ಪೊಲೀಸ್ ಆಯುಕ್ತರಿಗೆ ಸನ್ಮಾನ.

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ ಸವಿತಾ ಸಮಾಜದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರಿಗೆ ಸನ್ಮಾನ

ಹುಬ್ಬಳ್ಳಿ, : ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಎಲ್ಲ ನಾಗಿಕರ ಹಿತಕಾಯುತ್ತಿರುವ ನ್ಯಾಯಪರ, ಬಡವರ ಪರವಾಗಿರುವ ದಕ್ಷ ಹಾಗೂ ಪ್ರಾಮಾಣಿಕರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಸರ್ ಅವರಿಗೆ ಗದಗ ಜಿಲ್ಲದ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಗದಗದಿಂದ ಹುಬ್ಬಳ್ಳಿಗೆ ಸವಿತಾ ಸಮಾಜದ ನಿಯೋಗವು ತೆರಳಿ ಹುಬ್ಬಳ್ಳಿಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಗೆಯಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಸರ್ ಅವರನ್ನು ಬೇಟಿಯಾಗಿ ಅಭಿಮಾನದ ಮಾತುಗಳನ್ನಾಡಿ ಅವರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ
ಸಮಾಜದಿಂದ ಗೌರವಗಳೊಂದಿಗೆ ಸನ್ಮಾನಿಸಿ ಅಭಿನಂದಿಸಿ ಶುಭ ಕೊರಲಾಯಿತು
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಗದಗ ಜಿಲ್ಲಾ ಸವಿತಾ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ನಗರದ ಮಹಾಜನತೆಯ ಹಿತಕಾಯುವಂತಹ ಸೇವೆ ನಮ್ಮ ಆದ್ಯ ಕರ್ತವ್ಯ ಮತ್ತು ಪ್ರತಿಯೊಬ್ಬರಲ್ಲೂ ಪರೋಪಕಾರ, ತ್ಯಾಗ ಮನೋಭಾವನೆ. ಸೌಹಾರ್ದತೆಯಿಂದ ಬದುಕುವ ಗುಣಗಳ ಅಗತ್ಯವಿದೆ. ಅದೇ ರೀತಿ ಸವಿತಾ ಸಮಾಜ ಆರ್ಥಿಕವಾಗಿ, ಸಾಮಾಜಿಕ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದ ಪ್ರಗತಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಹೇಳಿದರು.

ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್.ಹಡಪದ ಪ್ರಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಸವಿತಾ ಸಮಾಜದ ಹಿರಿಯ ಮುಖಂಡರಾದ ಹನಮಂತಪ್ಪ ರಾಂಪೂರ. ಪರಶುರಾಮ (ಬಜ್ಜು) ರಾಂಪೂರ. ಕೃಷ್ಣಾ ಬಾಯಲಗುಡ್ಡ. ಬಾಲರಾಜ ಕೊಟೇಕಲ್ಲ. ಪರಶುರಾಮ ಕೊಟೇಕಲ್ಲ. ಆಂಜನೈಯ್ಯ ಆದೋನಿ. ರಮೇಶ ರಾಂಪೂರ. ಸುರೇಶ ಬುದೂರ. ಹೇಮಂತ ವಡ್ಡೆಪಲ್ಲೆ. ಕೀರಣ ರಾಂಪೂರ. ಶ್ರೀನಿವಾಸ ಕೊಟೇಕಲ್ಲ. ಯುವ ಮುಖಂಡರಾದ ಅರೂಣ ರಾಂಪೂರ. ಪರಶುರಾಮ ಆದೋನಿ. ವೆಂಕಟೇಶ ಕೊಟೇಕಲ್ಲ. ಸಾಗರ ಹಡಪದ. ವಿನೋದ ಕಡಿಮೆಟ್ಲು. ವೆಂಕಟೇಶ ಆದೋನಿ. ಕಾರ್ತಿಕ ಆಗಲಾವೆ. ಸುದೀಪ ವಡ್ಡೆಪಲ್ಲೇ. ಸಂದೀಪ ಕೊಟೇಕಲ್ಲ. ಗಣೇಶ ಆಗಲಾವೆ. ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಗುರು-ಹಿರಿಯರು ಹಾಗೂ ಸುಮಾರು 50ಕ್ಕೂ ಹೆಚ್ಚು ಸಮಾಜ ಬಾಂದವರು ಉಪಸ್ಥಿತರಿದ್ದರು.

ಬರಹ : ಕೃಷ್ಣಾ ಎಚ್ ಹಡಪದ.