ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ : ಎಸ್. ಮಹೇಶ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಪ್ರಕ್ರಿಯೆ ಕರಡು ಸಿದ್ಧತಾ ಸಮಿತಿಯ ಅಧ್ಯಕ್ಷರೂ ಆಗಿದ್ದ ವೇಳೆಯಲ್ಲಿಯೇ ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರಿಕೆ ಎಂದು ಅವರು ನೀಡಿದ ಹೇಳಿಕೆ ಅಕ್ಷರಷಃ ಸತ್ಯವಾಗಿದೆ, ಏಕೆಂದರೆ ಕಾಂಗ್ರೆಸ್ ಅವರನ್ನು ಅಷ್ಟೊಂದು ಕೆಟ್ಟದಾಗಿ ನಡೆಸಿಕೊಂಡು ಸಾಕಷ್ಟು ನೋವು, ಅವಮಾನವನ್ನು ನೀಡಿತ್ತು ಎಂದು ಮಾಜಿ ಶಿಕ್ಷಣ ಸಚಿವ ಎನ್.ಮಹೇಶ ಹೇಳಿದರು.

ಅವರು ಶನಿವಾರ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೪ ನೇ ಜನ್ಮ ಜಯಂತಿ ಪ್ರಯುಕ್ತ ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ ಅಂಬೇಡ್ಕರ ಅವರ ಹೇಳಿಕೆ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
೧೯೪೮ ರಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದು, ಇದು ಆತುರದ ಅಥವಾ ನಿರ್ಲಕ್ಷ್ಯದ ಹೇಳಿಕೆ ಅಲ್ಲ. ಇದು ಪ್ರಜ್ಞಾಪೂರ್ವಕ, ಚಿಂತನೆಯಿoದ ನೀಡಿದ ಹೇಳಿಕೆ ಎಂದು ಹೇಳಬಹುದು ಎಂದರು. ಸಂವಿಧಾನವನ್ನು ತಿದ್ದಿ ಅವಮಾನಿಸಿದ್ದು ಕಾಂಗ್ರೆಸನವರೆ ಹೊರತು ಬಿಜೆಪಿಯವರು ಅಲ್ಲ ಕಾಂಗ್ರೆಸ್ನವರು ೭೫ ಬಾರಿ ತಿದ್ದುಪಡಿ ಮಾಡಿದ್ದಾರೆ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದು ಕಾಂಗ್ರೆಸನವರು, ಬಿಜೆಪಿ ಯವರು ಒಟ್ಟು ಅಟಲಜಿ ೧೪ ನರೇಂದ್ರ ಮೋದಿ ೮ ಬಾರಿ ಒಟ್ಟು ೨೨ ತಿದ್ದುಪಡಿಗಳನ್ನು ಮಾಡಿದ್ದು ಹಿಂದುಳಿದ ಪರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪರ ಮಾಡಿದ್ದಾರೆ. ಕಾಂಗ್ರೆಸ್ನವರು ಸಂವಿಧಾನವನ್ನು ತಿದ್ದುಪಡಿ ಮಾಡಿದರೂ ಸಹ ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡವರಿಗೆ ಏನು ಮಾಡಿಲ್ಲ ಇದರಿಂದ ಕಾಂಗ್ರೆಸ್ ಸಂವಿಧಾನವನ್ನು ತಿದ್ದಿ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ನಿರ್ಲಕ್ಷ ಧೋರಣೆ ತೋರಿದ್ದು ಅದು ಏಕೆ ಎನ್ನುವದನ್ನು ಜನರ ಮುಂದೆ ಇಡಬೇಕು, ಕಾಂಗ್ರೆಸ್ ಪಕ್ಷವು ತನ್ನ ನಾಯಕರಿಗೆ ಹಲವು ಬಾರಿ ಭಾರತ ರತ್ನ ನೀಡಿದೆ. ಆದರೆ ಬಾಬಾ ಸಾಹೇಬರವರಿಗೆ ನೀಡಲಾಗಲಿಲ್ಲ ಏಕೆಂದರೆ ಅವರ ಮೇಲೆ ಕಾಂಗ್ರೆಸ್ಗೆ ಯಾವುದೇ ರೀತಿ ಪ್ರೀತಿ, ಗೌರವ ಇರಲಿಲ್ಲ, ೧೯೯೦ರ ವರೆಗೂ ಬಾಬಾ ಸಾಹೇಬರಿಗೆ ಭಾರತ ರತ್ನ ಸಿಕ್ಕಿರಲಿಲ್ಲ, ಇದು ಅಂಬೇಡ್ಕರರ ಬಗೆಗಿನ ನೆಹರೂ ಮತ್ತು ಕಾಂಗ್ರೆಸ್? ಪಕ್ಷದ ದ್ವೇಷವನ್ನು ಪ್ರಸ್ತುತ ಪಡಿಸುತ್ತದೆ ಎಂದರು. ಕಾಂಗ್ರೆಸ್ ಸರಕಾರವು ಮೊದಲಿನಿಂದಲೂ ಜನರಿಗೆ ಸುಳ್ಳು ಹೇಳುತ್ತಾ ಬಂದಿದೆ. ಜೈ ಭೀಮ್ ಎಂದು ಹೇಳುವ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹೇಳಿದರು. ಭಾರತೀಯ ಜನತಾ ಪಾರ್ಟಿ ಡಾ.ಬಿ.ಆರ್.ಅಂಬೇಡ್ಕರವರ ವಿಚಾರ-ಹೋರಾಟಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಎಪ್ರೀಲ್೧೪ ರಿಂದ ಏ.೨೫ ರ ವರೆಗೆ ವಿಚಾರಗೋಷ್ಠಿ ಯಾತ್ರೆ ಕೈಗೊಂಡಿದೆ ಎಂದರು.
ಹಿರಿಯ ಮುಖಂಡ ಡಾ.ಕ್ರಾಂತಿಕಿರಣ ಮತ್ತು ಪರಿವಾರದ ಪ್ರಮುಖ ವಾದಿರಾಜ್ ಮಾತನಾಡಿ ಕಾಂಗ್ರೆಸ್ ಪಕ್ಷವು ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರವೂ ಅಂಬೇಡ್ಕರರಿಗೆ ಮತ್ತು ದಲಿತರಿಗೆ ನಿರಂತರವಾಗಿ ಮೋಸ ಮಾಡುತ್ತಾ ಬರುತ್ತಿದೆ, ದಲಿತರನ್ನು ಅವತ್ತು ಮತಬ್ಯಾಂಕ್ ಆಗಿ ಬಳಸಿಕೊಂಡು, ಅದೇ ಚಾಳಿಯನ್ನು ಇವತ್ತಿಗೂ ಮುಂದುವರೆಸಿದೆ ಎಂದು ಆರೋಪಿಸಿದರು. ದಲಿತ ಸಮುದಾಯ ಮತ್ತು ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಕುರಿತು ಜಾಗೃತಿ ಮೂಡಿಸಲಿದ್ದೇವೆ ಕಾಂಗ್ರೆಸ್ ನವರ ಸುಳ್ಳು ಕಥೆ ಗಳಿಗೆ ಸತ್ಯ ಘಟನೆ ಹೇಳಲು ಬಿಜೆಪಿ ಹೊರಟಿದೆ ಕಾಂಗ್ರೆಸ್ ನವರಿಂದ ಜನರಿಗೆ ಅನ್ಯಾಯ ವಾಗಿದೆ ಅದನ್ನು ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು, ಶಾಸಕ ಡಾ.ಚಂದ್ರು ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಹಿರಿಯ ಮುಖಂಡರಾದ ರವಿ ದಂಡಿನ್, ನವೀನ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ, ಮೋಹನ್ ಗುತ್ತೆಮ್ಮನವರ, ಗಿರೀಶ ಚವರಡ್ಡಿ ಜಾನು ಲಮಾಣಿ ನಾಗರಾಜ ಲಕ್ಕುಂಡಿ,ಮುಂತಾದವರಿದ್ದರು. ಮಂಡಳ ಕಾರ್ಯದರ್ಶಿ ಅನಿಲ ಮುಳಗುಂದ ಸ್ವಾಗತಿಸಿದರು. ಪ್ರವೀಣ ಪಾಟೀಲ ನಿರೂಪಿಸಿದರು.