ಮುಸ್ಲಿಂ ಯುವಕರಿಂದ ಖಾನಾವಳಿ ಮಾಲೀಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

ಮುಸ್ಲಿಂ ಯುವಕರಿಂದ ಖಾನಾವಳಿ ಮಾಲೀಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ
ಹೊಟ್ಟೆಗೆ ಅನ್ನಹಾಕಿದ ಮನೆಗೆ ಕನ್ನಹಾಕುತ್ತಿರುವ ದುಷ್ಟರ ಅಟ್ಟಹಾಸ : ಪ್ರಮೋದ ಮುತಾಲಿಕ

ವೀರಮಾರ್ಗ ನ್ಯೂಸ್ ಸವಣೂರ :
ಪಟ್ಟಣದ ಎ.ಪಿ.ಎಂ.ಸಿ ಮುಂಭಾಗದಲ್ಲಿರುವ ಸಂಗಮೇಶ್ವರ ಖಾನಾವಳಿಯಲ್ಲಿ ಕಳೆದ ಮಂಗಳವಾರ ರಾತ್ರಿ ಮೂವರು ಮುಸ್ಲಿಂ ಯುವಕರು ಊಟಮಾಡಿ, ಹಣ ನೀಡದೇ ಹೋರಟಾಗ, ಖಾನಾವಳಿ ಮಾಲೀಕ ಮೃತ್ಯುಂಜಯ ಕನವಳ್ಳಿಮಠ ತಡೆದು ಊಟದ ಬಿಲ್ಲ ಕೇಳಿದಾಗ ಆತನ ಮೇಲೆ ಮಾರಣಾಂತಿಕ ಹಲ್ಲೆನಡೆಸುವ ಸಂದರ್ಭದಲ್ಲಿ, ಬಿಡಿಸಲು ಬಂದ ಮಾಲೀಕನ ತಾಯಿ, ಪತ್ನಿ, ಮಗನ ಮೇಲೂ ಕೂಡಾ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮುಸ್ಲೀಂ ಯುವಕರಿಂದ ಹಲ್ಲೆಗೋಳಗಾದ ಕುಟುಂಬದವರಿಗೆ ಪ್ರಮೋದ ಮುತಾಲಿಕ ಸಾಂತ್ವನ ಹೇಳಿದರು.

