು ಹೇಳಿದರು.
ಅತಿಥಿಗಳಾಗಿ ಮಾಜಿ ಶಾಸಕ ಜಿ ಎಸ್ ಗಡ್ದದೇವರಮಠ, ಇದ್ದರು.
ಈ ಸಂದರ್ಭದಲ್ಲಿ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಆನಂದ ಗಡ್ಡದೇವರಮಠ, ಚಿದಾನಂದ ಲಿಂಬಯ್ಯಸ್ವಾಮಿಮಠ, ನಿರಂಜನ ಲಿಂಬಯ್ಯಸ್ವಾಮಿಮಠ, ಮಹೇಶ ಲಿಂಬಯ್ಯಸ್ವಾಮಿಮಠ, ಚಂದ್ರಣ್ಣ ಓದುನವರ, ಸುಭಾಸ ಓದುನವರ, ಬಸವರಾಜ ಬೆಂಡಿಗೇರಿ, ವಿರೂಪಾಕ್ಷಪ್ಪ ಪಡಗೇರಿ, ಗಿರೀಶ ತಟ್ಟಿ, ಚಂದ್ರು ಹಿರೇಮಠ, ವೀರಭದ್ರಯ್ಯ ಹಿರೇಮಠ, ಲಿಂಬಯ್ಯಸ್ವಾಮಿಮಠ ಕುಟುಂಬವರ್ಗದವರು, ಸಮೂಹ ಸಂಸ್ಥೆಗಳ ಸಿಬ್ಬಂದಿಗಳು, ಹಿತೈಷಿಗಳು ಇದ್ದರು.
