ಕಪ್ಪು ಬಟ್ಟೆ ಕಟ್ಟಿಕೊಂಡು ಪತ್ರಿಕಾ ವಿತರಕರಿಂದ ಮೌನಾಚರಣೆ

ಕಪ್ಪು ಬಟ್ಟೆ ಕಟ್ಟಿಕೊಂಡು ಪತ್ರಿಕಾ ವಿತರಕರಿಂದ ಮೌನಾಚರಣೆ
ವೀರಮಾರ್ಗ ನ್ಯೂಸ್ ಗದಗ :
ಜಿಲ್ಲಾ ಪತ್ರಿಕಾ ವಿತರಕರಿಂದ ಏ೨೫ ರಂದು ಬೆಳಗ್ಗೆ ಪಹಲ್ಗಾಮ್ ಉಗ್ರರ ದಾಳಿಗೆ ಹತ್ಯೆಯಾದವರ ಆತ್ಮಕ್ಕೆ ಶಾಂತಿಗಾಗಿ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನಾಚರಣೆ ಮಾಡುವುದರ ಮೂಲಕ ಭಯೋತ್ಪಾದಕರ ಅಟ್ಟಹಾಸ ಮಟ್ಟ ಹಾಕಲು ಕೇಂದ್ರಕ್ಕೆ ಮನವಿ ಮಾಡಿದರು.
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ವೀರಯ್ಯ ವಿರಕ್ತಮಠ ಅವರು ಮಾತನಾಡಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿಗೆ ಹತ್ಯೆಯಾದ ಕುಟುಂಬದವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ಅಮಾಯಕರ ಹತ್ಯೆಗೆ ಕಾರಣರಾಗಿರುವ ಉಗ್ರಗಾಮಿಗಳು ಕೇಂದ್ರ ಸರ್ಕಾರವು ಕಠಿಣ ಶಿಕ್ಷೆಯನ್ನು ವಿಧಿಸಲಿ ಎಂದು ಹೇಳಿದರು.

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷರಾದ ಶಂಕರ್ ಕುದುರಿಮೊತಿ ಅವರು ಮಾತನಾಡಿ, ಉಗ್ರಗಾಮಿಗಳ ದಾಳಿಯನ್ನು ನಮ್ಮ ಸಂಘದ ವತಿಯಿಂದ ತೀವ್ರವಾಗಿ ಖಂಡಿಸುತ್ತಾ ದಾಳಿ ಮಾಡಿದ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆ ವಿಧಿಸಲಿ ಎಂದು ಹೇಳಿದರು.
ಪತ್ರಿಕಾ ವಿತರಕರ ಸಂಘದಿಂದ ಮೇಣದ ಬತ್ತಿಯನ್ನು ಬೆಳಗಿಸುವದರ ಮೂಲಕ ಮೌನಾಚರಣೆ ಮಾಡುವುದರೊಂದಿಗೆ ದಿನ ನಿತ್ಯದ ಕಠಿಣ ಕಾಯಕದಲ್ಲೂ ಮಾನವೀಯತೆ ಮೆರೆಯದ ಪತ್ರಿಕಾ ವಿತರಕರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂಘದ ಎಲ್ಲಾ ಪದಾಧಿಕಾರಿಗಳು ಪತ್ರಿಕಾ ವಿತರಕರು ಉಪಸ್ಥಿತರಿದ್ದರು.