ಹೇಳಿಕೆ ಖಂಡಿಸಿ ಕಮಲ್ ಹಾಸನ್ ಅವರು ಕನ್ನಡಿಗರ ಕುರಿತು ಕ್ಷೇಮೆ ಯಾಚಿಸಬೇಕು

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ಅವರು ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆ ಖಂಡಿಸಿ ಕಮಲ್ ಹಾಸನ್ ಅವರು ಕನ್ನಡಿಗರ ಕುರಿತು ಕ್ಷೇಮೆ ಯಾಚಿಸಬೇಕು.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ಜಾಧವ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ರಾಣೇಬೆನ್ನೂರ ತಾಲೂಕ ದಂಡಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರರಾದ ಕವಲಯ ಶಾಮ ಗೊರವರ ಇವರ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಕಮಲ್ ಹಾಸನ್ ಅವರು ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆ ಖಂಡಿಸಿ ಕಮಲ್ ಹಾಸನ್ ಅವರು ಕನ್ನಡಿಗರ ಕುರಿತು ಕ್ಷೇಮೆ ಯಾಚಿಸಬೇಕು ಎಂದು ಮನವಿ ಪತ್ರ ನೀಡಲಾಯಿತು.

ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ಜಾಧವ ಅವರು ಮಾತನಾಡಿ ಕನ್ನಡ ಭಾಷೆ ತಮಿಳು ನಿಂದ ಹುಟ್ಟಿದೆ ಎಂದು ತಮಿಳು ನಟ ಕಮಲಹಾಸನ್ ಶನಿವಾರ ಮೇ 24 ಚೆನ್ನೈನಲ್ಲಿ ನಡೆದ ಥಗ್ ಲೈಫ್ ಚಿತ್ರದ ದ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿರುವ ಅಶಬ್ದ ಹೇಳಿಕೆ ಹಿಂಪಡೆದು ಕನ್ನಡಿಗರನ್ನು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಶುಕ್ರವಾರ ಜೂನ್ ಆರು ಥಗ್ ಲೈಫ್ ಚಿತ್ರವನ್ನು ಖಂಡಿಸಿ ರಾಜ್ಯಾದ್ಯಂತ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವಕ್ತಪಡಿಸಿದರು

ನಂತರ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಮಾತನಾಡಿ ರಾಜ್ಯಾದ್ಯಂತ ಇರುವ ಎಲ್ಲಾ ಕನ್ನಡ ಪರ ಸಂಘಟನೆ ಅವರು ಕಮಲ್ ಹಾಸನ್ ಅವರು ಒಬ್ಬ ನಟನಾಗಿ ಇಂತ ಮಾತು ಆಡಬಾರದು ಇದು ಅವರು ವಕ್ತಿತ್ವಕ್ಕೆ ಮುಜುಗರ ಅವರಿಗೆ ಬಹಿರಂಗವಾಗಿ ಕನ್ನಡಿಗರು ಎಚ್ಚರಿಕೆ ನೀಡುತ್ತೇವೆ ಆದ ಕಾರಣ ಕೂಡಲೇ ಕಮಲಹಾಸನ್ ಕ್ಷಮೆ ಕೇಳಬೇಕು ಇಲ್ಲವಾದರೆ ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಮಾತನಾಡಿದರು

ನಂತರ ರಾಜ್ಯ ಸಂಚಾಲಕರು ಮಲ್ಲಿಕಾರ್ಜುನ ಸಾವಕ್ಕಳವರ ಮಾತನಾಡಿ ಅಷ್ಟಕ್ಕೂ ಕಮಲ್ ಗೆ ತಮಿಳಿನ ಮೇಲಿರುವುದು ಅಭಿಮಾನವೂ ದುರಾಭಿಮಾನವು ಗೊತ್ತಿಲ್ಲ ಅವರ ಭಾಷೆಯ ಬಗ್ಗೆ ಅವರೇನು ಬೇಕಾದರೂ ಹೇಳಿಕೊಳ್ಳಲಿ ಆದರೆ ಕನ್ನಡ ತಮಿಳುನಿಂದ ಹುಟ್ಟಿದ್ದು ಎಂದಿರುವುದು ಅವರಿಗಿರುವ ಮಾಹಿತಿ ಕೊರತೆ ಎಂದು ಎದ್ದು ತೋರಿಸುತ್ತದೆ ಕನ್ನಡಕ್ಕೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ ರಾಜಕೀಯ ಪಕ್ಷ ಕಟ್ಟಿರುವ ಕಾರಣ ತಮ್ಮ ಬಾಯಿ ಚಪಲಕ್ಕೆ ಹೀಗೆ ಹೇಳಿಕೆ ನೀಡಿರಬಹುದು ಕನ್ನಡ ವಿಚಾರಕ್ಕೆ ಅಂತ ಬಂದರೆ ಯಾವುದೇ ಕಾರಣಕ್ಕೂ ನಾವು ಕನ್ನಡಿಗರು ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮನವಿ ಪತ್ರ ನೀಡಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕರ ಅಧ್ಯಕ್ಷರು ಆದ ಪರಶುರಾಮ ಕುರುವತ್ತಿ ರಿಯಾಜ್ ದೊಡ್ಡಮನಿ ಮೃತುಂಜಯ ಕರಿಯಜ್ಜಿ ಗೋಪಿ ಕುಂದಾಪುರ ಶೋಭಾ ಮುದೇನೂರು ಮರಡೆಪ್ಪ ಚಳಗೇರಿ ಅಬ್ದುಲ್ ಎನ್ ಕೆ ನಿಂಗಪ್ಪ ಹೊನ್ನಪ್ಪ ಮಾರುತಿ ಮಳಿಯಮ್ಮನವರ ದಿವಾಕರ್ ಅಮರ್ವಾನ್ ರೇಖಾ ಬನ್ನಿಕೊಪ್ಪ ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.