ಗುಡಗೂರು ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರದ ಹಾಗೂ ಅಗ್ನಿಶಾಮಕದಳದಿಂದ ಅಣಕು ಪ್ರದರ್ಶನ
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25ರ ದಿನಾಂಕ 27.04.2025

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ : ಬಿಎ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ರಾಣೆಬೆನ್ನೂರು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25ರ ಎರಡನೆಯ ದಿನವಾದ ಇಂದು ದಿನಾಂಕ 27-4-2025 ರಂದು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ದತ್ತು ಗ್ರಾಮದ ಪಂಚಾಯತ್ ಆವರಣದಲ್ಲಿ ಅಗ್ನಿಶಾಮಕ ಠಾಣೆ ರಾಣೇಬೆನ್ನೂರು ಇವರಿಂದ ಸಹಯೋಗದಲ್ಲಿ ಅಡುಗೆ ಅನಿಲ ಸೋರುವಿಕೆ, ಬೆಂಕಿ ಸಂಭವಿಸಿದಾಗ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅನುಕು ಪ್ರದರ್ಶನ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಶ್ರೀ ವೀರೇಶ್ ತೆಗ್ಗಿನ, ಸಹ ಠಾಣಾಧಿಕಾರಿ ಶ್ರೀವಿ.ಎಸ್. ಸಂಕ ಶ್ರೀ ಪರಮೇಶ್ವರ ಎಚ್ ಹಾಗೂ ಅಗ್ನಿಶಾಮಕದಳದ ಇತರ ಸಿಬ್ಬಂದಿಯವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಕಾರ್ಯಕ್ರಮದ ಮೇಲ್ವಿಚಾರಕರಾಗಿ ಪ್ರೊ.ಪೃಥ್ವಿರಾಜ ಕಟ್ಟಿಮನಿ,

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಘಟಕ-1 ಡಾ. ಪುಷ್ಪಾಂಜಲಿ ಎಂ ಕಾಂಬಳೆ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಘಟಕ-2 ಪ್ರೊ ಸಂತೋಷ ಬಜಂತ್ರಿ ಪ್ರೊ.ಬೀರಪ್ಪ ಲಮಾಣಿ ಹಾಗೂ ಎಲ್ಲ ಶಿಬಿರಾರ್ಥಿಗಳು ಭಾಗವಹಿಸಿದ್ದರು.