ಈ ಹಿನ್ನಲೆಯಲ್ಲಿ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹಲ್ಲೆಗೋಳಗಾದ ಖಾನಾವಳಿ ಮಾಲೀಕರ ಮನೆಗೆ ಬೇಟಿನೀಡಿ, ಬಯದ ವಾತಾವರಣದಲ್ಲಿ ನಲುಗುತ್ತಿದ್ದ ಕುಟುಂಬದವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿದರು. ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಸಿಸಿ ಮಾತನಾಡಿದ ಮುತಾಲಿಕ ರವರು, ಹಸಿದ ಹೊಟ್ಟೆಗೆ ಅನ್ನಹಾಕಿದ ಮನೆಗೆ ಕನ್ನಹಾಕುತ್ತಿರುವ ದುಷ್ಟರ ಅಟ್ಟಹಾಸವನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ನೀಷ್ಕ್ರೀಯಗೋಂಡಿರುವುದು ಖೇದಕರ ಸಂಗತಿಯಾಗಿದೆ. ಹಾನಗಲ್ ನಾಕರಕ್ರಾಸ್‌ನಲ್ಲಿ, ಗ್ಯಾಂಗ್ ರೇಪ್ ಮಾಡಿದ ಆರೋಪಿಗಳಿಗೆ ಜಾಮೀನು ಸಿಕ್ಕಾಗ ವಿಜಯೋತ್ಸವ ಆಚರಿಸಿರುವುದು ಸಮಾಜ ತಲೆ ತಗ್ಗಿಸುವಂತ ವಿಚಾರವಾಗಿದೆ. ಇಂತಹ ಘೋರಕೃತ್ಯಗಳ ಮಧ್ಯ ಜೀವನ ನಿರ್ವಹಣೆಗೆ ಸಣ್ಣ ಖಾನಾವಳಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ, ಕುಟುಂಬದವರ ಮೇಲೆ ಊಟಮಾಡಿದ ಬಿಲ್ಲ ಕೇಳಿದಾಗ ಮಾರಣಾಂತಿಕ ಹಲ್ಲೇ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ, ಇಂತಹ ಗಂಭಿರ ಘಟನೆಯಲ್ಲಿ ಪೊಲೀಸ್ ಇಲಾಖೆ ದುಷ್ಟ, ರೌಡಿಗಳನ್ನು ಬಂಧಿಸುವಲ್ಲಿ ನಿಷ್ಕಾಳಜಿ ತೋರಿರುವುದು. ಜಿಲ್ಲಾಡಳಿತ ನೀಷ್ಕ್ರೀಯ ಗೋಂಡಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ವಿಷಯವನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸಲಿದೆ. ಹಲ್ಲೆಮಾಡಿದ ಅಲ್ಲಾವುದ್ದೀನ, ಆಶ್ಫಾಕ, ಫರಾಜ್ ಗುಂಡಾಗಳ ಮೇಲೆ ಪೊಲೀಸ್ ಇಲಾಖೆ ಸಾಧಾರಣ ಕೇಸ ದಾಖಲಿಸಿರುವುದು ನೋವು ತಂದಿದೆ. ಕೂಡಲೇ ಅವರ ಮೇಲೆ ಮರ್ಡರ ಕೇಸ್ ದಾಖಲಿಸಬೇಕು. ಇಲ್ಲದೇ ಹೋದರೆ ಶ್ರೀರಾಮ ಸೇನೆ ನೇತೃತ್ವದಲ್ಲಿ ಊಘ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

* ಊಟಮಾಡಿದ ಹಣ ಕೊಡಲು ಇಲ್ಲದಿದ್ದರೆ, ಹೇಳಿ ಹೋಗಬಹುದಿತ್ತು. ಅದನ್ನು ಬಿಟ್ಟು ಹಲ್ಲೆಗೆ ಮುಂದಾಗಿರುವುದು. ನೋವುತಂದಿದೆ. ಜಗಳ ಬಿಡಿಸಲು ಹೋದ ನನ್ನನ್ನು ಹಾಗು ನನ್ನ ಸೊಸೆಯನ್ನು ದೂಡಿ ಮನೆಯ ವಳಗೆ ಹೊಕ್ಕು ರಾಕ್ಷಸ ಪ್ರವೃತ್ತಿ ಮೇರೆದಿದ್ದಾರೆ. ಕುಟುಂಬದವರು ಜೀವ ಬಯದಲ್ಲಿ ಬದುಕುವಂತಾಗಿದೆ.
ಸುಶೀಲವ್ವ ಕನವಳ್ಳಿಮಠ ಮಾಲೀಕನ ವೃದ್ದತಾಯಿ.
ಶ್ರೀರಾಮಸೇನೆಯ ಗದಿಗೇಪ್ಪ ಕುರವತ್ತಿ, ಮಹೆಶ ಮುದಗಲ್ಲ, ಮಹೆಶ ಅಯ್ಯಣ್ಣವರ, ಪರಪ್ಪ ಅರಳಿಕಟ್ಟಿ, ನಾಗರಾಜ ಅರಳಿಕಟ್ಟಿ, ಸೋಮು ಲಮಾಣಿ, ಮಂಜುನಾಥ ಕಾಟೇಕರ, ಪ್ರಾಣೇಶ ವ್ಯಾಪಾರಿ, ಅಶೋಕ ಬಳಿಗಾರ, ಫಕ್ಕೀರೇಶ ಕಾಳೆ, ಅಭಿಷೇಕ ಅಕ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.